ಪಂಜಾಬ್‌-ಮುಂಬೈ; ಮೊಹಾಲಿ ಮೇಲಾಟ

ಪಂಜಾಬ್‌ಗ ಮೊದಲ ತವರು ಪಂದ್ಯ ; ಮುಂಬೈಗೆ ಅದೃಷ್ಟದ  ಬಲ?

Team Udayavani, Mar 30, 2019, 6:04 AM IST

Kings-XI-Punjab-vs-Mumbai-Indians

ಮೊಹಾಲಿ: ಗುರುವಾರವಷ್ಟೇ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ “ಅದೃಷ್ಟದ ಗೆಲುವು’ ಸಾಧಿಸಿದ ಮುಂಬೈ ಇಂಡಿಯನ್ಸ್‌ ಮತ್ತೂಂದು ಪಂದ್ಯಕ್ಕೆ ಅಣಿಯಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ ರೋಹಿತ್‌ ಪಡೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ದ ಸೆಣಸಲಿದೆ. ಈ ಮೇಲಾಟ ಮೊಹಾಲಿಯಲ್ಲಿ ನಡೆಯಲಿದ್ದು, ಪಂಜಾಬ್‌ಗ ಮೊದಲ ತವರು ಪಂದ್ಯವಾಗಿದೆ.

ಎರಡೂ ತಂಡಗಳು ಒಂದು ಗೆಲುವು, ಒಂದು ಸೋಲಿನ ದಾಖಲೆ ಹೊಂದಿವೆ. ರಾಜಸ್ಥಾನ್‌ ವಿರುದ್ದ ಜೈಪುರದಲ್ಲಿ ಗೆಲುವು ಸಾಧಿಸಿದ ಪಂಜಾಬ್‌, ಬಳಿಕ ಈಡನ್‌ನಲ್ಲಿ ಕೆಕೆಆರ್‌ಗೆ ಶರಣಾಗಿತ್ತು. ಇನ್ನೊಂದೆಡೆ ಮುಂಬೈ ತವರಿನ ವಾಂಖೇಡೆಯಲ್ಲೇ ಡೆಲ್ಲಿಗೆ ಸೋತ ಬಳಿಕ, ಗುರುವಾರವ ರಾತ್ರಿ ಬೆಂಗಳೂರಿನಲ್ಲಿ ಆತಿಥೇಯ ಆರ್‌ಸಿಬಿ ವಿರುದ್ಧ ರೋಚಕ ಜಯ ಸಾಧಿಸಿತು. ನೋಬಾಲ್‌ ವಿವಾದದಿಂದ ಈ ಪಂದ್ಯಕ್ಕೆ ಕಳಂಕ ಮೆತ್ತಿಕೊಂಡರೂ ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರ ಸುಳ್ಳಲ್ಲ.

ಮುಂಬೈ ಬಲಿಷ್ಠ ಬೌಲಿಂಗ್‌
ಬೌಲಿಂಗೇ ಮಂಬೈ ತಂಡದ ಪ್ರಧಾನ ಅಸ್ತ್ರ. ಆರ್‌ಸಿಬಿ ವಿರುದ್ಧವೂ ಸೋಲಿನ ಭೀತಿಯಲ್ಲಿದ್ದ ಮುಂಬೈಗೆ 19ನೇ ಓವರ್‌ ಎಸೆದ ಬುಮ್ರಾ ದೊಡ್ಡ ರಿಲೀಫ್ ನೀಡಿದ್ದರು. ಕೊನೆಯಲ್ಲಿ ಮಾಲಿಂಗ ನಿಯಂತ್ರಣ ಸಾಧಿಸಿದರು. ನೋಬಾಲ್‌ ಕಪ್ಪುಚುಕ್ಕಿ ಬೇರೆ ವಿಷಯ.

ಸೀನಿಯರ್‌ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ತುಂಬಿದೆ. ಆರ್‌ಸಿಬಿ ವಿರುದ್ಧ ಅವರು ಚಾಹಲ್‌ಗೆ ಹ್ಯಾಟ್ರಿಕ್‌ ಸಿಕ್ಸರ್‌ಗಳ ರುಚಿ ತೋರಿಸಿದ್ದರು. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಕೂಡ ಲಯದಲ್ಲಿದ್ದಾರೆ. ಡಿ ಕಾಕ್‌, ರೋಹಿತ್‌, ಸೂರ್ಯಕುಮಾರ್‌ ನಂಬುಗೆಯ ಬ್ಯಾಟ್ಸ್‌ಮನ್‌ಗಳು. ಆದರೆ ಪೊಲಾರ್ಡ್‌ ಫೇಲ್‌ ಆಗಿದ್ದಾರೆ. ಉಳಿದ ಕೆರಿಬಿಯನ್‌ ಕ್ರಿಕೆಟಿಗರಂತೆ ಪೊಲಾರ್ಡ್‌ ಕೂಡ ಸಿಡಿಯಬೇಕಿದೆ.

ಪಂಜಾಬ್‌ಗ ಗೇಲ್‌ ಬಲ
ರಾಜಸ್ಥಾನ್‌ ವಿರುದ್ದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಿಸ್‌ ಗೇಲ್‌ ಪಂಜಾಬ್‌ನ ಅಪಾಯಕಾರಿ ಬ್ಯಾಟ್ಸ್‌ಮನ್‌. ಆದರೆ ಕಳೆದ ಬಾರಿ ಮಿಂಚಿದ ರಾಹುಲ್‌, ಆ್ಯಂಡ್ರೂé ಟೈ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗಿದ್ದಾರೆ.

ಬೌಲಿಂಗ್‌ನಲ್ಲೂ ಶಮಿ, ಅಶ್ವಿ‌ನ್‌ ಹೊರತುಪಡಿಸಿದರೆ ಉಳಿದವರಿಂದ ಘಾತಕ ಸ್ಪೆಲ್‌ ಕಂಡುಬಂದಿಲ್ಲ. ಹೀಗಾಗಿ ಗೇಲ್‌ ಬ್ಯಾಟಿಂಗ್‌ ಮೇಲೆ ಪಂಜಾಬ್‌ ಹೆಚ್ಚು ಭರವಸೆ ಇಡಬೇಕಾಗಿದೆ. ಮೊದಲ ಪಂದ್ಯದ ತಪ್ಪನ್ನು ತಿದ್ದುವ ಪ್ರಯತ್ನದಲ್ಲಿ ಕೆಕೆಆರ್‌ ವಿರುದ್ಧ ಪಂಜಾಬ್‌ 5 ಬಬಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಮಿಲ್ಲರ್‌ ಮಾತ್ರ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರು.ತವರಿನ ಪಂದ್ಯವಾದ್ದರಿಂದ ಪಂಜಾಬ್‌ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.