ಆಸೀಸ್‌ ವೇಗಕ್ಕೆ ಭಾರತ ಪುಡಿಪುಡಿ


Team Udayavani, Oct 11, 2017, 11:58 AM IST

11-26.jpg

ಗುವಾಹಟಿ: ಆಸ್ಟ್ರೇಲಿಯದ ಎಡಗೈ ವೇಗಿ ಜಾಸನ್‌ ಬೆಹ್ರೆಂಡಾಫ್ì ದಾಳಿಗೆ ಬೆದರಿದ ಭಾರತ ಮಂಗಳವಾರದ ದ್ವಿತೀಯ ಟಿ-20 ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ. ಇದರೊಂದಿಗೆ ಸರಣಿ 1-1 ಸಮಬಲಕ್ಕೆ ಬಂದಿದೆ. ನಿರ್ಣಾ ಯಕ ಪಂದ್ಯ ಅ. 13ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 118 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್‌ ಆಯಿತು. ಜವಾಬಿತ್ತ ಆಸ್ಟ್ರೇಲಿಯ 15. 3 ಓವರ್‌ಗಳಲ್ಲಿ 2 ವಿಕೆಟಿಗೆ 122 ರನ್‌ ಬಾರಿಸಿ ಜಯ ಸಾಧಿಸಿತು. ವಾರ್ನರ್‌ ಮತ್ತು ಹೆನ್ರಿಕ್ಸ್‌ 13 ರನ್‌ ಆಗುವಷ್ಟರಲ್ಲಿ ವಾಪಸಾದರೂ ಮುರಿಯದ 3ನೇ ವಿಕೆಟಿಗೆ ಜತೆಗೂಡಿದ ಹೆನ್ರಿಕ್ಸ್‌ (62) ಮತ್ತು ಹೆಡ್‌ (48) ತಂಡವನ್ನು ಯಾವುದೇ ಒತ್ತಡವಿಲ್ಲದೆ ದಡ ಸೇರಿಸಿದರು. 

ಆತಿಥೇಯರ ಅಗ್ರ ಕ್ರಮಾಂಕದ ಮೇಲೆ ಘಾತಕ ದಾಳಿ ನಡೆಸಿದ ಬೆಹ್ರೆಂಡಾಫ್ì 21 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉಡಾಯಿಸಿ ಪಂದ್ಯಶ್ರೇಷ್ಠರೆನಿಸಿದರು. ಇದು ಗುವಾಹಟಿಯ “ಬರ್ಸಾಪಾರ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ. ಟಾಸ್‌ ಗೆದ್ದ ಆಸ್ಟ್ರೇಲಿಯದ ನಾಯಕ ಡೇವಿಡ್‌ ವಾರ್ನರ್‌ ರಾತ್ರಿಯ ಮಂಜಿಗೆ ಬೆದರಿ ನಿರೀಕ್ಷೆಯಂತೆ ಭಾರತಕ್ಕೆ ಬ್ಯಾಟಿಂಗ್‌ ಬಿಟ್ಟುಕೊಟ್ಟರು. ಇದರಲ್ಲಿ ಭರಪೂರ ಯಶಸ್ಸನ್ನೇ ಕಂಡರು. ಭಾರತಕ್ಕೆ ಆರಂಭಿಕ ಕುಸಿತದಿಂದ ಚೇತರಿ ಸಲು ಸಾಧ್ಯವಾಗಲೇ ಇಲ್ಲ. ಸ್ಪಿನ್ನರ್‌ ಆ್ಯಡಂ ಝಂಪ (19ಕ್ಕೆ 2), ಆಲ್‌ರೌಂಡರ್‌ ಮಾರ್ಕಸ್‌ ಸ್ಟೊಯಿನಿಸ್‌ (20ಕ್ಕೆ 1), ವೇಗಿ ನಥನ್‌ ಕೋಲ್ಟರ್‌ ನೈಲ್‌ (23ಕ್ಕೆ 1) ಬೌಲಿಂಗ್‌ ಆಕ್ರಮಣ ಕೂಡ ಬಿರುಸಿನಿಂದ ಕೂಡಿತ್ತು.

ಭಾರತದ ಪರ 27 ರನ್‌ ಮಾಡಿದ ಕೇದಾರ್‌ ಜಾಧವ್‌ ಅವರದೇ ಗರಿಷ್ಠ ಗಳಿಕೆ. 25 ರನ್‌ ಮಾಡಿದ ಹಾರ್ದಿಕ್‌ ಪಾಂಡ್ಯ ಅವರದು ಅನಂತರದ ಹೆಚ್ಚಿನ ಗಳಿಕೆ. ಮೊದಲ ಓವರಿನಲ್ಲೇ 2 ವಿಕೆಟ್‌! ಬೆಹೆಹ್ರೆಂಡಾಫ್ ಅವರ ಮೊದಲ ಓವರಿ ನಲ್ಲೇ 2 ವಿಕೆಟ್‌ ಬೀಳುವುದರೊಂದಿಗೆ ಟೀಮ್‌ ಇಂಡಿಯಾ ತೀವ್ರ ಸಂಕಟಕ್ಕೆ ಸಿಲುಕಿತು. 8 ರನ್‌ ಮಾಡಿದ ರೋಹಿತ್‌ ಶರ್ಮ 4ನೇ ಎಸೆತದಲ್ಲಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರೆ, ಅಂತಿಮ ಎಸೆತದಲ್ಲಿ ನಾಯಕ ವಿರಾಟ್‌ ಕೊಹ್ಲಿ ಖಾತೆ ತೆರೆಯದೆ ಎದುರಾಳಿ ನಾಯಕ ವಾರ್ನರ್‌ಗೆ ಕ್ಯಾಚಿತ್ತು ವಾಪಸಾದರು. ಬೆಹ್ರೆಂಡಾಫ್ìಗೆ ವಿಕೆಟ್‌ ಒಪ್ಪಿಸುವ ಮುನ್ನ ರೋಹಿತ್‌ ಶರ್ಮ 2 ಬೌಂಡರಿಗಳ ರುಚಿ ತೋರಿಸಿದ್ದರು. 

ಬೆಹ್ರೆಂಡಾಫ್ì ಅವರ ದ್ವಿತೀಯ ಓವರಿನಲ್ಲಿ ಪೆವಿಲಿಯನ್‌ ಸೇರುವ ಸರದಿ ಮನೀಷ್‌ ಪಾಂಡೆ ಅವರದಾಗಿತ್ತು. ಕೇವಲ 6 ರನ್‌ ಮಾಡಿದ ಪಾಂಡೆ ಕೀಪರ್‌ ಪೇನ್‌ಅವರಿಗೆ ಕ್ಯಾಚ್‌ ನೀಡಿದರು. ಮುಂದಿನ ಓವರಿನಲ್ಲಿ ಶಿಖರ್‌ ಧವನ್‌ (2) ವಿಕೆಟ್‌ ಹಾರಿಸಿದರು. ಅಲ್ಲಿಗೆ ಭಾರತ 27 ರನ್ನಿಗೆ 4 ವಿಕೆಟ್‌ ಉದುರಿಸಿಕೊಂಡಿತು.

ಜಾಧವ್‌ ಮತ್ತು ಧೋನಿ ಸೇರಿಕೊಂಡು 5ನೇ ವಿಕೆಟಿಗೆ ಒಂದಿಷ್ಟು ಹೋರಾಟ ಸಂಘಟಿಸಿ ಕುಸಿತಕ್ಕೆ ತಡೆಯಾದರು. ಇವರಿಬ್ಬರ ಜತೆಯಾಟದಲ್ಲಿ 33 ರನ್‌ ಒಟ್ಟುಗೂಡಿತು. 13 ರನ್‌ ಮಾಡಿದ ಧೋನಿಯನ್ನು ಸ್ಟಂಪಿಂಗ್‌ ಬಲೆಗೆ ಬೀಳಿಸಿದ ಝಂಪ ಈ ಜೋಡಿ ಯನ್ನು ಬೇರ್ಪಡಿಸಿದರು. 

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ಬೆಹ್ರೆಂಡಾಫ್ì    8
ಶಿಖರ್‌ ಧವನ್‌    ಸಿ ವಾರ್ನರ್‌ ಬಿ ಬೆಹ್ರೆಂಡಾಫ್ì    2
ವಿರಾಟ್‌ ಕೊಹ್ಲಿ    ಸಿ ಮತ್ತು ಬಿ ಬೆಹ್ರೆಂಡಾಫ್ì    0
ಮನೀಷ್‌ ಪಾಂಡೆ    ಸಿ ಪೇನ್‌ ಬಿ ಬೆಹ್ರೆಂಡಾಫ್ì    6
ಕೇದಾರ್‌ ಜಾಧವ್‌    ಬಿ ಝಂಪ    27
ಎಂ.ಎಸ್‌. ಧೋನಿ    ಸ್ಟಂಪ್ಡ್ ಪೇನ್‌ ಬಿ ಝಂಪ    13
ಹಾರ್ದಿಕ್‌ ಪಾಂಡ್ಯ    ಸಿ ಕ್ರಿಸ್ಟಿಯನ್‌ ಬಿ ಸ್ಟೊಯಿನಿಸ್‌    25
ಭುವನೇಶ್ವರ್‌    ಸಿ ಹೆನ್ರಿಕ್ಸ್‌ ಬಿ ನೈಲ್‌    1
ಕುಲದೀಪ್‌ ಯಾದವ್‌    ಸಿ ಪೇನ್‌ ಬಿ ಟೈ    16
ಜಸ್‌ಪ್ರೀತ್‌ ಬುಮ್ರಾ    ರನೌಟ್‌    7
ಚಾಹಲ್‌    ಔಟಾಗದೆ    3

ಇತರ        10
ಒಟ್ಟು  (20 ಓವರ್‌ಗಳಲ್ಲಿ ಆಲೌಟ್‌)    118
ವಿಕೆಟ್‌ ಪತನ: 1-8, 2-8, 3-16, 4-27, 5-60, 6-67, 7-70, 8-103, 9-115.

ಬೌಲಿಂಗ್‌:
ಜಾಸನ್‌ ಬೆಹ್ರೆಂಡಾಫ್ì    4-0-21-4
ನಥನ್‌ ಕೋಲ್ಟರ್‌ ನೈಲ್‌    4-0-23-1
ಆ್ಯಂಡ್ರೂ ಟೈ        4-0-30-1
ಆ್ಯಡಂ ಝಂಪ        4-0-19-2
ಮಾರ್ಕಸ್‌ ಸ್ಟೊಯಿನಿಸ್‌    4-0-20-1

ಆಸ್ಟ್ರೇಲಿಯ
ಆರನ್‌ ಫಿಂಚ್‌    ಸಿ ಕೊಹ್ಲಿ ಬಿ ಭುವನೇಶ್ವರ್‌    8
ಡೇವಿಡ್‌ ವಾರ್ನರ್‌    ಸಿ ಕೊಹ್ಲಿ ಬಿ ಬುಮ್ರಾ    2
ಮೊಸಸ್‌ ಹೆನ್ರಿಕ್ಸ್‌    ಔಟಾಗದೆ    62
ಟ್ರ್ಯಾವಿಸ್‌ ಹೆಡ್‌    ಔಟಾಗದೆ    48

ಇತರ        2
ಒಟ್ಟು  (15.3 ಓವರ್‌ಗಳಲ್ಲಿ 2 ವಿಕೆಟಿಗೆ)    122
ವಿಕೆಟ್‌ ಪತನ: 1-11, 2-13. 

ಬೌಲಿಂಗ್‌: 
ಭುವನೇಶ್ವರ್‌ ಕುಮಾರ್‌    3-0-9-1
ಜಸ್‌ಪ್ರೀತ್‌ ಬುಮ್ರಾ        3-0-25-1
ಹಾರ್ದಿಕ್‌ ಪಾಂಡ್ಯ        2-0-13-0
ಕುಲದೀಪ್‌ ಯಾದವ್‌        4-0-46-0
ಯಜುವೇಂದ್ರ ಚಾಹಲ್‌    3.3-0-29-0

ಪಂದ್ಯಶ್ರೇಷ್ಠ: ಜಾಸನ್‌ ಬೆಹ್ರೆಂಡಾಫ್ì
3ನೇ ಟಿ-20 ಪಂದ್ಯ 
ಅ. 13: ಹೈದರಾಬಾದ್‌

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.