ಮೊದಲ ಸೋಲು ಮರೆತು ಗೆಲ್ಲುತ್ತಾ ಭಾರತ?


Team Udayavani, Feb 12, 2021, 11:18 PM IST

ಮೊದಲ ಸೋಲು ಮರೆತು ಗೆಲ್ಲುತ್ತಾ ಭಾರತ?

ಚೆನ್ನೈ: ಶನಿವಾರದಿಂದ ಭಾರತ-ಇಂಗ್ಲೆಂಡ್‌ ನಡುವಿನ 2ನೇ ಟೆಸ್ಟ್‌ ಪಂದ್ಯ ಶುರುವಾಗಲಿದೆ. ಮೊದಲ ಟೆಸ್ಟ್‌ನಂತೆ ಎರಡನೇ ಟೆಸ್ಟ್‌ ಪಂದ್ಯ ಕೂಡಾ ಚೆನ್ನೈನಲ್ಲೇ ನಡೆಯಲಿದೆ.

ಮೊದಲ ಪಂದ್ಯದಲ್ಲಿ 227 ರನ್ನುಗಳ ಆಘಾತಕಾರಿ ಸೋಲನುಭವಿಸಿದ ಭಾರತ ತಂಡಕ್ಕೆ ಇದೊಂದು ಭಾರೀ ಸವಾಲಿನ ಪಂದ್ಯ. ಒಂದೆಡೆ ಸರಣಿಯನ್ನು ಸಮಬಲಕ್ಕೆ ತರಬೇಕು, ಇನ್ನೊಂದೆಡೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸಾಧ್ಯತೆಯನ್ನು ತೆರೆದಿಡಬೇಕು. ಜತೆಗೆ ಕೊಹ್ಲಿ ನಾಯಕತ್ವವೂ ಸುರಕ್ಷಿತವಾಗಿ ಉಳಿಯಬೇಕು! ಗೆಲುವೊಂದೇ ಇದಕ್ಕೆಲ್ಲ ಪರಿಹಾರ. ಸಂತೋಷದ ಸಂಗತಿಯೆಂದರೆ ಶೇ.50ರಷ್ಟು ಪ್ರೇಕ್ಷಕರಿಗೆ ಬಿಸಿಸಿಐ ಪ್ರವೇಶ ನೀಡಲಿದೆ.

ಆಸ್ಟ್ರೇಲಿಯದಲ್ಲಿ ಗೆಲುವಿನ ಬಾವುಟ ಹಾರಿಸಿ ಬಂದ ಭಾರತ ತಂಡ ತವರಿನಲ್ಲಿ ಜೋ ರೂಟ್‌ ಬಳಗದೆದುರು ಬೇರು ಸಮೇತ ಉರುಳಿ ಬಿದ್ದದ್ದನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅಂದ ಮಾತ್ರಕ್ಕೆ ಭಾರತಕ್ಕೇನೂ ಕಾಂಗರೂ ನಾಡಿನ ಸರಣಿ ಗೆಲುವು ತಲೆಗೆ ಹತ್ತಿರಲಿಲ್ಲ. ಆದರೆ ತಂಡದ ಸಂಯೋಜನೆ ಸಂಪೂರ್ಣ ಬದಲಾಗಿತ್ತು. ನಾಯಕತ್ವ ಬೇರೆಯಾಗಿತ್ತು. ಹನ್ನೊಂದರ ಆಯ್ಕೆ ಪ್ರಕ್ರಿಯೆಯಲ್ಲಿ ಸಣ್ಣದೊಂದು ರಾಜಕೀಯವೂ ನಡೆಯಿತು. ಲಂಕೆಯನ್ನು ಬಗ್ಗುಬಡಿದು ಬಂದ ಆಂಗ್ಲರನ್ನು ಎದುರಿಸಲು ವಿಶೇಷ ರಣತಂತ್ರವನ್ನಂತೂ ರೂಪಿಸಲೇ ಇಲ್ಲ. ಇದಕ್ಕೆ ತಕ್ಕ ಶಾಸ್ತಿ ಮಾಡಿಕೊಂಡಿತು.

ಇನ್ನೊಂದೆಡೆ ಪ್ರವಾಸಿ ಇಂಗ್ಲೆಂಡ್‌ ತನ್ನ ಅಷ್ಟೂ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿತು. ಶಿಸ್ತಿನ ಆಟದ ಮೂಲಕ ಪ್ರತಿಯೊಂದು ವಿಭಾಗದಲ್ಲೂ ಭಾರತವನ್ನು ಮೀರಿ ನಿಂತಿತು. ರೂಟ್‌ ಕಪ್ತಾನನ ಆಟ ಹೇಗಿರಬೇಕೆಂಬುದನ್ನು ಸಾಧಿಸಿ ತೋರಿಸಿದರು. ಅವರ ಜಾಣ್ಮೆಯ ನಾಯಕತ್ವ, ಪರಿಪಕ್ವ ನಿರ್ಧಾರಗಳಿಂದ ತಂಡಕ್ಕೊಂದು  ಧನಾತ್ಮಕ ಶಕ್ತಿ ಲಭಿಸಿತು. ಇದು ದೊಡ್ಡಮಟ್ಟದ ವಿಜಯವಾಗಿ ಪರಿವರ್ತನೆಗೊಂಡಿತು. ಭಾರತವಿನ್ನು ಇಂಗ್ಲೆಂಡ್‌ ಆಡಿದಂತೆ ಆಡಬೇಕು.

ಅಂಕಣ ಸ್ಪಿನ್‌ಗೆ ಪೂರ್ಣ ಪೂರಕ :

ಈ ಟೆಸ್ಟ್‌ ಪಂದ್ಯ ನೂತನವಾಗಿ ನಿರ್ಮಿಸಲಾದ ಟ್ರ್ಯಾಕ್‌ ಮೇಲೆ ನಡೆಯಲಿದೆ. ಮೊದಲ ಟೆಸ್ಟ್‌ ಪಂದ್ಯಕ್ಕೆ ಬಳಸಲಾದ ಅಂಕಣಕ್ಕಿಂತ ಇದು ಭಿನ್ನ. ಬಹಳ ಬೇಗನೇ ತಿರುವು ಪಡೆಯುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ಭಾರತವಿಲ್ಲಿ ತ್ರಿವಳಿ ಸ್ಪಿನ್‌ ದಾಳಿಯನ್ನು ಸಂಘಟಿಸುವುದು ಬಹುತೇಕ ಖಚಿತ. ಆಗ ಪ್ರಧಾನ ಸ್ಪಿನ್ನರ್‌ ಅಶ್ವಿ‌ನ್‌ಗೆ ಇಬ್ಬರು ಅತ್ಯುತ್ತಮ ಬೆಂಬಲಿಗರ ಅಗತ್ಯ ಬೀಳಲಿದೆ. ಯಾವುದೇ ಪರಿಣಾಮ ಬೀರದ ಶಹಬಾಜ್‌ ನದೀಂ ಸ್ಥಾನ ಕಳೆದುಕೊಳ್ಳುವುದು ಖಚಿತ. ಈ ಸ್ಥಾನಕ್ಕೆ ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಲಗ್ಗೆ ಇಡುವುದರಲ್ಲಿ ಅನುಮಾನವಿಲ್ಲ. ಜಡೇಜ ಜಾಗಕ್ಕೆ ಅವರು ಸೂಕ್ತ ಬದಲೀ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೂ ಇನ್ನೂ ಸ್ಪೆಷಲಿಸ್ಟ್‌ ಥರ್ಡ್‌ ಸ್ಪಿನ್ನರ್‌ ಆಗಿ ರೂಪುಗೊಂಡಿಲ್ಲ. ಹೀಗಾಗಿ ಇವರು ಸ್ಥಾನ ಉಳಿಸಿಕೊಳ್ಳುವ ಬಗ್ಗೆ ಅನುಮಾನವಿದೆ. ಈ ಜಾಗಕ್ಕೆ ಎಡಗೈ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಸೂಕ್ತ ಆಯ್ಕೆ ಆಗಬಲ್ಲರು. ತಂಡದ ಆಡಳಿತ ಮಂಡಳಿಗೆ ತಂಡದ ಹಿತಾಸಕ್ತಿಯೇ ಮುಖ್ಯವಾಗಿದ್ದರೆ ಕುಲದೀಪ್‌ ಆಯ್ಕೆಯಾದಾರು. ಅಂದ ಹಾಗೆ ಈ ಜಾಗಕ್ಕೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೆಸರು ಕೂಡ ಕೇಳಿ ಬರುತ್ತಿದೆ. ವೇಗದ ವಿಭಾಗದಲ್ಲಿ ಶಾದೂìಲ್‌ ಠಾಕೂರ್‌ ಮತ್ತು ಸಿರಾಜ್‌ ರೇಸ್‌ನಲ್ಲಿದ್ದಾರೆ. ಆದರೆ ಅನುಭವದ ನೆಲೆಯಲ್ಲಿ ಇಶಾಂತ್‌ ಮತ್ತು ಬುಮ್ರಾ ಮುಂದುವರಿಯುವುದು ಖಚಿತ.

 ಕಾಡುತ್ತಿದೆ ಆರಂಭಿಕ ವೈಫ‌ಲ್ಯ : 

ಬ್ಯಾಟಿಂಗ್‌ನಲ್ಲಿ ಭಾರತಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಆರಂಭಿಕ ವಿಭಾಗದ್ದು. ಯುವ ಆಟಗಾರ ಗಿಲ್‌ ಧೈರ್ಯದಿಂದ ಆಡುತ್ತಿದ್ದರೂ; ಅನುಭವಿ ರೋಹಿತ್‌ ಬ್ಯಾಟ್‌ ಮಾತ್ರ ಮಾತಾಡುತ್ತಿಲ್ಲ. ಸೀಮಿತ ಓವರ್‌ಗಳ ಪಂದ್ಯಕ್ಕಷ್ಟೇ ಫಿಟ್‌ ಎಂಬ ಅಪವಾದದಿಂದ ಪಾರಾಗಬೇಕಾದರೆ ರೋಹಿತ್‌ ದೊಡ್ಡದೊಂದು ಇನಿಂಗ್ಸ್‌ ಕಟ್ಟಬೇಕು, ಮತ್ತು ಅದು ಚೆನ್ನೈಯಲ್ಲೇ ಬರಬೇಕು. ಆಸ್ಟ್ರೇಲಿಯದಲ್ಲಿ ನಾಯಕತ್ವದ ಒತ್ತಡದ ನಡುವೆಯೂ ಶತಕ ಬಾರಿಸಿದದ್ದ ಅಜಿಂಕ್ಯ ರಹಾನೆ ಮೊದಲ ಟೆಸ್ಟ್‌ನಲ್ಲಿ ಸಂಪೂರ್ಣ ವೈಫ‌ಲ್ಯ ಅನುಭವಿಸಿದ್ದನ್ನು ನಂಬಲಾಗುತ್ತಿಲ್ಲ. ಪೂಜಾರ, ಕೊಹ್ಲಿ ಸೇರಿದಂತೆ ಇಡೀ ಬ್ಯಾಟಿಂಗ್‌ ವಿಭಾಗ ನಿಂತು ಆಡಿದರೆ ಎಂಥ ಸ್ಥಿತಿಯಲ್ಲೂ ಪಂದ್ಯವನ್ನು ಉಳಿಸಿಕೊಳ್ಳಬಹುದು.

ಇಂಗ್ಲೆಂಡ್‌ ತಂಡದಲ್ಲಿ 4 ಬದಲಾವಣೆ! : 

ಸಾಮಾನ್ಯವಾಗಿ ಗೆಲುವಿನ ತಂಡವನ್ನು ಬದಲಿಸದೇ ಇರುವುದು ಕ್ರಿಕೆಟ್‌ ಸಂಪ್ರದಾಯ. ಆದರೆ 227 ರನ್‌ ಜಯಭೇರಿ ಮೊಳಗಿಸಿದ ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ಒಂದಲ್ಲ, ಎರಡಲ್ಲ, ಬರೋಬ್ಬರಿ 4 ಬದಲಾವಣೆಗಳನ್ನು ಮಾಡಿದೆ!

ಕಳೆದ ಪಂದ್ಯದ ಬೌಲಿಂಗ್‌ ಹೀರೋಗಳಾದ ಜೇಮ್ಸ್‌ ಆ್ಯಂಡರ್ಸನ್‌, ಜೋಫ್ರ ಆರ್ಚರ್‌, ಡಾಮಿನಿಕ್‌ ಬೆಸ್‌ ಅವರನ್ನು ಇಂಗ್ಲೆಂಡ್‌ ಕೈಬಿಟ್ಟಿದೆ. ವಿಕೆಟ್‌ ಕೀಪರ್‌ ಜಾಸ್‌ ಬಟ್ಲರ್‌ ತವರಿಗೆ ಮರಳಿದ್ದಾರೆ.

ಇವರಲ್ಲಿ ಆ್ಯಂಡರ್ಸನ್‌ ಮತ್ತು ಬೆಸ್‌ ಅವರನ್ನು ರೊಟೇಶನ್‌ ಪದ್ಧತಿ ಹಾಗೂ ಹೆಚ್ಚಿನ ಒತ್ತಡದಿಂದ ಮುಕ್ತಗೊಳಿಸುವ ಸಲುವಾಗಿ ಹೊರಗಿಡಲಾಗಿದೆ. ಇವರ ಬದಲು ಸ್ಟುವರ್ಟ್‌ ಬ್ರಾಡ್‌ ಮತ್ತು ಮೊಯಿನ್‌ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. ಇವರಿಬ್ಬರು ಅಂತಿಮ ಬಳಗದಲ್ಲಿ ಕಾಣಿಸಿಕೊಳ್ಳುವುದು ನಿಶ್ಚಿತ. ವೇಗಿ ಆರ್ಚರ್‌ ಗಾಯಾಳಾದ ಕಾರಣ ತಂಡದಿಂದ ಬೇರ್ಪಟ್ಟಿದ್ದಾರೆ. ಇವರ ಸ್ಥಾನಕ್ಕೆ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ಮತ್ತು ವೇಗಿ ಓಲೀ ಸ್ಟೋನ್‌ ನಡುವೆ ಪೈಪೋಟಿ ಇದೆ. ಬಟ್ಲರ್‌ ಬದಲು ಬೆನ್‌ ಫೋಕ್ಸ್‌ ವಿಕೆಟ್‌ ಕೀಪಿಂಗ್‌ ನಡೆಸಲಿದ್ದಾರೆ.

ಸಂಭಾವ್ಯ ತಂಡಗಳು : 

ಭಾರತ: ರೋಹಿತ್‌ ಶರ್ಮ, ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌/ಕುಲದೀಪ್‌ ಯಾದವ್‌, ಇಶಾಂತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಡೊಮಿನಿಕ್‌ ಸಿಬ್ಲಿ, ರೋರಿ ಬರ್ನ್ಸ್, ಡೇನಿಯಲ್‌ ಲಾರೆನ್ಸ್‌, ಜೋ ರೂಟ್‌ (ನಾಯಕ), ಓಲೀ ಪೋಪ್‌, ಸ್ಟೋಕ್ಸ್‌, ಬೆನ್‌ ಫೋಕ್ಸ್‌, ಮೊಯಿನ್‌ ಅಲಿ, ಸ್ಟುವರ್ಟ್‌ ಬ್ರಾಡ್‌, ಕ್ರಿಸ್‌ ವೋಕ್ಸ್‌/ಓಲೀ ಸ್ಟೋನ್‌, ಜಾಕ್‌ ಲೀಚ್‌.

 

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.