ಏಶ್ಯನ್‌ ಚಾಂಪಿಯನ್‌ ಕತಾರ್‌ಗೆ ಭಾರತ ತಡೆ


Team Udayavani, Sep 12, 2019, 5:43 AM IST

asian-champion

ದೋಹಾ (ಕತಾರ್‌): ಫಿಫಾ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ಏಶ್ಯ ವಿಭಾಗದ ಅರ್ಹತಾ ಕೂಟದಲ್ಲಿ ಭಾರತ ಬಲಿಷ್ಠ ಕತಾರ್‌ ತಂಡವನ್ನು ಅವರದೇ ಅಂಗಳದಲ್ಲಿ ಹಿಡಿದು ನಿಲ್ಲಿಸಿದೆ. ಮಂಗಳವಾರ ರಾತ್ರಿ ದೋಹಾದ “ಜಾಸಿಮ್‌ ಬಿನ್‌ ಹಮದ್‌ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯ ಯಾವುದೇ ಗೋಲಿಲ್ಲದೆ ಡ್ರಾಗೊಂಡಿದೆ.

ಭಾರತದ ಈ ಸಾಹಸಕ್ಕಾಗಿ ಕೋಚ್‌ ಐಗರ್‌ ಸ್ಟಿಮಾಕ್‌, ನಾಯಕ ಸುನೀಲ್‌ ಚೆಟ್ರಿ ಭಾರೀ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕತಾರ್‌ ಕಳೆದ ಜನವರಿಯಲ್ಲಷ್ಟೇ ಏಶ್ಯನ್‌ ಫ‌ುಟ್ಬಾಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಭಾರತದೆದುರು ಗೆಲ್ಲುವ ನೆಚ್ಚಿನ ತಂಡವಾಗಿತ್ತು.

ಈ ಪಂದ್ಯದಲ್ಲಿ ಭಾರತ ಸುನೀಲ್‌ ಚೆಟ್ರಿ ಸೇವೆಯಿಂದ ವಂಚಿತವಾಗಿತ್ತು. ಜ್ವರದಿಂದಾಗಿ ಅವರು ಆಡಲಿಳಿದಿರಲಿಲ್ಲ. ಒಟ್ಟಾರೆಯಾಗಿ ಭಾರತ ಈ ಪಂದ್ಯಕ್ಕಾಗಿ 4 ಬದಲಾವಣೆ ಮಾಡಿತ್ತು.

ಎರಡಂಕಕ್ಕೆ ಶ್ರಮಿಸಬೇಕು
“ಕಳೆದ ಒಮಾನ್‌ ವಿರುದ್ಧದ ಸೋಲಿನ ಬಗ್ಗೆ ನಾನು ಚಿಂತಿಸುತ್ತ ಕೂರಲಿಲ್ಲ. ಅಷ್ಟು ಸಮಯವೂ ಇರಲಿಲ್ಲ. ಆದರೀಗ ಏಶ್ಯನ್‌ ಚಾಂಪಿಯನ್‌ ಕತಾರ್‌ ವಿರುದ್ಧ ಡ್ರಾ ಸಾಧಿಸಿದ್ದರಿಂದ ಬಹಳ ಖುಷಿಯಾಗಿದೆ. ಆದರೆ ನಾವು ವಿಶೇಷವಾಗಿ ಹಾರುವ ಅಗತ್ಯವಿಲ್ಲ. ಮುಂದಿನ ಪಂದ್ಯಗಳಲ್ಲಿ ಎರಡಂಕ ಪಡೆಯಲು ಶ್ರಮಿಸಬೇಕು’ ಎಂದು ಕೋಚ್‌ ಸ್ಟಿಮಾಕ್‌ ಹೇಳಿದರು.
“ಬಹಳಷ್ಟು ವಿಭಾಗಗಳಲ್ಲಿ ನಾವು ಸುಧಾರಿತ ಪ್ರದರ್ಶನ ನೀಡಬೇಕಿದೆ.

ಇಂದಿನ ಯಶಸ್ಸು ನಮ್ಮೆಲ್ಲ ಆಟಗಾರರಿಗೆ ಸಲ್ಲುತ್ತದೆ. ಇದಕ್ಕಾಗಿ ಹೆಮ್ಮೆಯಾಗುತ್ತಿದೆ. ಆದರೆ ನಾನು ತಂಡಕ್ಕೆ ನೀಡುವ ಸಂದೇಶ ಇಷ್ಟೇ, ಒಂದೇ ಅಂಕಕ್ಕೆ ತೃಪ್ತಿಪಡಬೇಡಿ. ಇದನ್ನು ಎರಡಕ್ಕೆ ಏರಿಸಲು ಪ್ರಯತ್ನಿಸಿ…’ ಎಂಬುದಾಗಿ ಸ್ಟಿಮಾಕ್‌ ಹೇಳಿದರು.

ನಡೆಯದ ಕತಾರ್‌ ಆಟ
ಈ ಪಂದ್ಯದಲ್ಲಿ ಕತಾರ್‌ಗೆ ಹೆಚ್ಚಿನ ಅವಕಾಶ ಲಭಿಸಿತ್ತು. ಆದರೆ ಭಾರತ ಇದೆಲ್ಲದಕ್ಕೂ ತಡೆಯೊಡ್ಡಿತು. ಹಾಗೆಯೇ ಭಾರತಕ್ಕೂ ಕೆಲವು ಅವಕಾಶಗಳು ಎದುರಾದವು. ಆದರೆ ಇದರಲ್ಲಿ ಯಶಸ್ಸು ಸಿಗಲಿಲ್ಲ. ಉಸ್ತುವಾರಿ ನಾಯಕನೂ ಆಗಿದ್ದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಕತಾರ್‌ ಆಕ್ರಮಣವನ್ನು ಯಶಸ್ವಿಯಾಗಿ ತಡೆದರು.

ಮೊದಲ 10 ನಿಮಿಷದಲ್ಲೇ ಕತಾರ್‌ 2 ಅವಕಾಶ ಪಡೆದು ಮುನ್ನುಗ್ಗಲು ಪ್ರಯತ್ನಿಸಿತ್ತು. ದ್ವಿತೀಯಾರ್ಧದಲ್ಲಿ ಭಾರತೀಯರ ಆಟ ಹೆಚ್ಚು ಚುರುಕುಗೊಂಡಿತು. ಆದರೆ ಇತ್ತಂಡಗಳಿಗೂ ಗೋಲಿನ ಖಾತೆ ತೆರೆಯಲಾಗಲಿಲ್ಲ.

ಮುಂದಿನ ಎದುರಾಳಿ ಬಾಂಗ್ಲಾ
ಭಾರತ ತನ್ನ ಮುಂದಿನ ವಿಶ್ವಕಪ್‌ ಅರ್ಹತಾ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಅ. 15ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಸ್ಪರ್ಧೆ ಕೋಲ್ಕತಾದಲ್ಲಿ ನಡೆಯಲಿದ್ದು, ತವರಿನ 80 ಸಾವಿರ ವೀಕ್ಷಕರ ಮುಂದೆ ಆಡುವುದನ್ನು ತಾನು ಕಾತರದಿಂದ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಐಗರ್‌ ಸ್ಟಿಮಾಕ್‌.

ಡಿಯರ್‌ ಇಂಡಿಯಾ, ಇದು ನನ್ನ ತಂಡ. ಇವರೆಲ್ಲ ನನ್ನ ಹುಡುಗರು. ಈ ಕ್ಷಣದಲ್ಲಿ ನನಗೆ ಅದೆಷ್ಟು ಹೆಮ್ಮೆಯಾಗಿದೆ ಎಂಬುದನ್ನು ಬಣ್ಣಿಸಲಾಗುತ್ತಿಲ್ಲ. ಅಂಕಿಅಂಶದಂತೆ ಇದೇನೂ ದೊಡ್ಡ ಫ‌ಲಿತಾಂಶವಲ್ಲ. ಆದರೆ ನಾವು ನೀಡಿದ ಭಾರೀ ಹೋರಾಟಕ್ಕೆ ಸಂದ ದೊಡ್ಡ ಯಶಸ್ಸು ಇದಾಗಿದೆ. ಇದರ ಶ್ರೇಯಸ್ಸು ಕೋಚಿಂಗ್‌ ಸಿಬಂದಿಗಳಿಗೆ ಸಲ್ಲಬೇಕು.
-ಸುನೀಲ್‌ ಚೆಟ್ರಿ

ಟಾಪ್ ನ್ಯೂಸ್

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.