ಭಾರತದ ಪೇಸ್‌ ಬ್ಯಾಟರಿ ಈಗ ಫ‌ುಲ್‌ ಚಾರ್ಜ್‌!


Team Udayavani, Jan 24, 2021, 7:00 AM IST

ಭಾರತದ ಪೇಸ್‌ ಬ್ಯಾಟರಿ ಈಗ ಫ‌ುಲ್‌ ಚಾರ್ಜ್‌!

ಭಾರತದ ವೇಗದ ಬೌಲಿಂಗ್‌ ಎನ್ನುವುದು ಲೆಕ್ಕದ ಭರ್ತಿಗೆ ಎಂಬಂತಿದ್ದ ಕಾಲವದು. ಸ್ಪಿನ್‌ ಚತುಷ್ಟಯರಾದ ಚಂದ್ರಶೇಖರ್‌, ಪ್ರಸನ್ನ, ಬೇಡಿ ಮತ್ತು ವೆಂಕಟರಾಘವನ್‌ ಎದುರಾಳಿಗಳನ್ನು ನಡುಗಿಸುತ್ತಿದ್ದಾಗ ಯಾರಾದರೊಬ್ಬರು ಶಾಸ್ತ್ರಕ್ಕೆಂಬಂತೆ ವೇಗದ ಬೌಲಿಂಗ್‌ ಆರಂಭಿಸಿ ಅಷ್ಟೇ ಬೇಗ ಮರೆಯಾಗಿ ಬಿಡುತ್ತಿದ್ದರು.

ಆದರೆ ಕಾಲ ಬದಲಾಗಿದೆ. ಸ್ಪಿನ್‌ ತವರಾದ ಭಾರತದಲ್ಲಿ ಈಗ ವೇಗಿಗಳೇ ಬಹುಸಂಖ್ಯಾತ ರಾಗಿದ್ದಾರೆ. ಇದಕ್ಕೆ ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಅತ್ಯುತ್ತಮ ನಿದರ್ಶನ ಸಿಕ್ಕಿತು.

ಆಸೀಸ್‌ ಪ್ರವಾಸಕ್ಕೂ ಮುನ್ನ ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬಮ್ರಾ ಟೀಮ್‌ ಇಂಡಿಯಾದ ಪ್ರಧಾನ ವೇಗಿಗಳಾಗಿದ್ದರು. ಆದರೆ ಕಾಂಗರೂ ನಾಡಿನ ಪ್ರವಾಸ ಮುಗಿದ ಬಳಿಕ ಈ ಯಾದಿ ಸಂಪೂರ್ಣ ಬದಲಾಗಿತ್ತು. ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಟಿ. ನಟರಾಜನ್‌, ನವದೀಪ್‌ ಸೈನಿ ಹೆಸರು ಮುನ್ನೆಲೆಗೆ ಬಂತು. ಯುವ ವೇಗಿಗಳ ಸಮರ್ಥ ಪಡೆಯೊಂದು ಭವಿಷ್ಯದ ಪಾಲಿನ ಆಶಾಕಿರಣವಾಗಿ ಗೋಚರಿಸಿದೆ.

ಇನ್ನೀಗ ಇಂಗ್ಲೆಂಡ್‌ ಎದುರಿನ ತವರಿನ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ. ಎರಡು ತಂಡಗಳಿಗಾಗುವಷ್ಟು ವೇಗದ ಬೌಲರ್ ಇರುವುದರಿಂದ ಆಯ್ಕೆ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ. ಚೇತನ್‌ ಶರ್ಮ ನೇತೃತ್ವದ ಆಯ್ಕೆ ಸಮಿತಿ ತಂಡವನ್ನೇನೋ ಅಂತಿಮಗೊಳಿಸಿದೆ. ಇನ್ನಿರುವುದು ಹನ್ನೊಂದರ ಬಳಗದ ಆಯ್ಕೆ ಕಸರತ್ತು!

ರೇಸ್‌ನಲ್ಲಿ 9 ವೇಗಿಗಳು! :

ಏಶ್ಯದ ಆಚೆ ಟೆಸ್ಟ್‌ ಪಂದ್ಯಗಳನ್ನು ಗೆಲ್ಲಬೇಕಾದರೆ ತಂಡದ ವೇಗದ ಬೌಲಿಂಗ್‌ ವಿಭಾಗ ಸಮರ್ಥವಾಗಿ ರಬೇಕು ಹಾಗೂ ಇದರಲ್ಲಿ ವೆರೈಟಿ ಇರಬೇಕು ಎಂಬುದೊಂದು ಸಾಮಾನ್ಯ ಅನಿಸಿಕೆ. ಎಲ್ಲಕ್ಕಿಂತ ಮಿಗಿಲಾದದ್ದು, ಎದುರಾಳಿಯ 20 ವಿಕೆಟ್‌ಗಳನ್ನು ಉರುಳಿಸುವ ಸಾಮರ್ಥ್ಯ. ಪ್ರಧಾನ ವೇಗಿಗಳ ಗೈರಲ್ಲಿ ಭಾರತದ ಯುವ ಬೌಲರ್ ಕಾಂಗರೂ ನಾಡಿನಲ್ಲಿ ಇದನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದ್ದು ಈಗ ಇತಿಹಾಸ.

ಹೀಗೆ ಟೀಮ್‌ ಇಂಡಿಯಾದ ವೇಗಿಗಳ ಸಂಖ್ಯೆ ಯಲ್ಲಿ ದಿಢೀರ್‌ ಏರಿಕೆಯಾಗಿದೆ. ಒಬ್ಬಿಬ್ಬರಲ್ಲ, ಒಟ್ಟು 9 ಮಂದಿ ಬೌಲರ್ ಏಕಕಾಲದಲ್ಲಿ ತಂಡವನ್ನು ಪ್ರತಿನಿಧಿಸಬಹುದಾದಷ್ಟು ಹೆಚ್ಚಳ ಇದಾಗಿದೆ. ಭಾರ ತದ ಪೇಸ್‌ ಬ್ಯಾಟರಿ ಈಗ ಫ‌ುಲ್‌ ಚಾರ್ಜ್‌ ಆಗಿದೆ!

ವೇಗಿಗಳೇಕೆ ಹೆಚ್ಚಿದರು? :

ಭಾರತದಲ್ಲಿ ವೇಗಿಗಳ ಸಂಖ್ಯೆ ದಿಢೀರ್‌ ಹೆಚ್ಚಲು ಮುಖ್ಯ ಕಾರಣ ಕಿರಿಯರ ವಿಶ್ವ ಮಟ್ಟದ ಕೂಟಗಳು. ಮುಖ್ಯವಾಗಿ ಅಂಡರ್‌-19 ಸರಣಿ, ವಿಶ್ವಕಪ್‌ ಇತ್ಯಾದಿ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ, ವಿಂಡೀಸ್‌ ಮೊದಲಾದ ಫಾಸ್ಟ್‌ ಟ್ರ್ಯಾಕ್‌ ನಾಡಿನಲ್ಲಿ ಆಡಲಾದ ಸರಣಿಗಳ ಪಾಲೂ ದೊಡ್ಡದಿದೆ. ಸಿಕ್ಕಿದ ಅವಕಾಶವನ್ನು ಎಲ್ಲರೂ ಸಮರ್ಥ ರೀತಿಯಲ್ಲಿ ಬಳಸಿಕೊಂಡರು. ತಮ್ಮ ಸಾಮರ್ಥ್ಯವನ್ನು ಸೀನಿಯರ್‌ ತಂಡದೊಂದಿಗೂ ಸಾಬೀತು ಪಡಿಸಿದರು. ಈ ಟ್ರೆಂಡ್‌ ಮುಂದುವರಿಯಬೇಕಿದೆ.

ಏಶ್ಯದ ಆಚೆ ಬೇಕಿತ್ತು ಗೆಲುವು :

“ಇದೊಂದು ಆರೋಗ್ಯಕರ ಬೆಳವಣಿಗೆ. ಇದಕ್ಕಾಗಿ ನಾವು ಕಳೆದ ಮೂರು ವರ್ಷಗಳಿಂದ ಯೋಜನೆ ರೂಪಿಸುತ್ತಲೇ ಇದ್ದೆವು. ಏಶ್ಯದ ಆಚೆ ಟೆಸ್ಟ್‌ ಪಂದ್ಯಗಳನ್ನು ಗೆಲ್ಲುವುದು ನಮಗೆ ಮುಖ್ಯವಾಗಿತ್ತು. ಇದೀಗ ಸಾಕಾರಗೊಂಡಿದೆ. ನಮ್ಮ ಮೀಸಲು ಸಾಮರ್ಥ್ಯ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದೆ. ಆವರ್ತನ ಪದ್ಧತಿಗಂತೂ ಇದು ಬಹಳ ಪ್ರಯೋಜನಕಾರಿ’ ಎಂಬುದು ಬೌಲಿಂಗ್‌ ಕೋಚ್‌ ಬಿ. ಅರುಣ್‌ ಹೇಳಿಕೆ.

ಟಾಪ್ ನ್ಯೂಸ್

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.