ಅಂಡರ್ 19 ವಿಶ್ವಕಪ್ ಸೆಮಿಫೈನಲ್: ‘ಯಶಸ್ವೀ’ ಶತಕದ ಚೇಸಿಂಗ್: ಪಾಕಿಸ್ಥಾನಕ್ಕೆ 10ವಿಕೆಟ್ ಸೋಲು

ಭರ್ಜರಿ ಅಜೇಯ ಶತಕ ದಾಖಲಿಸಿ ಬೌಲಿಂಗ್ ನಲ್ಲೂ ಮಿಂಚಿದ ಯಶಸ್ವೀ ಜೈಸ್ವಾಲ್ ಪಂದ್ಯಶ್ರೇಷ್ಠ

Team Udayavani, Feb 4, 2020, 8:24 PM IST

Yahsashwee-730

ಪೊಚೆಫ್ ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಅಂಡರ್ 19 ವಿಶ್ವಕಪ್ ಕೂಟದ ಭಾರತ ಮತ್ತು ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯಾಟದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 10 ವಿಕೆಟ್ ಗಳಿಂದ ಕೆಡವಿದ ಟೀಂ ಇಂಡಿಯಾ ಹುಡುಗರು ಈ ಕೂಟದ ಫೈನಲ್ ಗೇರಿದ್ದಾರೆ.


ಪಾಕಿಸ್ಥಾನ ನೀಡಿದ್ದ 172 ರನ್ ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಭಾರತದ ಕಿರಿಯರು ಯಶಸ್ವೀ ಜೈಸ್ವಾಲ್ (ಅಜೇಯ 105) ಅವರ ಭರ್ಜರಿ ಶತಕ ಹಾಗೂ ಅವರ ಜೊತೆಗಾರ ದಿವ್ಯಾಂಶ್ ಸಕ್ಷೇನಾ (ಅಜೇಯ 59) ಅವರ ತಾಳ್ಮೆಯ ಅರ್ಧಶತಕದ ನೆರವಿನಿಂದ 35.2 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿಯನ್ನು ತಲುಪುವಂತೆ ಮಾಡಿದರು.

ಗುರವಾರ ನ್ಯೂಝಿ ಲ್ಯಾಂಡ್ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿಜೇತವಾಗಲಿರುವ ತಂಡವನ್ನು ಭಾರತ ಫೆಬ್ರವರಿ 09ರಂದು ಇದೇ ಮೈದಾನದಲ್ಲಿ ನಡೆಯಲಿರುವ ಫೈನಲ್ ಕಾದಾಟದಲ್ಲಿ ಎದುರಿಸಲಿದೆ.

ಟಾಸ್ ಗೆದ್ದ ಪಾಕಿಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಭಾರತೀಯ ಯುವ ಬೌಲರ್ ಗಳ ಶಿಸ್ತಿನ ಬೌಲಿಂಗ್ ಮುಂದೆ ಪಾಕ್ ಯುವ ಬ್ಯಾಟ್ಸ್ ಮನ್ ಗಳ ಆಟ ನಡೆಯಲೇ ಇಲ್ಲ. ಆರಂಭಿಕ ಆಟಗಾರ ಹೈದರ್ ಆಲಿ (56) ಮತ್ತು ಕಪ್ತಾನ ರೊಹೈಲ್ ನಝೀರ್ (62) ಅವರಿಬ್ಬರದ್ದೇ ಪಾಕ್ ಪರ ಗರಿಷ್ಠ ಗಳಿಕೆ.

ಇವರಿಬ್ಬರನ್ನು ಹೊರತುಪಡಿಸಿದರೆ ಪಾಕ್ ಬ್ಯಾಟಿಂಗ್ ಸರದಿಯಲ್ಲಿ ಎರಡಂಕೆಯ ಮೊತ್ತ ದಾಟಿದ್ದು ಮಹಮ್ಮದ್ ಹ್ಯಾರಿಸ್ (21) ಮಾತ್ರ. ತಂಡದ ಮೊತ್ತ 100 ಆಗುವಷ್ಟರಲ್ಲಿ ಪಾಕಿಸ್ಥಾನದ ಯುವ ಪಡೆಯ 03 ವಿಕೆಟ್ ಗಳನ್ನು ಟೀಂ ಇಂಡಿಯಾ ಹುಡುಗರು ಬೀಳಿಸಿಯಾಗಿತ್ತು. ಅಂತಿಮವಾಗಿ ಪಾಕಿಸ್ಥಾನ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಲಾಗಿದೆ 43.1 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು. 

ಭಾರತದ ಬೌಲಿಂಗ್ ಯಾದಿಯಲ್ಲಿ ಎಲ್ಲರೂ ಮಿತವ್ಯಯಿಗಳೆಣಿಸಿದರು. ಅವರಲ್ಲಿ ಘಾತಕ ಬೌಲಿಂಗ್ ಸಂಘಟಿಸಿದ ಎಡಗೈ ಮಧ್ಯಮ ವೇಗಿ ಸುಶಾಂತ್ ಮಿಶ್ರಾ 8.1 ಓವರ್ ಗಳಲ್ಲಿ 28 ರನ್ ನೀಡಿ 03 ವಿಕೆಟ್ ಪಡೆದರೆ, ಇನ್ನೋರ್ವ ವೇಗಿ ಕಾರ್ತಿಕ ತ್ಯಾಗಿ 8 ಓವರ್ ಎಸೆದು 32 ರನ್ ನೀಡಿ 02 ವಿಕೆಟ್ ಪಡೆದರು. ಬಲಗೈ ಲೆಗ್ ಬ್ರೇಕ್ ಬೌಲರ್ ರವಿ ಬಿಷ್ಣೋಯ್ ಸಹ 02 ವಿಕೆಟ್ ಪಡೆದು ಮಿಂಚಿದರು. ಅಥರ್ವ ಅಂಕೋಲೆಕರ್ ಮತ್ತು ಯಶಸ್ವೀ ಜೈಸ್ವಾಲ್ ಅವರು ತಲಾ 01 ವಿಕೆಟ್ ಪಡೆದರು.

ಪಾಕಿಸ್ಥಾನ ನೀಡಿದ 172 ರನ್ ಗಳ ಸವಾಲನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಜೋಡಿ ಯಶಸ್ವೀ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಭರ್ಜರಿ ಆಟದ ಪ್ರದರ್ಶನ ನೀಡಿ ಪಾಕಿಸ್ಥಾನ ಬೌಲರ್ ಗಳಿಗೆ ಯಾವುದೇ ಹಂತದಲ್ಲಿ ಮೇಲುಗೈ ಆಗದಂತೆ ನೋಡಿಕೊಂಡರು. ಅದರಲ್ಲೂ ಈ ವಿಶ್ವಕಪ್ ಕೂಟದಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಉತ್ತರ ಪ್ರದೇಶದ ಎಡಗೈ ಬ್ಯಾಟ್ಸ್ ಮನ್ ಜೈಸ್ವಾಲ್ ಬಿರುಸಿನ ಆಟದ ಮೂಲಕ ಪಾಕ್ ಬೌಲರ್ ಮತ್ತು ಫೀಲ್ಡರ್ ಗಳನ್ನು ಸತಾಯಿಸಿದರು. ಅವರ 105 ರನ್ ಕೇವಲ 115 ಎಸೆತಗಳಲ್ಲಿ ದಾಖಲುಗೊಂಡಿತು. ಇದರಲ್ಲಿ 08 ಬೌಂಡರಿ ಹಾಗೂ 04 ಸಿಕ್ಸರ್ ಸಹ ಸೇರಿದೆ.

ಇನ್ನು ಜೈಸ್ವಾಲ್ ಅವರಿಗೆ ಉತ್ತಮ ಬೆಂಬಲ ನೀಡಿದ ಇನ್ನೋರ್ವ ಎಡಗೈ ಆಟಗಾರ ದಿವ್ಯಾಂಶ್ ಸಕ್ಸೇನಾ ಎಚ್ಚರಿಕೆಯ ನಿಧಾನಗತಿ ಬ್ಯಾಟಂಗ್ ಮೂಲಕ ಪಾಕ್ ಬೌಲರ್ ಗಳಿಗೆ ವಿಕೆಟ್ ಕೀಳುವ ಅವಕಾಶವನ್ನೇ ನೀಡಲಿಲ್ಲ. 99 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿದ ಸಕ್ಸೇನಾ ತನ್ನ ತಾಳ್ಮೆಯ ಆಟದ ಮೂಲಕ ಇಂದು ಗಮನ ಸೆಳೆದರು ತಮ್ಮ ಈ ಕಲಾತ್ಮಕ ಇನ್ನಿಂಗ್ಸ್ ನಲ್ಲಿ ಸಕ್ಸೇನಾ ಬಾರಿಸಿದ್ದು 06 ಬೌಂಡರಿಗಳು. ಇದು ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯಾಟದಲ್ಲಿ ಜೈಸ್ವಾಲ್ ಹಾಗೂ ಸಕ್ಸೇನಾ ಅವರದ್ದು ದಾಖಲೆಯ ಆರಂಭಿಕ ಜೊತೆಯಾಟವಾಗಿದೆ.

ಚಿತ್ರ ಕೃಪೆ: ಐಸಿಸಿ ಅಧಿಕೃತ ವೆಬ್ ಸೈಟ್

ಟಾಪ್ ನ್ಯೂಸ್

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.