ಭಾರತ ಸ್ಪಿನ್‌ಗೆ ಬಸವಳಿದ ಲಂಕಾ


Team Udayavani, Dec 21, 2017, 9:00 AM IST

21-6.jpg

ಕಟಕ್‌: ಯಜುವೇಂದ್ರ ಚಾಹಲ್‌ ಅವರ ಮಾರಕ ದಾಳಿಯ ನೆರವಿನಿಂದ ಭಾರತ ತಂಡವು ಶ್ರೀಲಂಕಾ ತಂಡದೆದುರು ಬುಧವಾರ ನಡೆದ ಟ್ವೆಂಟಿ20 ಸರಣಿಯ ಮೊದಲ ಪಂದ್ಯದಲ್ಲಿ  93 ರನ್ನುಗಳಿಂದ ಗೆಲುವು ದಾಖಲಿಸಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡವು ಕೆಎಲ್‌ ರಾಹುಲ್‌ ಅವರ ಉತ್ತಮ ಆಟದಿಂದಾಗಿ 3 ವಿಕೆಟಿಗೆ 180 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಚಾಹಲ್‌ ಅವರ ಮಾರಕ ದಾಳಿಗೆ ಕುಸಿದ ಶ್ರೀಲಂಕಾ ತಂಡವು 16 ಓವರ್‌ಗಳಲ್ಲಿ ಕೇವಲ 87 ರನ್ನಿಗೆ ಆಲೌಟಾಗಿ ಸಂಪೂರ್ಣ ನೆಲಕಚ್ಚಿತು. ಅಗ್ರ ಕ್ರಮಾಂಕದ ಮೂವರ ಸಹಿತ ದುಷ್ಮಂತ ಚಮೀರ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. 23 ರನ್‌ ಗಳಿಸಿದ ಉಪುಲ್‌ ತರಂಗ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. 

ಮಾರಕ ದಾಳಿ ಸಂಘಟಿಸಿದ ಚಾಹಲ್‌ ತನ್ನ 4 ಓವರ್‌ಗಳ ದಾಳಿಯಲ್ಲಿ 23 ರನ್ನಿಗೆ 4 ವಿಕೆಟ್‌ ಕಿತ್ತು ಮಿಂಚಿದರು. ಹಾರ್ದಿಕ್‌ ಪಾಂಡ್ಯ 3 ಮತ್ತು ಕುಲದೀಪ್‌ ಯಾದವ್‌ 2 ವಿಕೆಟ್‌ ಕಿತ್ತರು. 

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡವು ಭರ್ಜರಿಯಾಗಿ ಆಟ ಆರಂಭಿಸಿತು. ಏಕದಿನ ಸರಣಿಯ ಹೀರೊ ರೋಹಿತ್‌ ಮತ್ತು ಧವನ್‌ ಬದಲಿಗೆ ತಂಡಕ್ಕೆ ಆಯ್ಕೆಯಾದ ಕೆಎಲ್‌ ರಾಹುಲ್‌ ಇನ್ನಿಂಗ್ಸ್‌ ಆರಂಭಿಸಿ ಮೊದಲ ವಿಕೆಟಿಗೆ 38 ರನ್‌ ಪೇರಿಸಿದರು. ರೋಹಿತ್‌ 17 ರನ್‌ ಗಳಿಸಿ ಔಟಾದರೆ ರಾಹುಲ್‌ ಆಕರ್ಷಕ ಹೊಡೆತಗಳಿಂದ ರನ್‌ವೇಗ ಹೆಚ್ಚಿಸಲು ಪ್ರಯತ್ನಿಸಿದರು. 

ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಶ್ರೀಲಂಕಾ ದಾಳಿಯನ್ನು ದಿಟ್ಟವಾಗಿ ಎದುರಿಸಿ ಎರಡನೇ ವಿಕೆಟಿಗೆ 63 ರನ್‌ ಪೇರಿಸಿದರು. ಎಸೆತಕ್ಕೊಂದರಂತೆ ರನ್‌ ಗಳಿಸಿದ ಅಯ್ಯರ್‌ 24 ರನ್‌ ಗಳಿಸಿ ಪ್ರದೀಪ್‌ಗೆ ವಿಕೆಟ್‌ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲಿ 61 ರನ್‌ ಗಳಿಸಿದ ರಾಹುಲ್‌ ಔಟಾದರು. 48 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು. ರಾಹುಲ್‌ ಔಟಾದ ಬಳಿಕ ರನ್‌ವೇಗಕ್ಕೆ ಕಡಿವಾಣ ಬಿತ್ತು. ಆದರೆ ಅಂತಿಮ ಹಂತದಲ್ಲಿ ಧೋನಿ ಮತ್ತು ಮನೀಷ್‌  ಪಾಂಡೆ ಬಿರುಸಿನ ಆಟವಾಡಿದ್ದರಿಂದ ಭಾರತದ ಮೊತ್ತ 180ರವರೆಗೆ ತಲುಪಿತು. ಧೋನಿ 39 ಮತ್ತು ಪಾಂಡೆ 32 ರನ್‌ ಗಳಿಸಿ ಅಜೇಯರಾಗಿ ಉಳಿದರು. 

ಶ್ರೀಲಂಕಾ ತಂಡದಲ್ಲಿ  ನಾಲ್ಕು ಬದಲಾವಣೆ: ಮೊದಲ ಟ್ವೆಂಟಿ20 ಪಂದ್ಯಕ್ಕಾಗಿ ಶ್ರೀಲಂಕಾ ನಾಲ್ಕು ಬದಲಾವಣೆ ಮಾಡಿ ಕೊಂಡಿದೆ. ವಿಶ್ವ ಫೆರ್ನಾಂಡೊ, ದುಷ್ಮಂತ ಚಮೀರ, ಆಲ್‌ರೌಂಡರ್‌ ದಾಸುನ್‌ ಶಣಕ ಮತ್ತು ಕುಸಲ್‌ ಪೆರೆರ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ವಿಶ್ವ ಫೆರ್ನಾಂಡೊ ಟ್ವೆಂಟಿ20ಗೆ ಪಾದಾರ್ಪಣೆಗೈದರು. ಏಕದಿನ ಕ್ರಿಕೆಟ್‌ ಕೂಟದಲ್ಲಿ ಆಡಿದ ದನುಷ್ಕ ಗುಣತಿಲಕ, ಸದೀರ ಸಮರವಿಕ್ರಮ, ಸಚಿತ ಪತಿರಣ ಮತ್ತು ಸುರಂಗ ಲಕ್ಮಲ್‌ ಅವರನ್ನು ಕೈಬಿಡಲಾಗಿದೆ. 

ಭಾರತೀಯ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಶಿಖರ್‌ ಧವನ್‌ ಮತ್ತು ಭುವನೇಶ್ವರ್‌ ಕುಮಾರ್‌ ಬದಲಿಗೆ ಕೆಎಲ್‌ ರಾಹುಲ್‌ ಮತ್ತು ಜಯದೇವ್‌ ಉನಾದ್ಕತ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಭಾರತ: ರೋಹಿತ್‌ ಶರ್ಮ (ನಾಯಕ), ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ದಿನೇಶ್‌ ಕಾರ್ತಿಕ್‌, ಮನೀಷ್‌ ಪಾಂಡೆ, ಎಂಎಸ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಜಯದೇವ್‌ ಉನಾದ್ಕತ್‌, ಜಸ್‌ಪ್ರೀತ್‌ ಬುಮ್ರಾ, ಯುಜುವೇಂದ್ರ ಚಾಹಲ್‌

ಶ್ರೀಲಂಕಾ: ಉಪುಲ್‌ ತರಂಗ, ನಿರೋಷನ್‌ ಡಿಕ್ವೆಲ್ಲ, ಕುಸಲ್‌ ಪೆರೆರ, ಏಂಜೆಲೊ ಮ್ಯಾಥ್ಯೂಸ್‌, ಅಸೇಲ ಗುಣರತ್ನೆ, ತಿಸರ ಪೆರೆರ (ನಾಯಕ), ದಾಸುನ್‌ ಶಣಕ, ಅಖೀಲ ಧನಂಜಯ, ವಿಶ್ವ ಫೆರ್ನಾಂಡೊ, ದುಷ್ಮಂತ ಚಮೀರ, ನುವನ್‌ ಪ್ರದೀಪ್‌.

ಸ್ಕೋರ್‌ಪಟ್ಟಿ  
ಭಾರತ
ರೋಹಿತ್‌ ಶರ್ಮ    ಸಿ ಚಮೀರ ಬಿ ಮ್ಯಾಥ್ಯೂಸ್‌    17
ಕೆಎಲ್‌ ರಾಹುಲ್‌    ಬಿ ತಿಸರ ಪೆರೆರ    61
ಶ್ರೇಯಸ್‌ ಅಯ್ಯರ್‌    ಸಿ ಡಿಕ್ವೆಲ್ವ ಬಿ ಪ್ರದೀಪ್‌    24
ಎಂಎಸ್‌ ಧೋನಿ    ಔಟಾಗದೆ    39
ಮನೀಷ್‌ ಪಾಂಡೆ    ಔಟಾಗದೆ    32

ಇತರ:        7
ಒಟ್ಟು  (20 ಓವರ್‌ಗಳಲ್ಲಿ 3 ವಿಕೆಟಿಗೆ)    180
ವಿಕೆಟ್‌ ಪತನ: 1-38, 3-101, 3-112

ಬೌಲಿಂಗ್‌:
ವಿಶ್ವ ಫೆರ್ನಾಂಡೊ        2-0-16-0
ಅಖೀಲ ಧನಂಜಯ        4-0-30-0
ದುಷ್ಮಂತ ಚಮೀರ        3-0-38-0
ಏಂಜೆಲೊ ಮ್ಯಾಥ್ಯೂಸ್‌        2-0-18-1
ತಿಸರ ಪೆರೆರ        4-0-37-1
ನುವನ್‌ ಪ್ರದೀಪ್‌        4-0-38-1

ಶ್ರೀಲಂಕಾ
ನಿರೋಷನ ಡಿಕ್ವೆಲ್ಲ    ಸಿ ರಾಹುಲ್‌ ಬಿ ಉನಾದ್ಕತ್‌    13
ಉಪುಲ್‌ ತರಂಗ    ಸಿ ಧೋನಿ ಬಿ ಚಾಹಲ್‌    23
ಕುಸಲ್‌ ಪೆರೆರ    ಸಿ ಧೋನಿ ಬಿ ಕುಲದೀಪ್‌    19
ಏಂಜೆಲೊ ಮ್ಯಾಥ್ಯೂಸ್‌    ಸಿ ಮತ್ತು ಬಿ ಚಾಹಲ್‌    1
ಅಸೇಲ ಗುಣರತ್ನೆ    ಸ್ಟಂಪ್ಡ್ ಧೋನಿ ಬಿ ಚಾಹಲ್‌    4
ದಾಸುನ್‌ ಶಣಕ    ಸಿ ಪಾಂಡ್ಯ ಬಿ ಕುಲದೀಪ್‌    1
ತಿಸರ ಪೆರೆರ    ಸ್ಟಂಪ್ಡ್ ಧೋನಿ ಬಿ ಚಾಹಲ್‌    3
ಅಖೀಲ ಧನಂಜಯ    ಸಿ ಮತ್ತು ಬಿ ಪಾಂಡ್ಯ    7
ದುಷ್ಮಂತ ಚಮೀರ    ಸಿ ರಾಹುಲ್‌ ಬಿ ಪಾಂಡ್ಯ    12
ವಿಶ್ವ ಫೆರ್ನಾಂಡೊ    ಸಿ ಉನಾದ್ಕತ್‌ ಬಿ ಪಾಂಡ್ಯ    2
ನುವನ್‌ ಪ್ರದೀಪ್‌    ಔಟಾಗದೆ    0

ಇತರ:        2
ಒಟ್ಟು (16 ಓವರ್‌ಗಳಲ್ಲಿ ಆಲೌಟ್‌)    87
ವಿಕೆಟ್‌ ಪತನ: 1-15, 2-39, 3-46, 4-55, 5-58, 6-62, 7-70, 8-76, 9-85

ಬೌಲಿಂಗ್‌:
ಹಾರ್ದಿಕ್‌ ಪಾಂಡ್ಯ        4-0-29-3
ಜಯದೇವ್‌ ಉನಾದ್ಕತ್‌        2-0-7-1
ಯಜುವೇಂದ್ರ ಚಾಹಲ್‌        4-0-23-4
ಜಸ್‌ಪ್ರೀತ್‌ ಬುಮ್ರಾ        2-0-10-0
ಕುಲದೀಪ್‌ ಯಾದವ್‌        4-0-18-2

ಪಂದ್ಯಶ್ರೇಷ್ಠ: ಯಜುವೇಂದ್ರ ಚಾಹಲ್‌

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.