ಇಂದು ಗೆದ್ದರೆ ಭಾರತ ಬಚಾವ್; ಗೆದ್ದರೆ ಸೆಮಿಫೈನಲ್ ಹಾದಿ ಸಲೀಸು
ನ್ಯೂಜಿಲೆಂಡ್ ವಿರುದ್ಧ ಕ್ವಾರ್ಟರ್ಫೈನಲ್ ಮಹತ್ವದ ಪಂದ್ಯ
Team Udayavani, Oct 31, 2021, 6:00 AM IST
ದುಬೈ: ಭಾನುವಾರ ಭಾರತ ತಂಡ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಮುಂದುವರಿಸಲಿದೆ. ಅಪಾಯಕಾರಿ ನ್ಯೂಜಿಲೆಂಡ್ ಸವಾಲು ಕೊಹ್ಲಿ ಪಡೆಗೆ ಕಾದಿದೆ. ಎರಡೂ ತಂಡಗಳಿಗೆ ಇದು ಇದು ಅಳಿವು-ಉಳಿವಿನ ಪಂದ್ಯ. ಕ್ವಾರ್ಟರ್ ಫೈನಲ್ ಪಂದ್ಯದಷ್ಟೇ ಮಹತ್ವ ಹೊಂದಿದೆ. ಗೆದ್ದ ತಂಡಕ್ಕೆ ಸೆಮಿಫೈನಲ್ ಹಾದಿ ಸಲೀಸಾಗಲಿದೆ. ಸೋತರೆ ನೂರಾಯೆಂಟು ಲೆಕ್ಕಾಚಾರಗಳಿ ಜೋತು ಬೀಳಬೇಕು.
ಮುಂದಿನ ಮಾರ್ಗ ಮುಚ್ಚಲೂಬಹುದು!
ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಅನುಭವಿಸಿದ ಮೊದಲ ಸೋಲಿನಿಂದ ಭಾರತ ತಂಡದ ಮನೋಸ್ಥೈರ್ಯ ಕುಗ್ಗಿರುವುದು ಸುಳ್ಳಲ್ಲ. ಆದರೆ ಈ ಆಘಾತದಿಂದ ಚೇತರಿಸಿಕೊಳ್ಳಲು, ಮುಂದಿನ ಹಂತದ ಕಾರ್ಯ ಯೋಜನೆಯನ್ನು ರೂಪಿಸಲು, ಸೂಕ್ತ ರಣತಂತ್ರ ಹೆಣೆಯಲು ಒಂದು ವಾರದಷ್ಟು ಧಾರಾಳ ಅವಧಿ ಲಭಿಸಿದೆ. ಇಲ್ಲಿಂದ ಗೆಲುವಿನ ಅಭಿಯಾನ ಆರಂಭಿಸಿ, ಉಳಿದೆಲ್ಲ ಪಂದ್ಯಗಳನ್ನು ಗೆಲ್ಲುತ್ತ ಹೋದರೆ ಕೊಹ್ಲಿ ಪಡೆಯ ಹಾದಿ ನೇರವಾಗಿ ನಾಕೌಟ್ಗೆ ತಲುಪುತ್ತದೆಂಬುದು ಸರಳ ಲೆಕ್ಕಾಚಾರ. ಭಾರತ ತಂಡದ ಮುಂದಿರುವ ಆಯ್ಕೆಯೊಂದೇ-ಗೆಲುವು!
ವಿರಾಟ್ ಕೊಹ್ಲಿ ಹೇಳಿದಂತೆ, ಪಾಕಿಸ್ತಾನದ ವಿರುದ್ಧ ಸೋತೊಡನೆ ಭಾರತದ ವಿಶ್ವಕಪ್ ಅಭಿಯಾನವೇನೂ ಅಂತ್ಯಗೊಂಡಿಲ್ಲ. ಆದರೆ ಉಳಿದ ಯಾವುದೇ ಪಂದ್ಯಗಳನ್ನು ಸೋಲಬಾರದು, ಅಷ್ಟೇ. ಆಗ ಬೇರೆ ತಂಡಗಳ ಸೋಲನ್ನು ಹಾರೈಸುವ, ಫಲಿತಾಂಶವನ್ನು ಕಾಯುವ ದರ್ದು ಭಾರತಕ್ಕೆ ಎದುರಾಗದು. ಸದ್ಯ ಭಾರತ-ನ್ಯೂಜಿಲೆಂಡ್ ಒಂದೇ ದೋಣಿಯ ಪಯಣಿಗರು. ಆಡಿದ್ದು ಒಂದೇ ಪಂದ್ಯ. ಎರಡೂ ತಂಡಗಳು ಪಾಕಿಸ್ತಾನ ವಿರುದ್ಧವೇ ಮುಗ್ಗರಿಸಿವೆ. ಅಂಕಪಟ್ಟಿಯಲ್ಲಿ ಭಾರತ ಸ್ಕಾಟ್ಲೆಂಡ್ಗಿಂತ ಮೇಲಿದೆ. ಭಾರತಕ್ಕಿಂತ ನ್ಯೂಜಿಲೆಂಡ್ ಒಂದು ಹೆಜ್ಜೆ ಮುಂದಿದೆ.
ಈಗಾಗಲೇ ಪಾಕಿಸ್ತಾನ ಹ್ಯಾಟ್ರಿಕ್ ಜಯದೊಂದಿಗೆ ನಾಕೌಟ್ಗೆ ಒಂದು ಕಾಲನ್ನಿರಿಸಿದೆ. ಅಫ್ಘಾನಿಸ್ತಾನ ಪ್ಲಸ್ ಮೂರರಷ್ಟು ಮೇಲ್ಮಟ್ಟದ ರನ್ರೇಟ್ ಹೊಂದಿದೆ. ಗುಂಪು ಎರಡರ ಈಗಿನ ಲೆಕ್ಕಾಚಾರದಂತೆ ದ್ವಿತೀಯ ಸ್ಥಾನಕ್ಕೆ 3 ತಂಡಗಳ ಸ್ಪರ್ಧೆ ಇದೆ!
ಇದನ್ನೂ ಓದಿ:ವಿದ್ಯುತ್ ತಂತಿ ಸ್ಪರ್ಶಿಸಿ ಎಕರೆಗಟ್ಟಲೆ ಕಬ್ಬು ಮತ್ತು ಗೋವಿನ ಜೋಳ ಬೆಂಕಿಗಾಹುತಿ
ಹನ್ನೊಂದರ ಆಯ್ಕೆಯ ಸವಾಲು: ಪಾಕಿಸ್ತಾನ ವಿರುದ್ಧ ಭಾರತ ತಂಡದ ಆಯ್ಕೆಯಲ್ಲೇ ಎಡವಿತ್ತೆಂಬುದರಲ್ಲಿ ಅನುಮಾನವಿಲ್ಲ. ಇಲ್ಲಿನ ಆಡುವ ಬಳಗದಲ್ಲಿ ಇಶಾನ್ ಕಿಶನ್, ಆರ್.ಅಶ್ವಿನ್ ಮತ್ತು ಶಾದೂìಲ್ ಠಾಕೂರ್ ಇರಬೇಕಿತ್ತೆಂಬುದು ಸಾರ್ವತ್ರಿಕ ಅಭಿಪ್ರಾಯ. ಫಾರ್ಮ್ನಲ್ಲಿಲ್ಲದ ಭುವನೇಶ್ವರ್ ಕುಮಾರ್, ಕೇವಲ ಬ್ಯಾಟಿಂಗಿಗಷ್ಟೇ ಸೀಮಿತಗೊಂಡ ಹಾರ್ದಿಕ್ ಪಾಂಡ್ಯ ದುಬಾರಿಯಾಗಿ ಪರಿಣಮಿಸಿದರು. ಹೀಗಾಗಿ ಕಿವೀಸ್ ವಿರುದ್ಧ ಪ್ಲೇಯಿಂಗ್ ಇಲೆವೆನ್ ನಿರ್ಣಾಯಕವಾಗಲಿದೆ. ಬ್ಲ್ಯಾಕ್ ಕ್ಯಾಪ್ಸ್ ಸ್ಪಿನ್ ನಿಭಾಯಿಸುವಲ್ಲಿ ತುಸು ಹಿಂದೆ ಎಂಬುದನ್ನು ಗಮನಿಸಬೇಕು. ಪಾಕ್ ವಿರುದ್ಧ ಒಂದೂ ವಿಕೆಟ್ ಕೀಳಲಾಗದವರು ಇಲ್ಲಿ ಜಾದೂ ಮಾಡಲೇಬೇಕಿದೆ.
ಪಾಕಿಸ್ತಾನ ವಿರುದ್ಧ ಭಾರತದ ಓಪನಿಂಗ್ ಘೋರ ವೈಫಲ್ಯ ಕಂಡಿತ್ತು. ಶಾಹೀನ್ ಶಾ ಅಫ್ರಿದಿ ಎಸೆತಗಳಿಗೆ ಉತ್ತರವಿರಲಿಲ್ಲ. ಇಲ್ಲಿ ಬೌಲ್ಟ್, ಸೌದಿ, ಜೇಮಿಸನ್ ಇದ್ದಾರೆ. ರೋಹಿತ್-ರಾಹುಲ್, ಕೊಹ್ಲಿ ಯಶಸ್ಸು ಕಂಡರೆ ಸವಾಲಿನ ಮೊತ್ತ ಸಾಧ್ಯ. ಭಾರತದ ಪರ ನಿಂತು ಆಡುವವರು ಈ ಮೂರು ಮಂದಿ ಮಾತ್ರ. ಅಂದಹಾಗೆ ಟಾಸ್ ಕೂಡ ನಿರ್ಣಾಯಕವಾಗಲಿದೆ.
ಪಟ್ಟುಬಿಡಬಾರದ ಪಂದ್ಯ: ಇದು ಭಾರತಕ್ಕೆ ಹಿಂದಿನ ಸೋಲುಗಳಿಗೆ ಉತ್ತರ ನೀಡುವ ಪಂದ್ಯವಾಗಬೇಕಿದೆ. ಕಳೆದ ಏಕದಿನ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಕೊಹ್ಲಿ ಪಡೆಯನ್ನು ಮಗುಚಿತ್ತು. ಅನಂತರದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಆಘಾತಕಾರಿ ಸೋಲುಣಿಸಿತ್ತು. ಇದೀಗ ಟಿ20 ವಿಶ್ವಕಪ್ ಸರದಿ. ಸಿಕ್ಕಿದ ಈ ಅವಕಾಶವನ್ನು ಭಾರತ ತಂಡ ಕೈಚೆಲ್ಲಬಾರದು.
ಭಾರತ-ನ್ಯೂಜಿಲೆಂಡ್
ಸ್ಥಳ: ದುಬೈ
ಆರಂಭ: ರಾ.7.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ವಿಶ್ವಕಪ್ ಮುಖಾಮುಖಿ
ಒಟ್ಟು ಪಂದ್ಯ 02
ಭಾರತ ಜಯ 00
ನ್ಯೂಜಿಲೆಂಡ್ ಜಯ 02
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ