ಐಪಿಎಲ್‌ ಹರಾಜು: ಬೆನ್‌ ಸ್ಟೋಕ್‌ 14 .5 ಕೋಟಿಗೆ ರೈಸಿಂಗ್‌ ಪುಣೆ ಪಾಲು


Team Udayavani, Feb 20, 2017, 10:48 AM IST

auction-players.jpg

ಬೆಂಗಳೂರು : ಐಪಿಎಲ್‌ ಟಿ-20 ಕೂಟದ 2017ರ ಸಾಲಿನ ಹತ್ತನೇ  ಆವೃತ್ತಿಗೆ ಇಂದಿಲ್ಲಿ ಆಟಗಾರರು ಹರಾಜು ನಡೆದಿದ್ದು 2 ಕೋಟಿ ರೂ. ಮೂಲ ದರಕ್ಕೆ ತಮ್ಮನ್ನು ಹರಾಜಿಗೆ ಒಡ್ಡಿಕೊಂಡಿದ್ದ ಬೆನ್‌ ಸ್ಟೋಕ್‌ ಅವರು 14.5 ಕೋಟಿ ರೂ.ಗೆ ರೈಸಿಂಗ್‌ ಪುಣೆ ತಂಡಕ್ಕೆ ಹರಾಜಾಗಿರುವುದು ಈ ವರೆಗಿನ, ಈ ಸಾಲಿನ ಅತೀ ದೊಡ್ಡ  ಮೊತ್ತದ ಹರಾಜೆಂದು ಪರಿಗಣಿಸಲಾಗಿದೆ.

ಇಂಗ್ಲಂಡ್‌ ಆಟಗಾರ, ಎಡಗೈ ವೇಗದ ಎಸೆಗಾರ ಟೈಮಲ್‌ ಮಿಲ್ಸ್‌ ಅವರನ್ನು ಬೆಂಗಳೂರು ರಾಯಲ್‌ ಚ್ಯಾಲೆಂಜರ್ 12 ಕೋಟಿ ರೂ. ಗೆ ಖರೀದಿಸಿದ್ದು, ಬೆನ್‌ ಸ್ಟೋಕ್‌ ಬಳಿಕದ ಗರಿಷ್ಠ ದಾಖಲೆ ಮೊತ್ತಕ್ಕೆ ಆಗಿರುವ ಸೇಲ್‌ ಇದಾಗಿದೆ.

ಅಫ್ಘಾನಿಸ್ಥಾನದ ಲೆಗ್‌ ಸ್ಪಿನ್ನರ್‌ ರೀಶೀದ್‌ ಖಾನ್‌ ಅರ್ಮಾನ್‌ ಹೈದರಾಬಾದ್‌ ಸನ್‌ರೈಸರ್‌ಗೆ 4 ಕೋಟಿ ರೂ.ಗೆ ಸೇಲಾಗುವ ಮೂಲಕ ಎಚ್ಚರನ್ನೂ ಅಚ್ಚರಿಗೊಳಿಸಿದ್ದಾರೆ.

ಇದೇ ರೀತಿ ಸ್ಪಿನ್‌ ಎಸೆಗಾರ ಹಾಗೂ ಆಲ್‌ ರೌಂಡರ್‌ ಮೊಹಮ್ಮದ್‌ ನಬೀ ಅವರನ್ನು  ಕೂಡ ಎಸ್‌ಆರ್‌ಎಚ್‌  ಇದೇ ಮೊತ್ತಕ್ಕೆ ಖರೀದಿಸಿದೆ.

ತಮಿಳು ನಾಡಿನ ಟಿ ನಟರಾಜನ್‌ ಅವರು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಗೆ 3 ಕೋಟಿ ರೂ.ಗೆ ಸೇಲಾಗಿದ್ದಾರೆ. ಇವರ ಮೂಲ ಬೆಲೆ 10 ಲಕ್ಷ ರೂ. 

ವರುಣ್‌ ಆರೋನ್‌ ಅವರನ್ನು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 2.8 ಕೋಟಿ ರೂ.ಗೆ ಖರೀದಿಸಿದೆ; ಲೆಗ್‌ ಸ್ಪಿನ್ನರ್‌ ಕಣ್‌ì ಶರ್ಮಾ ಅವರನ್ನು ಮುಂಬಯಿ ಇಂಡಿಯನ್ಸ್‌ 3.2 ಕೋಟಿ ರೂ.ಗೆ ಖರೀದಿಸಿದೆ.

ಪವನ್‌ ನೇಗಿಯನ್ನು ಆರ್‌ಸಿಬಿ 1 ಕೋಟಿ ರೂ.ಗೆ ಖರೀದಿಸಿದೆ.

ಚೇತೇಶ್ವರ್‌ ಪೂಜಾರ ಮತ್ತು ಇಶಾಂತ್‌ ಶರ್ಮಾ ಹರಾಜಿನಲ್ಲಿ ಸೇಲಾಗದಿರುವುದು ಅಚ್ಚರಿ ಹಾಗೂ ಇರಿಸುಮುರಿಸು ಉಂಟುಮಾಡಿದೆ.

ಇದೇ ವೇಳೆ ಏಜೆಂಲಾ ಮ್ಯಾಥ್ಯೂಸ್‌, ಕ್ರಿಸ್‌ ವೋಕ್ಸ್‌, ಇಯಾನ್‌ ಮಾರ್ಗನ್‌, ಇಶಾಂತ್‌ ಶರ್ಮಾ, ಮಿಚೆಲ್‌ ಜಾನ್‌ಸನ್‌ ಮತ್ತು ಪ್ಯಾಟ್‌ ಕ್ಯುಮಿನ್ಸ್‌  ಅತ್ಯಂತ ದುಬಾರಿ ಆಟಗಾರರೆಂದು ಹರಾಜಿನಲ್ಲಿ ಪರಿಗಣಿತರಾಗಿದ್ದಾರೆ.

ವೇಗದ ಎಸೆಗಾರ ಕ್ಯಾಸಿಗೋ ರಬಾಡಾ ಅವರು ತಮ್ಮ ಮೂಲ ಬೆಲೆ 1 ಕೋಟಿ ರೂ.ಗೆ ಹರಾಜಾಗಿದ್ದಾರೆ.

ನಿಕೋಲಸ್‌ ಪೂರಾನ್‌ ಅವರು (ಮೂಲ ಬೆಲೆ 30 ಲಕ್ಷ ರೂ.) ಮುಂಬಯಿ ಇಂಡಿಯನ್ಸ್‌ ತಂಡದ ಪಾಲಾಗಿದ್ದಾರೆ. 

ಕೋರೆ ಆ್ಯಂಡರ್‌ಸನ್‌ (ಮೂಲ ಬೆಲೆ 1 ಕೋಟಿ ರೂ.) ಅವರು ಡೆಲ್ಲಿ ಡ್ಯಾರ್‌ ಡೆವಿಲ್ಸ್‌ ತಂಡದ ಪಾಲಾಗಿದ್ದಾರೆ.

ವೇಗದ ಎಸೆಗಾರ ಅನಿಕೇತ್‌ ಚೌಧರಿ ಅವರು 2 ಕೋಟಿ ರೂ.ಗೆ ರಾಯಲ್‌ ಚ್ಯಾಲೆಂಜರ್ ತಂಡದ ಪಾಲಾಗಿದ್ದಾರೆ. ಇವರ ಮೂಲ ಬೆಲೆ 10 ಲಕ್ಷ ರೂ. ಆಗಿದ್ದು 20 ಪಟ್ಟು ಹೆಚ್ಚು ಬೆಲೆಗೆ ಸೇಲಾಗಿರುವುದು ಗಮನಾರ್ಹವಾಗಿದೆ.

ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ 10 ಲಕ್ಷ ರೂ.ಗಳ ತಮ್ಮ ಮೂಲ ಬೆಲೆಯ ಇಪ್ಪತ್ತು ಪಟ್ಟು ಅಧಿಕ ಬೆಲೆಯಾಗಿ 2 ಕೋಟಿ ರೂ.ಗೆ ಮುಂಬಯಿ ಇಂಡಿಯನ್‌ ತಂಡಕ್ಕೆ ಸೇಲಾಗಿದ್ದಾರೆ. 

ತಮಿಳುನಾಡಿನ ಎಡಗೈ ವೇಗದ ಎಸೆಗಾರ ಟಿ ನಟರಾಜನ್‌ 3 ಕೋಟಿ ರೂ.ಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಗೆ ಸೇಲಾಗಿದ್ದಾರೆ. 

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.