ಕೋಟ್ಲಾದಲ್ಲಿ ಮುಗ್ಗರಿಸಿದ ಕ್ಯಾಪಿಟಲ್ಸ್‌


Team Udayavani, Apr 5, 2019, 6:00 AM IST

PTI4_4_2019_000186B

ಹೊಸದಿಲ್ಲಿ: ತವರಿನ “ಫಿರೋಜ್‌ ಶಾ ಕೋಟ್ಲಾ’ ಅಂಗಳದಲ್ಲಿ ನಡೆದ ಗುರುವಾರದ ಸಣ್ಣ ಮೊತ್ತದ ಮೇಲಾಟದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ 5 ವಿಕೆಟ್‌ಗಳಿಂದ ಸನ್‌ರೈಸರ್ ಹೈದರಾಬಾದ್‌ಗೆ ಶರಣಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಡೆಲ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ತೀರಾ ನಿರಾಶಾದಾಯಕ ಆಟವಾಡಿತು. ಅಯ್ಯರ್‌ ಪಡೆಗೆ ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 129 ರನ್‌ ಮಾತ್ರ. ಈ ಜಯದೊಂದಿಗೆ ಹೈದರಾಬಾದ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು.

ಹೈದರಾಬಾದ್‌ಗೆ ಈ ಸಣ್ಣ ಗುರಿ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿತು. ಅದು 18.3 ಓವರ್‌ಗಳಲ್ಲಿ 5 ವಿಕೆಟಿಗೆ 131ರನ್‌ ಬಾರಿಸಿ ಜಯ ದಾಖಲಿಸಿತು. ವಾರ್ನರ್‌ (10) ಬೇಗನೇ ಔಟಾದರೆ, ಬೇರ್‌ಸ್ಟೊ 48 ರನ್‌ ಮಾಡಿದರು. ಇವರಿಬ್ಬರ ವಿಕೆಟ್‌ 4 ರನ್‌ ಅಂತರದಲ್ಲಿ ಉರುಳಿತು. ಬಳಿಕ ಮನೀಷ್‌ ಪಾಂಡೆ (10), ವಿಜಯ್‌ ಶಂಕರ್‌ (16) ಆರು ರನ್‌ ಅಂತರದಲ್ಲಿ ನಿರ್ಗಮಿಸಿದರು. ದೀಪಕ್‌ ಹೂಡಾ ಕೂಡ ವಿಫ‌ಲರಾದರು (10). ಕೊನೆಯಲ್ಲಿ ಮೊಹಮ್ಮದ್‌ ನಬಿ ಮತ್ತು ಯೂಸುಫ್ ಪಠಾಣ್‌ ಸೇರಿಕೊಂಡು ತಂಡವನ್ನು ದಡ ಸೇರಿಸಿದರು.

ಹೈದರಾಬಾದ್‌ನ ಸಾಂ ಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಡೆಲ್ಲಿ ಟಿ20 ಜೋಶ್‌ ತೋರಲು ಸಂಪೂರ್ಣ ವಿಫ‌ಲವಾಯಿತು. ತಂಡದ ಯಾವುದೇ ಬಿಗ್‌ ಹಿಟ್ಟರ್ ಸಿಡಿಯಲಿಲ್ಲ. ನಾಯಕ ಶ್ರೇಯಸ್‌ ಅಯ್ಯರ್‌ ಕ್ರೀಸ್‌ ಆಕ್ರಮಿಸಿಕೊಂಡರೂ ಇನ್ನೊಂದು ತುದಿಯಲ್ಲಿ ವಿಕೆಟ್‌ ಉರುಳುವುದನ್ನಷ್ಟೇ ಅವರು ಕಾಣಬೇಕಾಯಿತು. 43 ರನ್‌ ಹೊಡೆದ ಅಯ್ಯರ್‌ ಅವರದೇ ಡೆಲ್ಲಿ ಸರದಿಯ ಗರಿಷ್ಠ ಮೊತ್ತ. 41 ಎಸೆತಗಳ ಈ ಆಟದಲ್ಲಿ 3 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ ಬಿರುಸಿನ ಆಟಕ್ಕಿಳಿದು 13 ಎಸೆತಗಳಿಂದ ಅಜೇಯ 23 ರನ್‌ ಮಾಡಿದ್ದರಿಂದ (1 ಬೌಂಡರಿ, 2 ಸಿಕ್ಸರ್‌) 130ರ ಗುರಿ ನಿಗದಿಪಡಿಸಲು ಸಾಧ್ಯವಾಯಿತು.

ಹೈದರಾಬಾದ್‌ನ ಎಲ್ಲ 5 ಮಂದಿ ಬೌಲರ್‌ಗಳು ಸೇರಿಕೊಂಡು ಡೆಲ್ಲಿಗೆ ಕಡಿವಾಣ ಹಾಕಿದರು. ಮೊಹಮ್ಮದ್‌ ನಬಿ, ಭುವನೇಶ್ವರ್‌ ಕುಮಾರ್‌, ಕೌಲ್‌ ತಲಾ 2 ವಿಕೆಟ್‌ ಹಾರಿಸಿದರು. ರಶೀದ್‌ ಖಾನ್‌ ಮತ್ತು ಸಂದೀಪ್‌ ಶರ್ಮ ಒಂದೊಂದು ವಿಕೆಟ್‌ ಕಿತ್ತರು.ಪೃಥ್ವಿ ಶಾ (11), ಶಿಖರ್‌ ಧವನ್‌ (12), ರಿಷಬ್‌ ಪಂತ್‌ (5) ಅವರ ವೈಫ‌ಲ್ಯ ಡೆಲ್ಲಿಗೆ ಮುಳುವಾಯಿತು.

ಸ್ಕೋರ್‌ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಬಿ ಭುವನೇಶ್ವರ್‌ 11
ಶಿಖರ್‌ ಧವನ್‌ ಸಿ ಸಂದೀಪ್‌ ಬಿ ನಬಿ 12
ಶ್ರೇಯಸ್‌ ಅಯ್ಯರ್‌ ಬಿ ರಶೀದ್‌ 43
ರಿಷಬ್‌ ಪಂತ್‌ ಸಿ ಹೂಡಾ ಬಿ ನಬಿ 5
ರಾಹುಲ್‌ ತೆವಾಟಿಯ ಸಿ ನಬಿ ಬಿ ಸಂದೀಪ್‌ 5
ಕಾಲಿನ್‌ ಇನ್‌ಗಾÅಮ್‌ ಸಿ ಪಾಂಡೆ ಬಿ ಕೌಲ್‌ 5
ಕ್ರಿಸ್‌ ಮಾರಿಸ್‌ ಸಿ ನಬಿ ಬಿ ಭುವನೇಶ್ವರ್‌ 17
ಅಕ್ಷರ್‌ ಪಟೇಲ್‌ ಔಟಾಗದೆ 23
ಕಾಗಿಸೊ ರಬಾಡ ಸಿ ಭುವನೇಶ್ವರ್‌ ಬಿ ಕೌಲ್‌ 3
ಇಶಾಂತ್‌ ಶರ್ಮ ಔಟಾಗದೆ 0
ಇತರ 5
ಒಟ್ಟು (8 ವಿಕೆಟಿಗೆ) 129
ವಿಕೆಟ್‌ ಪತನ: 1-14, 2-36, 3-52, 4-61, 5-75, 6-93, 7-107, 8-115.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-27-2
ಮೊಹಮ್ಮದ್‌ ನಬಿ 4-0-21-2
ಸಿದ್ಧಾರ್ಥ್ ಕೌಲ್‌ 4-0-35-2
ರಶೀದ್‌ ಖಾನ್‌ 4-0-18-1
ಸಂದೀಪ್‌ ಶರ್ಮ 4-0-25-1
ಸನ್‌ರೈಸರ್ ಹೈದಾರಾಬಾದ್‌
ಡೇವಿಡ್‌ ವಾರ್ನರ್‌ ಸಿ ಮಾರಿಸ್‌ ಬಿ ರಬಾಡ 10
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ತೆವಾಟಿಯ 48
ವಿಜಯ್‌ ಶಂಕರ್‌ ಸಿ ಅಯ್ಯರ್‌ ಬಿ ಪಟೇಲ್‌ 16
ಮನೀಷ್‌ ಪಾಂಡೆ ಸಿ ಶಾ ಬಿ ಇಶಾಂತ್‌ 10
ದೀಪಕ್‌ ಹೂಡಾ ಸಿ ರಬಾಡ ಬಿ ಲಮಿಚಾನೆ 10
ಯೂಸುಫ್ ಪಠಾಣ್‌ ಔಟಾಗದೆ 9
ಮೊಹಮ್ಮದ್‌ ನಬಿ ಔಟಾಗದೆ 17
ಇತರ 11
ಒಟ್ಟು (18.3 ಓವರ್‌ಗಳಲ್ಲಿ 5 ವಿಕೆಟಿಗೆ) 131
ವಿಕೆಟ್‌ ಪತನ: 1-64, 2-68, 3-95, 4-101, 5-111.
ಬೌಲಿಂಗ್‌:
ಸಂದೀಪ್‌ ಲಮಿಚಾನೆ 4-0-32-1
ಅಕ್ಷರ್‌ ಪಟೇಲ್‌ 4-0-18-1
ಕ್ರಿಸ್‌ ಮಾರಿಸ್‌ 3-0-26-0
ಕಾಗಿಸೊ ರಬಾಡ 3.3-0-32-1
ರಾಹುಲ್‌ ತೆವಾಟಿಯ 3-0-10-1
ಇಶಾಂತ್‌ ಶರ್ಮ 1-0-5-1

ಟಾಪ್ ನ್ಯೂಸ್

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.