ಸೋಮವಾರ ಭಾರತದ ವಿಶ್ವಕಪ್ ತಂಡ ಪ್ರಕಟ
Team Udayavani, Apr 9, 2019, 6:30 AM IST
ಹೊಸದಿಲ್ಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಗಾಗಿ ಭಾರತ ತಂಡವನ್ನು ಮುಂದಿನ ಸೋಮವಾರ (ಎ. 15) ಮುಂಬಯಿ ಯಲ್ಲಿ ಪ್ರಕಟಿಸಲಾಗುವುದು ಎಂದು ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ತಿಳಿಸಿದೆ.
ವಿಶ್ವಕಪ್ ಪಂದ್ಯಾವಳಿಗೆ ತಂಡ ವನ್ನು ಪ್ರಕಟಿಸಲು ಎ. 23 ಅಂತಿಮ ದಿನವಾಗಿದ್ದು, ಬಿಸಿಸಿಐ ಒಂದು ವಾರ ಮೊದಲೇ ತಂಡವನ್ನು ಅಂತಿಮಗೊಳಿಸಲಿದೆ.
ಸೋಮವಾರ ಹೊಸದಿಲ್ಲಿಯಲ್ಲಿ ಸಭೆ ಸೇರಿದ ಸಿಒಎ ಮತ್ತು ಬಿಸಿಸಿಐಯ ಮೂವರು ಸದಸ್ಯರು ಐಪಿಎಲ್ ಮತ್ತು ಕ್ರಿಕೆಟ್ ಆಪ ರೇಶನ್ಸ್ಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು. ಈ ವೇಳೆ “ಎಂ.ಎ. ಚಿದಂಬರಂ ಸ್ಟೇಡಿಯಂ’ನ 3 ಸ್ಟಾಂಡ್ಗಳ ಸಮಸ್ಯೆ ಬಗೆಹರಿಸಲು ಒಂದು ವಾರದ ಗಡುವು ವಿಧಿಸಿದರು. ಇಲ್ಲವಾದರೆ ಮೇ 12ರ ಐಪಿಎಲ್ ಫೈನಲ್ ಪಂದ್ಯವನ್ನು ಚೆನ್ನೈಯಿಂದ ಹೈದರಾಬಾದ್ಗೆ ಹಾಗೂ ಪ್ಲೇ ಆಫ್, ಎಲಿಮಿನೇಟರ್ ಪಂದ್ಯಗಳನ್ನು ಬೆಂಗಳೂರಿಗೆ ವರ್ಗಾಯಿಸುವ ಎಚ್ಚರಿಕೆ ನೀಡಲಾಯಿತು.
2012ರಿಂದಲೂ ವಿವಾದ…
ಚೆನ್ನೈ ಸ್ಟೇಡಿಯಂನ ಐ, ಜೆ ಮತ್ತು ಕೆ ಸ್ಟಾಂಡ್ಗಳು 2012ರಿಂದಲೂ ವಿವಾದದಲ್ಲಿದ್ದು, ಇದನ್ನು ಮುಂದಿನ ಒಂದು ವಾರದೊಳಗೆ ಬಗೆಹರಿಸ ಬೇಕೆಂದು ತಮಿಳುನಾಡು ಕ್ರಿಕೆಟ್ ಮಂಡಳಿಗೆ ಸೂಚಿಸಲಾಗಿದೆ. ಈ 3 ಸ್ಟಾಂಡ್ಗಳಿಗೆ ಸ್ಥಳೀಯ ನಗರಪಾಲಿಕೆ ಕ್ಷಮತೆಯ ಪ್ರಮಾಣಪತ್ರ ನೀಡದಿರು ವುದರಿಂದ, ಕ್ರಿಕೆಟ್ ಪಂದ್ಯಗಳ ವೇಳೆ ಇಲ್ಲಿ ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗುತ್ತಿದೆ.
ಸ್ಟಾಂಡ್ ವಿವಾದ: ಐಪಿಎಲ್ ಫೈನಲ್ ಶಿಫ್ಟ್?
“ಈ ಸ್ಟಾಂಡ್ಗಳು ಒಟ್ಟು 12 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿವೆ. ನೇರ ಪ್ರಸಾರದ ವೇಳೆ ಇದು ವಿಲಕ್ಷಣವಾಗಿ ಕಾಣುತ್ತದೆ. ಭಾರತ-ಪಾಕಿಸ್ಥಾನ ನಡುವೆ ನಡೆದ 2012ರ ಏಕದಿನ ಪಂದ್ಯದ ವೇಳೆಯಷ್ಟೇ ಇದಕ್ಕೆ ರಿಯಾಯಿತಿ ನೀಡಲಾಗಿತ್ತು. ಐಪಿಎಲ್ನಲ್ಲಿ ಚೆನ್ನೈ ಮುಂದಿನ ಸುತ್ತು ಪ್ರವೇಶಿಸಿದರೆ ತವರಿನ ಅನುಭವವನ್ನು ಕಳೆದುಕೊಳ್ಳಬಾರದು. ಹೀಗಾಗಿ ರಾಜ್ಯ ಕ್ರಿಕೆಟ್ ಮಂಡಳಿಗೆ ಒಂದು ವಾರದ ಗಡುವು ನೀಡಲಾಗಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು