ಚೆನ್ನೈ ದಾಳಿಗೆ ಕೆಕೆಆರ್‌ ತತ್ತರ


Team Udayavani, Apr 10, 2019, 12:41 AM IST

chennai

ಚೆನ್ನೈ: ಭಾರೀ ನಿರೀಕ್ಷೆಯ ಚೆನ್ನೈ-ಕೋಲ್ಕತಾ ನಡುವಿನ ಮಂಗಳವಾರದ ಐಪಿಎಲ್‌ ಹಣಾಹಣಿಯಲ್ಲಿ ಆತಿಥೇಯ ಧೋನಿ ಪಡೆ 7 ವಿಕೆಟ್‌ಗಳ ಜಯ ಸಾಧಿಸಿದೆ.

ತೀರಾ ನಿಧಾನ ಗತಿಯಿಂದ ಕೂಡಿದ “ಚಿಪಾಕ್‌ ಪಿಚ್‌’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 9 ವಿಕೆಟಿಗೆ ಕೇವಲ 108 ರನ್‌ ಗಳಿಸಿದ್ದರೆ, ಚೆನ್ನೈ 17.2 ಓವರ್‌ಗಳಲ್ಲಿ 3 ವಿಕೆಟಿಗೆ 111 ರನ್‌ ಮಾಡಿ 5ನೇ ಜಯ ಒಲಿಸಿಕೊಂಡಿತು. ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿತು.

ಮಧ್ಯಮ ವೇಗಿ ದೀಪಕ್‌ ಚಹರ್‌, ಸ್ಪಿನ್‌ ತ್ರಿವಳಿಗಳಾದ ಹರ್ಭಜನ್‌, ತಾಹಿರ್‌ ಮತ್ತು ಜಡೇಜ ಸೇರಿಕೊಂಡು ಕೋಲ್ಕತಾ ಸರದಿಗೆ ಭರ್ಜರಿ ಕಡಿವಾಣ ಹಾಕಿದರು. ಅಗ್ರ ಕ್ರಮಾಂಕದ ಬಿಗ್‌ ಹಿಟ್ಟಿಂಗ್‌ ಬ್ಯಾಟ್ಸ್‌ ಮನ್‌ಗಳೆಲ್ಲ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್‌ ಸೇರಿಕೊಳ್ಳುವುದರೊಂದಿಗೆ ಕೆಕೆಆರ್‌ ತೀವ್ರ ಒತ್ತಡಕ್ಕೆ ಸಿಲುಕಿತು, ರನ್‌ ಬರಗಾಲ ಕಾಡತೊಡಗಿತು. ಆದರೆ ಕೆರಿಬಿಯನ್‌ ದೈತ್ಯ ಆ್ಯಂಡ್ರೆ ರಸೆಲ್‌ ಮಾತ್ರ ಚೆನ್ನೈ ದಾಳಿಗೆ ಜಗ್ಗದೆ ಅಜೇಯ ಅರ್ಧ ಶತಕ ಬಾರಿಸಿದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು. 44 ಎಸೆತಗಳ ಈ ಏಕಾಂಗಿ ಹೋರಾಟದಲ್ಲಿ 5 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಕೆಕೆಆರ್‌ ಸರದಿಯ ಇನ್ನೊಂದು ಸಿಕ್ಸರ್‌ ಪೀಯೂಷ್‌ ಚಾವ್ಲಾ ಹೊಡೆದರು.

ಆ್ಯಂಡ್ರೆ ರಸೆಲ್‌ ಅವರನ್ನು ಚೆನ್ನೈ ಬೌಲರ್‌ಗಳು ಹೇಗೆ ನಿಯಂತ್ರಿಸಿಯಾರು ಎಂಬುದು ಈ ಪಂದ್ಯದ ಕುತೂಹಲವಾಗಿತ್ತು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಅಗ್ಗಕ್ಕೆ ಔಟಾಗುತ್ತ ಹೋದುದರಿಂದ ಧೋನಿ ಪಡೆಗೆ ರಸೆಲ್‌ ದೊಡ್ಡ ತಲೆನೋವಾಗಿ ಕಾಡಲಿಲ್ಲ.

ಸ್ಕೋರ್‌ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಎಲ್‌ಬಿಡಬ್ಲ್ಯು ಚಹರ್‌ 0
ಸುನೀಲ್‌ ನಾರಾಯಣ್‌ ಸಿ ಚಹರ್‌ ಬಿ ಹರ್ಭಜನ್‌ 6
ರಾಬಿನ್‌ ಉತ್ತಪ್ಪ ಸಿ ಜಾಧವ್‌ ಬಿ ಚಹರ್‌ 11
ನಿತೀಶ್‌ ರಾಣಾ ಸಿ ರಾಯುಡು ಬಿ ಚಹರ್‌ 0
ದಿನೇಶ್‌ ಕಾರ್ತಿಕ್‌ ಸಿ ಹರ್ಭಜನ್‌ ಬಿ ತಾಹಿರ್‌ 19
ಶುಭಮನ್‌ ಗಿಲ್‌ ಸ್ಟಂಪ್ಡ್ ಧೋನಿ ಬಿ ತಾಹಿರ್‌ 9
ಆ್ಯಂಡ್ರೆ ರಸೆಲ್‌ ಔಟಾಗದೆ 50
ಪೀಯೂಷ್‌ ಚಾವ್ಲಾ ಸ್ಟಂಪ್ಡ್ ಧೋನಿ ಬಿ ಹರ್ಭಜನ್‌ 8
ಕುಲದೀಪ್‌ ಯಾದವ್‌ ರನೌಟ್‌ 0
ಪ್ರಸಿದ್ಧ್ ಕೃಷ್ಣ ಸಿ ಹರ್ಭಜನ್‌ ಬಿ ಜಡೇಜ 0
ಹ್ಯಾರಿ ಗರ್ನಿ ಔಟಾಗದೆ 1
ಇತರ 4
ಒಟ್ಟು (9 ವಿಕೆಟಿಗೆ) 108
ವಿಕೆಟ್‌ ಪತನ: 1-6, 2-8, 3-9, 4-24, 5-44, 6-47, 7-76, 8-76, 9-79.
ಬೌಲಿಂಗ್‌: ದೀಪಕ್‌ ಚಹರ್‌ 4-0-20-3
ಹರ್ಭಜನ್‌ ಸಿಂಗ್‌ 4-0-15-2
ರವೀಂದ್ರ ಜಡೇಜ 4-0-17-1
ಸ್ಕಾಟ್‌ ಕ್ಯುಗೆಲೀನ್‌ 4-0-34-0
ಇಮ್ರಾನ್‌ ತಾಹಿರ್‌ 4-0-21-2

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌ ಸಿ ಚಾವ್ಲಾ ಬಿ ನಾರಾಯಣ್‌ 17
ಫಾ ಡು ಪ್ಲೆಸಿಸ್‌ ಔಟಾಗದೆ 43
ಸುರೇಶ್‌ ರೈನಾ ಸಿ ಚಾವ್ಲಾ ಬಿ ನಾರಾಯಣ್‌ 14
ಅಂಬಾಟಿ ರಾಯುಡು ಸಿ ರಾಣಾ ಬಿ ಚಾವ್ಲಾ 21
ಕೇದಾರ್‌ ಜಾಧವ್‌ ಔಟಾಗದೆ 8
ಇತರ 8
ಒಟ್ಟು (17.2 ಓವರ್‌ಗಳಲ್ಲಿ 3 ವಿಕೆಟಿಗೆ) 111
ವಿಕೆಟ್‌ ಪತನ: 1-18, 2-35, 3-81.
ಬೌಲಿಂಗ್‌: ಪೀಯೂಷ್‌ ಚಾವ್ಲಾ 4-0-28-1
ಪ್ರಸಿದ್ಧ್ ಕೃಷ್ಣ 4-0-23-0
ಸುನೀಲ್‌ ನಾರಾಯಣ್‌ 3.2-0-24-2
ಕುಲದೀಪ್‌ ಯಾದವ್‌ 4-0-16-0
ಹ್ಯಾರಿ ಗರ್ನಿ 2-0-20-0

ಟಾಪ್ ನ್ಯೂಸ್

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.