ವಿದಾಯ ಹೇಳಿದ ಆಶಿಷ್‌ ನೆಹ್ರಾ ಅವರಿಗೆ ಗೆಲುವಿನ ಉಡುಗೊರೆ


Team Udayavani, Nov 2, 2017, 7:55 AM IST

02-7.jpg

ಹೊಸದಿಲ್ಲಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತವು ವಿಶ್ವದ ಅಗ್ರಮಾನ್ಯ ಟಿ20 ತಂಡವಾಗಿರುವ ನ್ಯೂಜಿಲ್ಯಾಂಡ್‌ ತಂಡವನ್ನು ರನ್ನುಗಳಿಂದ ಸದೆಬಡಿದಿದೆ. ಈ ಮೂಲಕ ವಿದಾಯ ಹೇಳಿರುವ ಆಶಿಷ್‌ ನೆಹ್ರಾ ಅವರಿಗೆ ಗೆಲುವಿನ ಉಡುಗೊರೆ ನೀಡಿದೆ. ಮಾತ್ರವಲ್ಲದೇ ನ್ಯೂಜಿಲ್ಯಾಂಡ್‌ ವಿರುದ್ಧದ ಸತತ ಸೋಲಿನ ಸರಮಾಲೆಯನ್ನು ಅಂತ್ಯಗೊಳಿಸಿ ಮೊದಲ ಗೆಲುವಿನ ಸಂಭ್ರಮ ಆಚರಿಸಿದೆ. ಭಾರತ ಈ  ಹಿಂದೆ ಐದು ಬಾರಿ ನ್ಯೂಜಿಲ್ಯಾಂಡಿಗೆ ಶರಣಾಗಿತ್ತು.

ಆರಂಭಿಕ ಆಟಗಾರರಾದ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಅವರ ದಾಖಲೆಯ ಜತೆಯಾಟದಿಂದಾಗಿ ಭಾರತವು ಮೂರು ವಿಕೆಟಿಗೆ 202 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಭಾರತೀಯ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟಿಗೆ 149 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು.

ಗೆಲ್ಲಲು 203 ರನ್‌ ತೆಗೆಯುವ ಸವಾಲು ಪಡೆದ ನ್ಯೂಜಿಲ್ಯಾಂಡ್‌ ತಂಡವು ಆರಂಭಿಕ ಕುಸಿತ ಕಂಡಿತು. 6 ರನ್‌ ಗಳಿಸಿದ ವೇಳೆ ಪಾಂಡ್ಯ ಪಡೆದ ಅದ್ಭುತ ಕ್ಯಾಚಿಗೆ ಗಪ್ಟಿಲ್‌ ಬಲಿಯಾದರೆ ಕಾಲಿನ್‌ ಮುನ್ರೊ 7 ರನ್‌ ಗಳಿಸಲಷ್ಟೇ ಶಕ್ತರಾದರು. ಆಬಳಿಕ ಕೇನ್‌ ವಿಲಿಯಮ್ಸನ್‌ ಮತ್ತು ಟಾಮ್‌ ಲಾಥಂ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಈ ಜತೆಯಾಟ ಹೆಚ್ಚು ಹೊತ್ತು ಇರಲಿಲ್ಲ. 

28 ರನ್‌ ಗಳಿಸಿದ ವಿಲಿಯಮ್ಸನ್‌ ಔಟಾದ ಬಳಿಕ ಪ್ರವಾಸಿ ತಂಡ ಬ್ರೂಸ್‌ ಮತ್ತು ಗ್ರ್ಯಾಂಡ್‌ಹೋಮ್‌ ಅವರನ್ನು ಬೇಗನೇ ಕಳೆದುಕೊಂಡು ಒತ್ತಡಕ್ಕೆ ಬಿತ್ತು. ಆಬಳಿಕ ಹೆನ್ರಿ ನಿಕೋಲ್ಸ್‌ ರನೌಟ್‌ ಆಗುವುದರೊಂದಿಗೆ 94 ರನ್‌ ತಲುಪುವಷ್ಟರಲ್ಲಿ ತಂಡ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಟಾಮ್‌ ಲಾಥಂ ಹೋರಾಟ ನಡೆಸಿದರೂ ತಂಡ ಗೆಲುವಿನಿಂದ ತುಂಬಾ ದೂರವೇ ಉಳಿಯಿತು. ಲಾಥಂ ಗರಿಷ್ಠ 39 ರನ್‌ ಹೊಡೆದರು.

ಧವನ್‌, ರೋಹಿತ್‌ ದಾಖಲೆ ಜತೆಯಾಟ
ಧವನ್‌ ಮತ್ತು ರೋಹಿತ್‌ ಅವರು ಮೊದಲ ವಿಕೆಟಿಗೆ ದಾಖಲೆಯ ಜತೆಯಾಟ ನಡೆಸಿದ್ದರಿಂದ ಭಾರತ ಉತ್ತಮ ಮೊತ್ತ ಪೇರಿಸುವಂತಾಯಿತು. ಮೊದಲ ವಿಕೆಟಿಗೆ 158 ರನ್‌ ಪೇರಿಸುವ ಮೂಲಕ ಅವರಿಬ್ಬರು 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಮತ್ತು ರೋಹಿತ್‌ ಅವರು ಪೇರಿಸಿದ 138 ರನ್‌ ಜತೆಯಾಟದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ವೈಯಕ್ತಿಕವಾಗಿ ಅವರಿಬ್ಬರು ತಲಾ 80 ರನ್‌ ಗಳಿಸಿ ಔಟಾದರು.

16 ರನ್‌ ಗಳಿಸಿದ ವೇಳೆ ಜೀವದಾನ ಪಡೆದ ರೋಹಿತ್‌ ಅವರು 55 ಎಸೆತ ಎದುರಿಸಿದ್ದು ಆರು ಸಿಕ್ಸರ್‌ ಮತ್ತು 4 ಬೌಂಡರಿ ನೆರವಿನಿಂದ 80 ರನ್‌ ಹೊಡೆದರು. ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿರುವ ಧವನ್‌ 52 ಎಸೆತಗಲಿಂದ 80 ರನ್‌ ಸಿಡಿಸಿದರು. 10 ಬೌಂಡರಿ ಬಾರಿಸಿದ ಅವರು 2 ಸಿಕ್ಸರ್‌ ಸಿಡಿಸಿದರು. 50 ರನ್‌ ಗಳಿಸಿದ ವೇಳೆ ಧವನ್‌ ಕೂಡ ಜೀವದಾನ ಪಡೆದಿದ್ದರು. ಆದರೆ ರೋಹಿತ್‌ ಸಿಕ್ಸರ್‌ ಸಿಡಿಸುವ ಮೂಲಕ ತನ್ನ ಅರ್ಧಶತಕ ಪೂರ್ತಿಗೊಳಿಸಿದ್ದರು.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಸಿ ಲಾಥಂ ಬಿ ಬೌಲ್ಟ್    80
ಶಿಖರ್‌ ಧವನ್‌    ಸಿ ಲಾಥಂ ಬಿ ಸೋಧಿ    80
ಹಾರ್ದಿಕ್‌ ಪಾಂಡ್ಯ    ಸಿ ಲಾಥಂ ಬಿ ಸೋಧಿ    0
ವಿರಾಟ್‌ ಕೊಹ್ಲಿ    ಔಟಾಗದೆ    26
ಎಂಎಸ್‌ ಧೋನಿ    ಔಟಾಗದೆ    7

ಇತರ:        9
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ)    202
ವಿಕೆಟ್‌ ಪತನ: 1-158, 2-158, 3-185

ಬೌಲಿಂಗ್‌:
ಮಿಚೆಲ್‌ ಸ್ಯಾಂಟ್ನರ್‌        4-0-30-0
ಟ್ರೆಂಟ್‌ ಬೌಲ್ಟ್        4-0-49-1
ಟಿಮ್‌ ಸೌಥಿ        4-0-44-0
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    3-0-34-0
ಐಶ್‌ ಸೋಧಿ        4-0-25-2
ಕಾಲಿನ್‌ ಮುನ್ರೊ        1-0-14-0

ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌    ಸಿ ಪಾಂಡ್ಯ ಬಿ ಚಾಹಲ್‌    4
ಕಾಲಿನ್‌ ಮುನ್ರೊ    ಬಿ ಕುಮಾರ್‌    7
ಕೇನ್‌ ವಿಲಿಯಮ್ಸನ್‌    ಸಿ ಧೋನಿ ಬಿ ಪಾಂಡ್ಯ    28
ಟಾಮ್‌ ಲಾಥಂ    ಸ್ಟಂಪ್ಡ್ ಧೋನಿ ಬಿ ಚಾಹಲ್‌    39
ಟಾಮ್‌ ಬ್ರೂಸ್‌    ಸಿ ಶರ್ಮ ಬಿ ಪಟೇಲ್‌    10
ಗ್ರ್ಯಾಂಡ್‌ಹೋಮ್‌    ಸಿ ಧವನ್‌ ಬಿ ಪಟೇಲ್‌    0
ಹೆನ್ರಿ ನಿಕೋಲ್ಸ್‌    ರನೌಟ್‌    6
ಮಿಚೆಲ್‌ ಸ್ಯಾಂಟ್ನರ್‌    ಔಟಾಗದೆ    27
ಟಿಮ್‌ ಸೌಥಿ    ಸಿ ಧೋನಿ ಬಿ ಬುಮ್ರಾ    8
ಐಶ್‌ ಸೋಧಿ    ಔಟಾಗದೆ    7

ಇತರ        9
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ)    149

ವಿಕೆಟ್‌ ಪತನ: 1-6, 2-18, 3-54, 4-83, 5-84, 6-94, 7-99, 8-111

ಬೌಲಿಂಗ್‌:
ಆಶಿಷ್‌ ನೆಹ್ರಾ        4-0-29-0    
ಯುಜ್ವೇಂದ್ರ ಚಾಹಲ್‌        4-0-26-2
ಭುವನೇಶ್ವರ್‌ ಕುಮಾರ್‌        3-0-23-1
ಜಸ್‌ಪ್ರೀತ್‌ ಬುಮ್ರಾ        4-0-37-1
ಅಕ್ಷರ್‌ ಪಟೇಲ್‌        4-0-20-2
ಹಾರ್ದಿಕ್‌ ಪಾಂಡ್ಯ        1-0-11-1

ಪಂದ್ಯಶ್ರೇಷ್ಠ: ಶಿಖರ್‌ ಧವನ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.