ಬೆಟ್ಟಿಂಗ್ನಲ್ಲಿ ಭಾರತ ಕ್ರಿಕೆಟಿಗ?
Team Udayavani, Apr 7, 2018, 6:00 AM IST
ಜೈಪುರ: 2011ರ ವಿಶ್ವಕಪ್ ಕ್ರಿಕೆಟ್ ವಿಜೇತ ಭಾರತ ತಂಡದ ಸದಸ್ಯನೊಬ್ಬ ಬೆಟ್ಟಿಂಗ್ ತಂಡದೊಂದಿಗೆ ಸಂಬಂಧ ಹೊಂದಿದ್ದಾರೆಂಬ
ಬಲವಾದ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದ ಟಿ20 ಲೀಗ್ನಲ್ಲಿ ಭಾರೀ ಬೆಟ್ಟಿಂಗ್ ನಡೆದಿತ್ತು.
ಆ ಕೂಟದ ಹಿಂದಿದ್ದ ವ್ಯಕ್ತಿಯೊಂದಿಗೆ 2011ರ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯನೊಂದಿಗೆ ಸಕ್ರಿಯ ನಂಟಿದೆ
ಎನ್ನಲಾಗಿದೆ. ಈ ಸಂಬಂಧ ರಾಜಸ್ಥಾನ್ ಪೊಲೀಸರು ತನಿಖೆ ನಡೆಸಿ 14 ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆದರೆ ಬಂಧಿತರೆಲ್ಲರೂ
ಜಾಮೀನು ಪಡೆದು ಹೊರಬಂದಿದ್ದಾರೆ. ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿದೆ.
ಪತ್ತೆಯಾಗಿದ್ದು ಹೇಗೆ?: 2017ರಲ್ಲಿ ಜೈಪುರದಲ್ಲಿ ರಜಪುತಾನ ಪ್ರೀಮಿಯರ್ ಲೀಗ್ ಟಿ20 ನಡೆದಿತ್ತು. ಕ್ಲಬ್ ಹಂತದ ಆಟಗಾರರು
ಇದರಲ್ಲಿ ಪಾಲ್ಗೊಂಡಿದ್ದರು. ಆ ಕೂಟದ ಅಂತಿಮ ಪಂದ್ಯದಲ್ಲಿ ನಿಕಟ ಸ್ಪರ್ಧೆಯಿತ್ತು. ಅಂತಹ ಪಂದ್ಯದಲ್ಲಿ ಕೊನೆಯ ಓವರ್ ಎಸೆದ
ಬೌಲರ್ ವಿಚಿತ್ರ ನಡೆ ತೋರಿದ್ದು ಅಚ್ಚರಿ ಹುಟ್ಟಿಸಿತ್ತು. ಅವರು ನಿರ್ಣಾಯಕ ಓವರ್ ಬರೀ ವೈಡ್ಗಳನ್ನು ಎಸೆದು 8 ಇತರೆ ರನ್
ಗಳನ್ನು ನೀಡಿದ್ದರು! ಇದರಿಂದ ಅನುಮಾನಗೊಂಡ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಕೂಟವನ್ನು ತನಿಖೆಗೊಳಪಡಿಸುವಂತೆ ಪೊಲೀಸರಿಗೆ ಮನವಿ ಮಾಡಿತ್ತು. ಇದರ ಬೆನ್ನು ಹತ್ತಿ ಹೊರಟ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿವೆ. ಇಂತಹ ಕೂಟಗಳನ್ನು ನಡೆಸುವ ವ್ಯಕ್ತಿಗಳು ಬರೀ ವಾರಕ್ಕೆ 2, 3 ಕೋಟಿ ರೂ. ದುಡಿಯುತ್ತಾರೆಂದು ಪೊಲೀಸ್ ಮೂಲಗಳು ಹೇಳಿವೆ. ಕೂಟದ ಹಿಂದಿನ ಮೆದುಳು, ಸಂಘಟಕರಲ್ಲೊಬ್ಬರಾದ ವ್ಯಕ್ತಿಗೆ ಭಾರತ ಕ್ರಿಕೆಟ್ ತಂಡದ ಪರ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಪಾಲ್ಗೊಂಡ ಆಟಗಾರನ ಪರಿಚಯವಿರುವುದು ಪತ್ತೆಯಾಗಿದೆ. ಆದರೆ ಆ ವ್ಯಕ್ತಿಗೆ ಈ ಹಗರಣದಲ್ಲ ಪಾಲಿದೆ ಎನ್ನುವುದು ಇನ್ನೂ
ಖಚಿತವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು