ಭಾರತ – ದ.ಆಫ್ರಿಕಾ ಪ್ರಥಮ ಏಕದಿನ ಮಳೆಗೆ ಬಲಿ ; ಟಾಸ್ ಗೂ ಅವಕಾಶ ನೀಡದ ವರುಣ
Team Udayavani, Mar 12, 2020, 6:36 PM IST
ಧರ್ಮಶಾಲಾ: ಇಲ್ಲಿ ಇಂದು ನಡೆಯಬೇಕಿದ್ದ ಭಾರತ ಮತ್ತು ಪ್ರವಾಸಿ ದಕ್ಷಿಣ ಅಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಕಾಟ ನೀಡಿದೆ. ಟಾಸ್ ನಡೆಯುವುದಕ್ಕೂ ಅರ್ಧ ಗಂಟೆ ಮೊದಲು ವಾತಾವರಣ ಶುಭ್ರವಾಗಿತ್ತು. ಆದರೆ ಆ ಬಳಿಕ ಸುರಿಯಲಾರಂಭಿಸಿದ ಮಳೆ ನಿಲ್ಲಲೇ ಇಲ್ಲ.
ಮಳೆ ನಿಂತ ಬಳಿಕ ಮೈದಾನ ಒಣಗಿಸುವ ಪ್ರಯತ್ನವೂ ಫಲ ನೀಡಲಿಲ್ಲ. ಇದು ಈ ಮೈದಾನದಲ್ಲಿ ಒಂದೂ ಎಸೆತ ಕಾಣದೆ ರದ್ದಾಗುತ್ತಿರುವ ಎರಡನೇ ಪಂದ್ಯವಾಗಿದೆ. ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದನ ಪಂದ್ಯವೇ ಆಗಿದ್ದಿದು ವಿಶೇಷವಾಗಿದೆ.
ಇದೀಗ ಈ ಪಂದ್ಯ ರದ್ದಾಗಿರುವುದರಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿ ಎರಡು ಪಂದ್ಯಗಳಿಗೆ ಸೀಮಿತಗೊಂಡಂತಾಗಿದೆ. ಮುಂದಿನ ಪಂದ್ಯ ಮಾರ್ಚ್ 15ರಂದು ಲಕ್ನೋದಲ್ಲಿ ನಡೆಯಲಿದೆ ಹಾಗೂ ಅಂತಿಮ ಪಂದ್ಯ ಮಾರ್ಚ್ 18ರಂದು ಕೊಲ್ಕೊತ್ತಾದಲ್ಲಿ ನಡೆಯಲಿದೆ.
The 1st ODI between India and South Africa has been abandoned due to rains.#INDvSA pic.twitter.com/Oc5iO6q9dj
— BCCI (@BCCI) March 12, 2020