ಆಸ್ಟ್ರಿಯಾ ವಿರುದ್ಧ ಭಾರತ ಜಯಭೇರಿ


Team Udayavani, Aug 18, 2017, 11:29 AM IST

18-SPORTS-3.jpg

ಹೊಸದಿಲ್ಲಿ: ರಮಣ್‌ದೀಪ್‌ ಸಿಂಗ್‌ ಮತ್ತು ಚಿಂಗ್ಲೆನ್‌ಸನಾ ಸಿಂಗ್‌ ಅವರ ಅವಳಿ ಗೋಲಿನ ನೆರವಿನಿಂದ ಭಾರತೀಯ ಪುರುಷ ಹಾಕಿ ತಂಡವು ಆಸ್ಟ್ರಿಯಾ ವಿರುದ್ಧ ನಡೆದ ಐದನೇ ಮತ್ತು ಅಂತಿಮ ಪಂದ್ಯದಲ್ಲಿ 4-3 ಗೋಲುಗಳಿಂದ ರೋಚಕ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಭಾರತ ಯುರೋಪ್‌ ಪ್ರವಾಸವನ್ನು ಸ್ಮರಣೀಯವಾಗಿ ಅಂತ್ಯಗೊಳಿಸಿತು.

ಇನ್ನೇನು ಪಂದ್ಯ ಮುಗಿಯುವಷ್ಟರಲ್ಲಿ ಚಿಂಗ್ಲೆನ್‌ಸನಾ ಹೊಡೆದ ಗೋಲಿನಿಂದ ಭಾರತ ಜಯಭೇರಿ ಬಾರಿಸುವಂತಾಯಿತು. ಈ ಮೊದಲು 3-1 ಮುನ್ನಡೆ ಸಾಧಿಸಿ ಗೆಲುವಿನ ಕನಸಿನಲ್ಲಿದ್ದ ಭಾರತ ಕೊನೆ ಹಂತದಲ್ಲಿ ಆಸ್ಟ್ರಿಯಾಕ್ಕೆ ಎರಡು ಗೋಲು ಹೊಡೆಯುವ ಅವಕಾಶ ಕಲ್ಪಿಸಿಕೊಟ್ಟ ಕಾರಣ ಪಂದ್ಯ ತೀವ್ರ ರೋಚಕ ಕ್ಷಣ ಎದುರಿಸುವಂತಾಯಿತು. 

ವಿಶ್ವದ ನಾಲ್ಕನೇ ರ್‍ಯಾಂಕಿನ ಹಾಲೆಂಡ್‌ ತಂಡ ವನ್ನು ಸತತ ಎರಡು ಪಂದ್ಯಗಳಲ್ಲಿ ಸೋಲಿಸಿ ಸಾಹಸ ಮೆರೆದ ಭಾರತ ಆಸ್ಟ್ರಿಯಾ ವಿರುದ್ಧವೂ ಜಯ ಸಾಧಿಸಿ ಗೆಲುವಿನ ಅಂತರವನ್ನು ಮೂರ ಕ್ಕೇರಿಸಿತು. ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಯುವ ಆಟಗಾರರನ್ನು ಒಳಗೊಂಡ ಭಾರತ ತಂಡ 3 ಗೆಲುವು ಮತ್ತು 2 ಸೋಲಿನೊಂದಿಗೆ ಐದು ಪಂದ್ಯಗಳ ಯುರೋಪ್‌ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿತು. ಭಾರತ ಸರಣಿಯ ಆರಂಭದ ಎರಡು ಪಂದ್ಯಗಳಲ್ಲಿ ಐದನೇ ರ್‍ಯಾಂಕಿನ ಬೆಲ್ಜಿಯಂಗೆ ಶರಣಾಗಿತ್ತು. 

ಮೊದಲ ಕ್ವಾರ್ಟರ್‌ ಆಟದ ವೇಳೆ ಆಸ್ಟ್ರಿಯಾ ಮುನ್ನಡೆ ಸಾಧಿಸಿತ್ತು. ಆದರೆ ರಮಣ್‌ದೀಪ್‌ ಎರಡನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಹೊಡೆದು ಸಮಬಲ ಸಾಧಿಸಿ ದರು. ಪಂದ್ಯ ಸಾಗುತ್ತಿದ್ದಂತೆ ಮಿಡ್‌ಫಿàಲ್ಡ್‌ನಲ್ಲಿ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ ಭಾರತೀಯರು ಆಸ್ಟ್ರಿಯಾ ತಂಡದ ಮೇಲೆ ಒತ್ತಡ ಹೇರಿದರು. ಆದರೆ ಗೋಲು ಹೊಡೆ ಯಲು ಭಾರತೀಯರಿಂದ ಸಾಧ್ಯವಾಗಲಿಲ್ಲ. ಹಾಗಾಗಿ ಮೊದಲಾರ್ಧದ ಆಟ ಮುಗಿದಾಗ 1-1 ಸಮಬಲದಲ್ಲಿತ್ತು.

ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣ ಕಾರಿಯಾಗಿ ಆಡಿತು. ರಮಣ್‌ದೀಪ್‌ ರಿವರ್ಸ್‌ ಹಿಟ್‌ ಮೂಲಕ ಇನ್ನೊಂದು ಗೋಲು ಹೊಡೆದ ಬಳಿಕ ಚಿಂಗ್ಲೆನ್‌ಸನಾ ಅವರು ವರುಣ್‌ ಕುಮಾರ್‌ ನೀಡಿದ ಪಾಸ್‌ನ ಲಾಭ ಪಡೆದು ಗೋಲು ದಾಖಲಿಸಿದರು. ಇದರಿಂದ ಭಾರತ 3-1 ಮುನ್ನಡೆ ಸಾಧಿಸುವಂತಾಯಿತು. ಪಂದ್ಯ ಮುಗಿಯಲು 10 ನಿಮಿಷಗಳಿರುವಾಗ ಆಸ್ಟ್ರಿಯಾ ಎರಡು ಗೋಲು ಹೊಡೆದು ಸಮಬಲ ಸ್ಥಾಪಿಸಿದಾಗ ಭಾರತ ಆಘಾತಕ್ಕೆ ಒಳಗಾಗಿತ್ತು. ಆದರೆ ಚಿಂಗ್ಲೆನ್‌ಸನಾ ಪಂದ್ಯ ಮುಗಿಯಲು 10 ಸೆಕೆಂಡ್‌ಗಳಿರುವಾಗ ಗೋಲು ಹೊಡೆದು ಭಾರತಕ್ಕೆ ಸ್ಮರಣೀಯ ಜಯ ಒದಗಿಸಿದರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.