ಕರ್ಣ-ನಿಖೀಲ್ ಚಾಂಪಿಯನ್ಸ್
Team Udayavani, Dec 3, 2018, 6:20 AM IST
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಇಂಡಿಯನ್ ನ್ಯಾಷನಲ್ ಕಾಫಿ ಡೇ ರ್ಯಾಲಿಯಲ್ಲಿ ಕರ್ಣ ಕಡೂರ್ ಮತ್ತು ನಿಖೀಲ್ ವಿಠuಲ್ ಪೈ ಸಮಗ್ರ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರು.
ಕರ್ಣ ಕಡೂರ್ ಜೋಡಿ 2 ಗಂಟೆ 19 ನಿಮಿಷ 59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ, ಎರಡನೇ ಸ್ಥಾನ ಪಡೆದ ಅಮಿತ್ ರಜತ್ ಘೋಷ್-ಅಶ್ವಿನ್ ನಾಯಕ್ ಜೋಡಿ 2 ಗಂಟೆ 22 ನಿಮಿಷ 15 ಸೆಕೆಂಡುಗಳಲ್ಲಿ, ಮೂರನೇ ಸ್ಥಾನ ಪಡೆದ ಬೋಪಯ್ಯ-ಗಗನ್ ಕರುಂಬಯ್ಯ ಜೋಡಿ 2 ಗಂಟೆ 22 ನಿಮಿಷ 18 ಸೆಕೆಂಡುಗಳಲ್ಲಿ ರ್ಯಾಲಿ ಪೂರ್ಣಗೊಳಿಸಿತು.
ಐ.ಎನ್.ಆರ್.ಸಿ.1 ವಿಭಾಗದಲ್ಲಿ ಅಮಿತ್ ರಜತ್ ಘೋಷ್ ಮತ್ತು ಅಶ್ವಿನ್ ನಾಯಕ್ ಜೋಡಿ ಪ್ರಥಮ ಸ್ಥಾನ ಗಳಿಸಿದರೆ, ಗೌರವ್ ಗಿಲ್ ಮತ್ತು ಮೂಸಾ ಷರೀಫ್ ಜೋಡಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಐ.ಎನ್.ಆರ್.ಸಿ. 2 ವಿಭಾಗದಲ್ಲಿ ಕರ್ಣ ಕಡೂರ್ ಮತ್ತು ನಿಖೀಲ್ ವಿಠuಲ್ ಪೈ ಮೊದಲ ಸ್ಥಾನ, ಬೋಪಯ್ಯ ಮತ್ತು ಗಗನ್ ಕರುಂಬಯ್ಯ ಜೋಡಿ ಎರಡನೇ ಸ್ಥಾನ ಪಡೆಯಿತು.
ಐ.ಎನ್.ಆರ್.ಸಿ. 3 ವಿಭಾಗದಲ್ಲಿ ಅರ್ಜುನ್ ರಾವ್ ಮಿಲೆನ್ ಜಾರ್ಜ್ ಜೋಡಿ ಪ್ರಥಮ, ಫಾಬಿದ್ ಅಹಮದ್ ಮತ್ತು ಶಾಹಿದ್ ಸಲ್ಮಾನ್ ಜೋಡಿ ಎರಡನೇ ಸ್ಥಾನ ಪಡೆಯಿತು. ಎಫ್.ಎಂ.ಎಸ್.ಸಿ.ಐ 2 ಡಬ್ಲೂéಡಿ ವಿಭಾಗದಲ್ಲಿ ವಿಕ್ರಮ್ ಗೌಡ ಮತ್ತು ಬಿ.ಜಿ.ಸುಧೇಂದ್ರ ಜೋಡಿ ಪ್ರಥಮ ಹಾಗೂ ಪ್ರಖ್ಯಾತ್.ಎಚ್.ಶಿರೋಲೆ ಮತ್ತು ಎಸ್.ಎಂ.ಭರತ್ ಜೋಡಿ ದ್ವಿತೀಯ ಸ್ಥಾನ ಪಡೆಯಿತು. ಎಫ್.ಎಂ.ಎಸ್.ಸಿ.ಐ 4 ಡಬ್ಲೂéಡಿ ವಿಭಾಗದಲ್ಲಿ ಸಂಜಯ್ ಅಗರ್ವಾಲ್ ಮತ್ತು ಎಂ.ಸ್ಮಿತಾ ಪ್ರಸಾದ್ ಜೋಡಿ ಮೊದಲ ಹಾಗೂ ಸಚಿನ್ ಮೂರ್ತಿ ಮತ್ತು ಸತ್ಯಪಾಲ್ ಜೋಡಿ ಎರಡನೇ ಸ್ಥಾನ ಪಡೆಯಿತು.
– ಎಸ್.ಕೆ.ಲಕ್ಷ್ಮೀಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ