ಸೂರ್ಯನನ್ನು ಮುಳುಗಿಸಿದ ಪೃಥ್ವಿ, ಪಂತ್‌

ರೋಚಕ ಎಲಿಮಿನೇಟರ್‌ ; ಡೆಲ್ಲಿಗೆ ಕಷ್ಟದ ಗೆಲುವು ; ಹೈದರಾಬಾದ್‌ ಔಟ್‌

Team Udayavani, May 9, 2019, 6:00 AM IST

PTI5_8_2019_000266B

ವಿಶಾಖಪಟ್ಟಣ: ಪೃಥ್ವಿ ಶಾ ಮತ್ತು ರಿಷಭ್‌ ಪಂತ್‌ ಸಾಹಸದಿಂದ ಹೈದರಾಬಾದನ್ನು 2 ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌ “ಎಲಿಮಿನೇಟರ್‌ ಹರ್ಡಲ್ಸ್‌’ ದಾಟಿದೆ. ಚೆನ್ನೈ ವಿರುದ್ಧ 2ನೇ ಕ್ವಾಲಿಫೈಯರ್‌ಗೆ ಅಣಿಯಾಗಿದೆ. ಕಳೆದ ಸಲದ ರನ್ನರ್ ಅಪ್‌ ಹೈದರಾಬಾದ್‌ ಕೂಟದಿಂದ ಹೊರಬಿದ್ದಿದೆ.ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 8 ವಿಕೆಟಿಗೆ 162 ರನ್‌ ಪೇರಿಸಿದರೆ, ಡೆಲ್ಲಿ 19.5 ಓವರ್‌ಗಳಲ್ಲಿ 8 ವಿಕೆಟಿಗೆ 165 ರನ್‌ ಬಾರಿಸಿತು.

ಡೆಲ್ಲಿಗೆ ಪೃಥ್ವಿ ಶಾ ದಿಟ್ಟ ಆರಂಭ ಒದಗಿಸಿದರು. 38 ಎಸೆತಗಳಿಂದ 56 ರನ್‌ (6 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಭರವಸೆ ಮೂಡಿಸಿದರು. ಶಾ ನಿರ್ಗಮನದ ಬಳಿಕ ರಶೀದ್‌ ಖಾನ್‌ ಮೇಡನ್‌ ಓವರ್‌ ಒಂದರಲ್ಲಿ ಅವಳಿ ವಿಕೆಟ್‌ ಹಾರಿಸಿ ಪಂದ್ಯಕ್ಕೆ ತಿರುವು ಒದಗಿಸಿದರು. ಆದರೆ ಪಂತ್‌ ಪಂಥಾಹ್ವಾನ ಸ್ವೀಕರಿಸಿದರು (21 ಎಸೆತ, 49 ರನ್‌, 2 ಬೌಂಡರಿ, 5 ಸಿಕ್ಸರ್‌).

ಹೈದರಾಬಾದ್‌ ಆರಂಭ ಉತ್ತಮವಾಗಿಯೇ ಇತ್ತು. ಗಪ್ಟಿಲ್‌-ಸಾಹಾ ಸೇರಿಕೊಂಡು ಹತ್ತರ ಸರಾಸರಿಯಲ್ಲಿ ರನ್‌ ಪೇರಿಸುತ್ತ 3.1 ಓವರ್‌ಗಳಲ್ಲಿ 31 ರನ್‌ ಪೇರಿಸಿದರು. ಆಗ ಇಶಾಂತ್‌ ಶರ್ಮ ಈ ಜೋಡಿಯನ್ನು ಬೇರ್ಪಡಿಸಿದರು. ಟ್ರೆಂಟ್‌ ಬೌಲ್ಟ್ ಎಸೆದ ಇನ್ನಿಂಗ್ಸಿನ ಮೊದಲ ಎಸೆತದಲ್ಲೇ ಲೆಗ್‌ ಬಿಫೋರ್‌ ಬಲೆಯಿಂದ ಪಾರಾದ ಸಾಹಾಗೆ ಇದರ ಲಾಭವೆತ್ತಲಾಗಲಿಲ್ಲ. ಅವರ ಗಳಿಕೆ ಕೇವಲ 8 ರನ್‌.

ಇನ್ನೊಂದೆಡೆ ಮಾರ್ಟಿನ್‌ ಗಪ್ಟಿಲ್‌ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸುತ್ತ ಪವರ್‌ ಪ್ಲೇ ಗಡಿ ದಾಟಿದರು. ಆದರೆ ಮುಂದಿನ ಮೂರೇ ಎಸೆತಗಳಲ್ಲಿ ಅಮಿತ್‌ ಮಿಶ್ರಾ ಮೋಡಿಗೆ ಸಿಲುಕಿದರು. ಗಪ್ಟಿಲ್‌ ಗಳಿಕೆ 19 ಎಸೆತಗಳಿಂದ 36 ರನ್‌. ಸಿಡಿಸಿದ್ದು 4 ಸಿಕ್ಸರ್‌ ಮತ್ತು ಒಂದು ಬೌಂಡರಿ. ಇದು ಹೈದರಾಬಾದ್‌ ಸರದಿಯ ಗರಿಷ್ಠ ಗಳಿಕೆಯಾಗಿತ್ತು.

ಸನ್‌ರೈಸರ್ ಓಟಕ್ಕೆ ಬ್ರೇಕ್‌
ಗಪ್ಟಿಲ್‌ ನಿರ್ಗಮನದ ಬಳಿಕ ಸನ್‌ರೈಸರ್ ರನ್‌ಗತಿಗೆ ಭಾರೀ ಬ್ರೇಕ್‌ ಬಿತ್ತು. ಮೊದಲ 6 ಓವರ್‌ಗಳಲ್ಲಿ 54 ರನ್‌ ಮಾಡಿದ್ದ ವಿಲಿಯಮ್ಸನ್‌ ಪಡೆ, ಮುಂದಿನ 9 ಓವರ್‌ಗಳಲ್ಲಿ ಕೇವಲ 50 ರನ್‌ ಗಳಿಸಿತು. ಅಂತಿಮ 5 ಓವರ್‌ಗಳಲ್ಲಿ 58 ರನ್‌ ಸಂಗ್ರಹಿಸಿದ್ದರಿಂದ 160ರ ಗಡಿ ದಾಟಲು ಸಾಧ್ಯವಾಯಿತು.ವನ್‌ಡೌನ್‌ನಲ್ಲಿ ಬಂದ ಮನೀಷ್‌ ಪಾಂಡೆ 30 ರನ್‌ ಮಾಡಿದರೂ ಅವರ ಆಟದಲ್ಲಿ ಬಿರುಸಿರಲಿಲ್ಲ. ಇದಕ್ಕಾಗಿ 36 ಎಸೆತ ಎದುರಿಸಿ 3 ಬೌಂಡರಿ ಹೊಡೆದರು.

ಸ್ಕೋರ್‌ಪಟ್ಟಿ
ಸನ್‌ರೈಸರ್ ಹೈದರಾಬಾದ್‌
ವೃದ್ಧಿಮಾನ್‌ ಸಾಹಾ ಸಿ ಅಯ್ಯರ್‌ ಬಿ ಇಶಾಂತ್‌ 8
ಮಾರ್ಟಿನ್‌ ಗಪ್ಟಿಲ್‌ ಸಿ ಪೌಲ್‌ ಬಿ ಮಿಶ್ರಾ 36
ಮನೀಷ್‌ ಪಾಂಡೆ ಸಿ ರುದರ್‌ಫೋರ್ಡ್‌ ಬಿ ಪೌಲ್‌ 30
ಕೇನ್‌ ವಿಲಿಯಮ್ಸನ್‌ ಬಿ ಇಶಾಂತ್‌ 28
ವಿಜಯ್‌ ಶಂಕರ್‌ ಸಿ ಅಕ್ಷರ್‌ ಬಿ ಬೌಲ್ಟ್ 25
ಮೊಹಮ್ಮದ್‌ ನಬಿ ಸಿ ಅಕ್ಷರ್‌ ಬಿ ಪೌಲ್‌ 20
ದೀಪಕ್‌ ಹೂಡಾ ರನೌಟ್‌ 4
ರಶೀದ್‌ ಖಾನ್‌ ಸಿ ಪಂತ್‌ ಬಿ ಪೌಲ್‌ 0
ಭುವನೇಶ್ವರ್‌ ಕುಮಾರ್‌ ಔಟಾಗದೆ 0
ಬಾಸಿಲ್‌ ಥಂಪಿ ಔಟಾಗದೆ 1
ಇತರ 10
ಒಟ್ಟು (8 ವಿಕೆಟಿಗೆ) 162
ವಿಕೆಟ್‌ ಪತನ: 1-31, 2-56, 3-90, 4-111, 5-147, 6-160, 7-161, 8-161.
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 3-0-37-1
ಇಶಾಂತ್‌ ಶರ್ಮ 4-0-34-2
ಅಕ್ಷರ್‌ ಪಟೇಲ್‌ 4-0-30-0
ಅಮಿತ್‌ ಮಿಶ್ರಾ 4-0-16-1
ಕೀಮೊ ಪೌಲ್‌ 4-0-32-3
ಶಫೇìನ್‌ ರುದರ್‌ಫೋರ್ಡ್‌ 1-0-11-0

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಶಂಕರ್‌ ಬಿ ಖಲೀಲ್‌ 56
ಶಿಖರ್‌ ಧವನ್‌ ಸ್ಟಂಪ್ಡ್ ಸಾಹಾ ಬಿ ಹೂಡಾ 17
ಶ್ರೇಯಸ್‌ ಅಯ್ಯರ್‌ ಸಿ ಸಾಹಾ ಬಿ ಖಲೀಲ್‌ 8
ರಿಷಭ್‌ ಪಂತ್‌ ಸಿ ನಬಿ ಬಿ ಭುವನೇಶ್ವರ್‌ 49
ಕಾಲಿನ್‌ ಮುನ್ರೊ ಎಲ್‌ಬಿಡಬ್ಲ್ಯು ರಶೀದ್‌ 14
ಅಕ್ಷರ್‌ ಪಟೇಲ್‌ ಸಿ ಸಾಹಾ ಬಿ ರಶೀದ್‌ 0
ರುದರ್‌ಫೋರ್ಡ್‌ ಸಿ ನಬಿ ಬಿ ಭುವನೇಶ್ವರ್‌ 9
ಕೀಮೊ ಪೌಲ್‌ ಔಟಾಗದೆ 5
ಅಮಿತ್‌ ಮಿಶ್ರಾ ಒಬಿಎಸ್‌ 1
ಟ್ರೆಂಟ್‌ ಬೌಲ್ಟ್ ಔಟಾಗದೆ 0
ಇತರ 6 ಒಟ್ಟು (19.5 ಓವರ್‌ಗಳಲ್ಲಿ 8 ವಿಕೆಟಿಗೆ) 165
ವಿಕೆಟ್‌ ಪತನ: 1-66, 2-84, 3-87, 4-111, 5-111, 6-151, 7-158, 8-161,
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-42-2
ಮೊಹಮ್ಮದ್‌ ನಬಿ 4-0-29-0
ಖಲೀಲ್‌ ಅಹ್ಮದ್‌ 2.5-0-24-2
ರಶೀದ್‌ ಖಾನ್‌ 4-1-15-2
ಬಾಸಿಲ್‌ ಥಂಪಿ 4-0-41-0
ದೀಪಕ್‌ ಹೂಡಾ 1-0-13-1

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.