ಕೇದಾರ್ ಜಾಧವ್ಗೆ ಭುಜದ ನೋವು
Team Udayavani, May 7, 2019, 6:00 AM IST
ಚೆನ್ನೈ: ಚೆನ್ನೈ ತಂಡದ ಪ್ರಮುಖ ಬ್ಯಾಟ್ಸ್ಮನ್ ಕೇದಾರ್ ಜಾಧವ್ ಭುಜದ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಮುಂಬೈ ವಿರುದ್ಧ ಆಡುವುದು ಅನುಮಾನ.
ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಕೇದಾರ್ ಜಾಧವ್ ಗಾಯಕ್ಕೊಳಗಾಗಿದ್ದರು. ನೋವು ಇನ್ನೂ ಗುಣಮುಖವಾಗಿಲ್ಲ.
ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಕೇದಾರ್ ಜಾಧವ್ 2 ವಾರಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.