ಸಶಕ್ತ, ಸಮತೋಲಿತ ತಂಡದ ಅಗತ್ಯವಿದೆ: ಕೊಹ್ಲಿ


Team Udayavani, Apr 4, 2019, 6:00 AM IST

c-6

ಜೈಪುರ: ಆರ್‌ಸಿಬಿ ಬಂಡಿ ಸತತ 4ನೇ ಸಲ ಹಳಿ ತಪ್ಪಿದೆ. ಮಂಗಳವಾರ ರಾತ್ರಿ “ಜೈಪುರ’ ಕೂಡ ಬೆಂಗಳೂರು ತಂಡದ ಪಾಲಿಗೆ “ಸೋಲಿನ ಪುರ’ವಾಯಿತು. ಸೋಲಿಗೆ ಕಾರಣ ಹೇಳಿ ಹೇಳಿ ಸುಸ್ತಾದಂತೆ ಕಂಡು ಬಂದ ನಾಯಕ ವಿರಾಟ್‌ ಕೊಹ್ಲಿ, ಮುಂಬರುವ ಪಂದ್ಯಗಳಲ್ಲಿ ಸಶಕ್ತ ಆಡುವ ಬಳಗವನ್ನು ಕಣಕ್ಕಿಳಿಸುವ ಸೂಚನೆ ನೀಡಿದರು.

ರಾಜಸ್ಥಾನ್‌ ಮತ್ತು ಆರ್‌ಸಿಬಿ ಸತತ 3 ಸೋಲುಂಡು ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾಗಿದ್ದವು. ಇವುಗಳಲ್ಲೀಗ ಅಜಿಂಕ್ಯ ರಹಾನೆ ಬಳಗಕ್ಕೆ ಸೋಲಿನಿಂದ ಮುಕ್ತಿ ಸಿಕ್ಕಿದೆ. ಕೊಹ್ಲಿ ಪಡೆ ಮಾತ್ರ ಸೋಲಿನ ಕಂದಕದಿಂದ ಮೇಲೇಳುವ ಸೂಚನೆ ನೀಡಿಲ್ಲ.

“ಇಂದು ನಾವು ಹೆಚ್ಚು ಸಮರ್ಥರಿದ್ದೆವು. ಆದರೆ 15-20 ರನ್‌ ಕೊರತೆ ಕಾಡಿತು. 160 ರನ್‌ ಈ ಪಿಚ್‌ನಲ್ಲಿ ಧಾರಾಳವಾಗಿತ್ತು. ಆದರೆ ಇಬ್ಬನಿ ಬೀಳುತ್ತಿದ್ದುದರಿಂದ ಇನ್ನೂ 15 ರನ್‌ ಹೆಚ್ಚು ಮಾಡಿದ್ದರೆ ಪಂದ್ಯ ಹೆಚ್ಚು ಸವಾಲಿನಿಂದ ಕೂಡಿರುತ್ತಿತ್ತು’ ಎಂದು ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟರು.

“ಇಲ್ಲಿ ಬೌಂಡರಿ ಅಷ್ಟೊಂದು ಸುಲಭದಲ್ಲಿ ಬರುತ್ತಿರಲಿಲ್ಲ. ನಮ್ಮ ಫೀಲ್ಡಿಂಗ್‌ ಕೂಡ ಕಳಪೆ ಮಟ್ಟದಲ್ಲಿತ್ತು, ಅನೇಕ ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ರಹಾನೆ ಮತ್ತು ಸ್ಮಿತ್‌ಗೆ ಜೀವದಾನ ನೀಡಿದೆವು. ಇದು ದುಬಾರಿಯಾಗಿ ಪರಿಣಮಿಸಿತು’ ಎಂದರು.

“ತಂಡದ ಕಾಂಬಿನೇಶನ್‌ ಬಗ್ಗೆ ಯೋಚಿಸಬೇಕಾಗಿ ಬಂದಿದೆ. ಸಶಕ್ತ ಹಾಗೂ ಸಮರ್ಥ ಆಟಗಾರರನ್ನೊಳಗೊಂಡ ಸಮತೋಲಿತ ತಂಡವೊಂದನ್ನು ಕಟ್ಟುವತ್ತ ಮುಂದಡಿ ಇಡಬೇಕಿದೆ. ನಮ್ಮಲ್ಲಿ ಯುವ ಆಟಗಾರರ ಸಂಖ್ಯೆ ಸಾಕಷ್ಟಿದ್ದು, ಇವರಿಗೆ ಅವಕಾಶ ನೀಡಿ ಮ್ಯಾಚ್‌ ವಿನ್ನಿಂಗ್‌ ಸಾಧನೆ ಹೊರಹೊಮ್ಮುವುದನ್ನು ನಿರೀಕ್ಷಿಸಬೇಕಿದೆ’ ಎಂಬುದಾಗಿ ಕೊಹ್ಲಿ ಹೇಳಿದರು.

ಗೋಪಾಲ್‌ಗೆ ಶ್ರೇಯಸ್ಸು
ಈ ಗೆಲುವಿನ ಶ್ರೇಯಸ್ಸು ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ಗೆ
ಸಲ್ಲಬೇಕು ಎಂದವರು ರಾಜಸ್ಥಾನ್‌ ನಾಯಕ ಅಜಿಂಕ್ಯ ರಹಾನೆ. “ಕೊಹ್ಲಿ ಮತ್ತು ಎಬಿಡಿ ವಿರುದ್ಧ ಉತ್ತಮ ದಾಖಲೆ ಹೊಂದಿದ್ದ ಗೋಪಾಲ್‌ ಇಲ್ಲಿಯೂ ಯಶಸ್ಸು ಸಂಪಾದಿಸಿದರು. 3-4 ಓವರ್‌ಗಳಲ್ಲೇ ಇದು ನಿಧಾನ ಗತಿಯ ಟ್ರ್ಯಾಕ್‌ ಎಂಬುದು ತಿಳಿಯಿತು. ಹೀಗಾಗಿ ಸ್ಪಿನ್ನರ್‌ಗಳನ್ನು ಕೂಡಲೇ ದಾಳಿಗಿಳಿಸಿದೆವು. ಪವರ್‌ ಪ್ಲೇ ಅವಧಿಯಲ್ಲಿ ಗೌತಮ್‌ ಅಮೋಘ ನಿಯಂತ್ರಣ ಸಾಧಿಸಿದರು. ಗೋಪಾಲ್‌ ದೊಡ್ಡ ಬೇಟೆಯಾಡತೊಡಗಿದರು. ಅಂಕದ ಖಾತೆ ತೆರೆದುದರಿಂದ ದೊಡ್ಡದೊಂದು ರಿಲೀಫ್ ಸಿಕ್ಕಿದೆ. ಹಿಂದಿನ ಮೂರೂ ಪಂದ್ಯಗಳಲ್ಲಿ ನಮ್ಮ ಪ್ರದರ್ಶನ ಉತ್ತಮ ಮಟ್ಟದಲ್ಲೇ ಇತ್ತು. ಇಂದು ಶೇ. ನೂರಕ್ಕೂ ಹೆಚ್ಚಿನ ಪರಿಶ್ರಮ ಹಾಕಿದೆವು…’ ಎಂದು ರಹಾನೆ ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 158 ರನ್‌ ಗಳಿಸಿದರೆ, ರಾಜಸ್ಥಾನ್‌ 19.5 ಓವರ್‌ಗಳಲ್ಲಿ 3 ವಿಕೆಟಿಗೆ 164 ರನ್‌ ಬಾರಿಸಿ ಗೆಲುವಿನ ಖಾತೆ ತೆರೆಯಿತು. ನಾಯಕ ಅಜಿಂಕ್ಯ ರಹಾನೆ 22, ಜಾಸ್‌ ಬಟ್ಲರ್‌ 59, ಸ್ಟೀವನ್‌ ಸ್ಮಿತ್‌ 38, ರಾಹುಲ್‌ ತ್ರಿಪಾಠಿ ಔಟಾಗದೆ 34 ರನ್‌ ಮಾಡಿ ತಂಡಕ್ಕೆ ಮೊದಲ ಜಯ ತಂದಿತ್ತರು. ಆರ್‌ಸಿಬಿ ಸರದಿಯಲ್ಲಿ ಮಿಂಚಿದ್ದು ಪಾರ್ಥಿವ್‌ ಪಟೇಲ್‌ ಮಾತ್ರ.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಆರ್‌ಸಿಬಿ ಪ್ರಸಕ್ತ ಐಪಿಎಲ್‌ ಋತುವಿನ ಎಲ್ಲ 4 ಪಂದ್ಯಗಳನ್ನು ಸೋತಿತು. ಇದರೊಂದಿಗೆ ಕಳೆದ ಋತುವಿನ ಪಂದ್ಯವೂ ಸೇರಿದಂತೆ ಆರ್‌ಸಿಬಿ ಸತತ 5 ಪಂದ್ಯಗಳನ್ನು ಸೋತಂತಾಯಿತು. ಇದು ಆರ್‌ಸಿಬಿಯ 2ನೇ ಅತೀ ದೊಡ್ಡ ಸೋಲಿನ ಸರಮಾಲೆ. 2008ರ ಆರಂಭದ ಋತುವಿನಲ್ಲೂ ಆರ್‌ಸಿಬಿ ಸತತ 5 ಪಂದ್ಯಗಳಲ್ಲಿ ಎಡವಿತ್ತು. 2017ರಲ್ಲಿ ಸತತ 6 ಪಂದ್ಯಗಳನ್ನು ಸೋತದ್ದು ದಾಖಲೆ.

ಶ್ರೇಯಸ್‌ ಗೋಪಾಲ್‌ ಐಪಿಎಲ್‌ನಲ್ಲಿ 2ನೇ ಸಲ ಒಂದೇ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ವಿಕೆಟ್‌ಗಳನ್ನು ಉರುಳಿಸಿದರು. ಕಳೆದ ವರ್ಷದ ಬೆಂಗಳೂರು ಪಂದ್ಯದಲ್ಲೂ ಅವರು ಈ ಸಾಧನೆ ಮಾಡಿದ್ದರು.

ಶ್ರೇಯಸ್‌ ಗೋಪಾಲ್‌ 2 ಸಲ ಒಂದೇ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ಅವರನ್ನು ಔಟ್‌ ಮಾಡಿದ 2ನೇ ಬೌಲರ್‌. ಆಶಿಷ್‌ ನೆಹ್ರಾ ಮೊದಲಿಗ. ಈ ವರೆಗೆ ಒಟ್ಟು 17 ಮಂದಿ ಕೊಹ್ಲಿ ಮತ್ತು ಎಬಿಡಿ ಅವರನ್ನು ಒಂದೇ ಪಂದ್ಯದಲ್ಲಿ ಔಟ್‌ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಎಬಿಡಿ-ಶ್ರೇಯಸ್‌ ಗೋಪಾಲ್‌ ಈ ವರೆಗೆ 3 ಸಲ ಮುಖಾಮುಖಿಯಾಗಿದ್ದು, ಎಲ್ಲ 3 ಸಂದರ್ಭಗಳಲ್ಲೂ ಗೋಪಾಲ್‌ ಅವರೇ ಈ ಹೊಡಿಬಡಿ ಆಟಗಾರನ ವಿಕೆಟ್‌ ಉರುಳಿಸಿದ್ದಾರೆ. ಎಬಿಡಿಗೆ ಗೋಪಾಲ್‌ ಒಟ್ಟು 27 ಎಸೆತವಿಕ್ಕಿದ್ದು, 21 ರನ್‌ ನೀಡಿದ್ದಾರೆ.

ಆರ್‌ಸಿಬಿ ವಿರುದ್ಧ 3 ಪಂದ್ಯಗಳನ್ನಾಡಿರುವ ಗೋಪಾಲ್‌ 50 ರನ್‌ ನೀಡಿ 9 ವಿಕೆಟ್‌ ಹಾರಿಸಿದರು.

ವಿರಾಟ್‌ ಕೊಹ್ಲಿ ನಾಯಕನಾಗಿ 100 ಐಪಿಎಲ್‌ ಪಂದ್ಯಗಳನ್ನು ಪೂರ್ತಿಗೊಳಿಸಿದರು. ಈ ನೂರೂ ಪಂದ್ಯಗಳಲ್ಲಿ ಅವರು ಆರ್‌ಸಿಬಿ ತಂಡದ ನಾಯಕನಾಗಿದ್ದರು.

ಕೊಹ್ಲಿ 100 ಐಪಿಎಲ್‌ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ 3ನೇ ಕ್ರಿಕೆಟಿಗ. ಧೋನಿ (162) ಮತ್ತು ಗಂಭೀರ್‌ (129) ಉಳಿದಿಬ್ಬರು.

ಪಾರ್ಥಿವ್‌ ಪಟೇಲ್‌ ಟಿ20 ಪಂದ್ಯಗಳಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದರು (4,010 ರನ್‌). ಅವರು ಈ ಸಾಧನೆ ಮಾಡಿದ ವಿಶ್ವದ 87ನೇ, ಭಾರತದ 16ನೇ ಆಟಗಾರ.

ಪಾರ್ಥಿವ್‌ ಪಟೇಲ್‌ ಐಪಿಎಲ್‌ನಲ್ಲಿ 12ನೇ ಅರ್ಧ ಶತಕ ಹೊಡೆದರು. ಒಟ್ಟಾರೆಯಾಗಿ ಇದು ಅವರ 22ನೇ ಟಿ20 ಅರ್ಧ ಶತಕ.

ಜಾಸ್‌ ಬಟ್ಲರ್‌ ತವರಿನ ಜೈಪುರ ಐಪಿಎಲ್‌ ಪಂದ್ಯಗಳಲ್ಲಿ ಸತತ 4ನೇ ಅರ್ಧ ಶತಕ ಹೊಡೆದರು.

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ-4 ವಿಕೆಟಿಗೆ 158. ರಾಜಸ್ಥಾನ್‌-19.5 ಓವರ್‌ಗಳಲ್ಲಿ 3 ವಿಕೆಟಿಗೆ 164 (ಬಟ್ಲರ್‌ 59, ಸ್ಮಿತ್‌ 38, ತ್ರಿಪಾಠಿ ಔಟಾಗದೆ 34, ರಹಾನೆ 22, ಚಾಹಲ್‌ 17ಕ್ಕೆ 2, ಸಿರಾಜ್‌ 25ಕ್ಕೆ 1). ಪಂದ್ಯಶ್ರೇಷ್ಠ: ಶ್ರೇಯಸ್‌ ಗೋಪಾಲ್‌.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.