ಪಂಥ್, ರಹಾನೆ ಶತಕ ವಂಚಿತ: ಕುಸಿದ ಭಾರತ
Team Udayavani, Oct 14, 2018, 11:49 AM IST
ಹೈದರಾಬಾದ್ : ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರವಿವಾರ ಭಾರತದ ಬ್ಯಾಟಿಂಗ್ ಕುಸಿತ ಕಂಡಿದೆ. ವಿಂಡೀಸ್ ಬೌಲರ್ ಗಳ ಕರಾರುವಕ್ಕಾದ ದಾಳಿಗೆ ಟೀಮ್ ಇಂಡಿಯಾ 367 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿದೆ.
ಹೈದೆರಾಬಾದ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು 308 ರನ್ ಗಳಿಸಿದ್ದ ಭಾರತ ರವಿವಾರ ನಿನ್ನೆಯ ಮೊತ್ತಕ್ಕೆ 59 ರನ್ ಸೇರಿಸಲಷ್ಟೇ ಶಕ್ತವಾಯಿತು.
ಶತಕದ ಭರವಸೆ ಮೂಡಿಸಿದ್ದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಯುವ ಆಟಗಾರ ರಿಷಬ್ ಪಂಥ್ ಇಂದು ಕ್ರಮವಾಗಿ 80 ಮತ್ತು 95 ರನ್ ಗಳಿಸಿ ಔಟ್ ಆಗುವುದರ ಮೂಲಕ ಶತಕದಿಂದ ವಂಚಿತರಾದರು.
ರಹಾನೆ – ಪಂಥ್ ಜೋಡಿ ಬೇರ್ಪಟ್ಟ ನಂತರ ಭಾರತ ಬಾಲಂಗೋಚಿಗಳು ವಿಂಡೀಸ್ ಬೌಲಿಂಗ್ ಗೆ ಉತ್ತರಿಸಲು ವಿಫಲರಾದರು. ಕಳೆದ ಪಂದ್ಯದ ಶತಕವೀರ ಜಡೇಜಾ ಇಂದು ರನ್ ಗಳಿಸದೆ ಪೆವಿಲಿಯನ್ ಸೇರಿದರೆ, ಉಮೇಶ್ ಮತ್ತು ಕುಲದೀಪ್ ಯಾದವ್ ಅವರ ಹಿಂದೆ ಔಟ್ ಆದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದಂತೆ ಇನ್ನೊಂದೆಡೆ ಅಶ್ವಿನ್ ದಿಟ್ಟ ಬ್ಯಾಟಿಂಗ್ ನಡೆಸಿದರು. ಕೊನೆಯ ವಿಕೆಟ್ ಗೆ ಶಾರ್ದುಲ್ ಠಾಕೂರ್ ಜೊತೆ ಬ್ಯಾಟಿಂಗ್ ನಡೆಸಿದ ಅಶ್ವಿನ್ 35 ರನ್ ಗಳಿಸಿ ಗ್ಯಾಬ್ರಿಯೆಲ್ ಗೆ ವಿಕೆಟ್ ಒಪ್ಪಿಸಿದರು.
ಜೇಸನ್ ಹೋಲ್ಡರ್ 5 ವಿಕೆಟ್, ಶಾನಾನ್ ಗ್ಯಾಬ್ರಿಯೆಲ್ 3 ವಿಕೆಟ್ ಮತ್ತು ವ್ಯಾರಿಕಾನ್ ಎರಡು ವಿಕೆಟ್ ಪಡೆದರು. ಒಟ್ಟಾರೆ ಭಾರತ ಈ ಪಂದ್ಯದಲ್ಲಿ 56 ರನ್ ಗಳ ಲೀಡ್ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil