ಐಪಿಎಲ್: ವೇಗಿ ಸೌಥಿಗೆ ವಾಗ್ಧಂಡನೆ
Team Udayavani, May 19, 2018, 6:00 AM IST
ಬೆಂಗಳೂರು: ಆರ್ಸಿಬಿ ವೇಗದ ಬೌಲರ್ ಟಿಮ್ ಸೌಥಿಗೆ ಐಪಿಎಲ್ ರೆಫ್ರಿ ವಾಗ್ಧಂಡನೆ ವಿಧಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಮೈದಾನ’ದಲ್ಲಿ ಸನ್ರೈಸರ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಅಶಿಸ್ತಿನ ವರ್ತನೆ ತೋರಿದ್ದಾರೆಂದು ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಯಾವ ತಪ್ಪು ಎನ್ನುವುದನ್ನು ಖಚಿತಪಡಿಸಿಲ್ಲ.
ಊಹೆಗಳ ಪ್ರಕಾರ ಟಿಮ್ ಸೌಥಿ, ಟಿವಿ ತೀರ್ಪುಗಾರರ ನಿರ್ಧಾರವನ್ನು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಕ್ಕೆ ಈ ಕ್ರಮ ಎನ್ನಲಾಗಿದೆ. ಅವರು ಹೈದರಾಬಾದ್ ಬ್ಯಾಟ್ಸ್ಮನ್ ಅಲೆಕ್ಸ್ ಹೇಲ್ಸ್ ಕ್ಯಾಚ್ ಪಡೆದಿದ್ದರು. ಅದನ್ನು ಮೈದಾನದ ಅಂಪಾಯರ್ ಪರಿಗಣಿಸಿದ್ದರೂ ತೃತೀಯ ಅಂಪಾಯರ್ ತಿರಸ್ಕರಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಸೌದಿ, “ನಾನು ಆ ಕ್ಯಾಚನ್ನು ಸ್ಪಷ್ಟವಾಗಿ ಹಿಡಿದಿದ್ದೆ. ಆದರೆ ಟಿವಿಯಲ್ಲಿ ಅದು ಕೆಟ್ಟದಾಗಿ ಕಂಡಿತ್ತು ಅಷ್ಟೇ. ಏನಾದರೂ ಅದು ತೃತೀಯ ಅಂಪಾಯರ್ ನಿರ್ಧಾರ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ