ಕೆಕೆಆರ್‌ ಬಿರುಗಾಳಿಗೆ ಮುಂಬೈ ತತ್ತರ


Team Udayavani, Apr 29, 2019, 12:02 PM IST

kkr

ಕೋಲ್ಕತಾ: ರವಿವಾರ ರಾತ್ರಿಯ ಮಾಡು- ಮಡಿ ಪಂದ್ಯದಲ್ಲಿ ಆತಿಥೇಯ ಕೆಕೆಆರ್‌ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ನೀಡಿ ಮುಂಬೈಗೆ 34 ರನ್ನುಗಳ ಸೋಲುಣಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 2 ವಿಕೆಟಿಗೆ 232 ರನ್‌ ರಾಶಿ ಹಾಕಿತು. ಇದು ಈ ಋತುವಿನಲ್ಲಿ ದಾಖಲಾದ ತಂಡವೊಂದರ ಅತ್ಯಧಿಕ ಮೊತ್ತ. ಜವಾಬಿತ್ತ ಮುಂಬೈ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರೂ 7 ವಿಕೆಟಿಗೆ 198 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಆಟದಿಂದಾಗಿ ಮುಂಬೈ ಗೆಲುವಿಗೆ ನಿರೀಕ್ಷೆ ಇಟ್ಟುಕೊಂಡಿತು. ಆದರೆ 18ನೇ ಓವರಿನಲ್ಲಿ ಅವರು ಔಟಾಗುತ್ತಲೇ ಸೋಲು ಖಚಿತವಾಯಿತು. ಕೆಕೆಆರ್‌ ದಾಳಿಯಲ್ಲಿ ಪುಡಿಗಟ್ಟಿದ ಅವರು ಕೇವಲ 34 ಎಸೆತಗಳಿಂದ 91 ರನ್‌ ಸಿಡಿಸಿದರು. 6 ಬೌಂಡರಿ ಬಾರಿಸಿದ ಅವರು 9 ಭರ್ಜರಿ ಸಿಕ್ಸರ್‌ ಹೊಡೆದರು.

ಆರಂಭಿಕರಾದ ಶುಭಮನ್‌ ಗಿಲ್‌, ಕ್ರಿಸ್‌ ಲಿನ್‌, 3ನೇ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ಆ್ಯಂಡ್ರೆ ರಸೆಲ್‌ ಅವರ ಸ್ಫೋಟಕ ಅರ್ಧ ಶತಕ ಕೋಲ್ಕತಾ ಬ್ಯಾಟಿಂಗ್‌ ಸರದಿಯ ಆಕರ್ಷಣೆ ಆಗಿತ್ತು.  ಶುಭಮನ್‌ ಗಿಲ್‌ 45 ಎಸೆತಗಳಿಂದ 76 ರನ್‌ ಬಾರಿಸಿದರು. ಇದರಲ್ಲಿ 6 ಬೌಂಡರಿ, 4 ಸಿಕ್ಸರ್‌ ಸೇರಿತ್ತು. ಲಿನ್‌ 29 ಎಸೆತಗಳನ್ನೆದುರಿಸಿ 54 ರನ್‌ ಸೂರೆಗೈದರು. ಸಿಡಿಸಿದ್ದು 8 ಬೌಂಡರಿ ಮತ್ತು 2 ಸಿಕ್ಸರ್‌.

ಹಿಂದಿನ ಕೆಲವು ಪಂದ್ಯಗಳಲ್ಲಿ ರನ್‌ ಬರಗಾಲ ಅನುಭವಿಸಿದ ರಸೆಲ್‌ ಇಲ್ಲಿ ನೈಜ ಆಟವಾಡಿ ಮುಂಬೈ ಬೌಲರ್‌ಗಳನ್ನು ಬೆಂಡೆತ್ತುತ್ತ ಹೋದರು. ಕೆಕೆಆರ್‌ ಇನ್ನಿಂಗ್ಸ್‌ ಮುಗಿಯುವಾಗ ರಸೆಲ್‌ 40 ಎಸೆತಗಳಿಂದ 80 ರನ್‌ ಬಾರಿಸಿ ಅಜೇಯರಾಗಿದ್ದರು. ಈ ಇನ್ನಿಂಗ್ಸ್‌ 8 ಸಿಕ್ಸರ್‌, 6 ಬೌಂಡರಿಗಳಿಂದ ರಂಗೇರಿಸಿಕೊಂಡಿತು.

ಇದು ಐಪಿಎಲ್‌ನಲ್ಲಿ ರಸೆಲ್‌ ಬಾರಿಸಿದ 8ನೇ ಅರ್ಧ ಶತಕವಾದರೆ, ಪ್ರಸಕ್ತ ಋತುವಿನಲ್ಲಿ ನಾಲ್ಕನೆಯದು. ದಿನೇಶ್‌ ಕಾರ್ತಿಕ್‌ 7 ಎಸೆತಗಳಿಂದ 15 ರನ್‌ ಮಾಡಿ ಔಟಾಗದೆ ಉಳಿದರು. ರಸೆಲ್‌-ಕಾರ್ತಿಕ್‌ ಜೋಡಿಯಿಂದ 4.4 ಓವರ್‌ಗಳಲ್ಲಿ 74 ರನ್‌ ಹರಿದು ಬಂತು.

ಗಿಲ್‌-ಲಿನ್‌ ಹತ್ತರ ಸರಾಸರಿಯಲ್ಲಿ ಬ್ಯಾಟ್‌ ಬೀಸುತ್ತ 9.3 ಓವರ್‌ಗಳಲ್ಲಿ 96 ರನ್‌ ಪೇರಿಸಿ ಭರ್ಜರಿ ಆರಂಭ ಒದಗಿಸಿದರು. ರಸೆಲ್‌ ಅವರನ್ನು ಕೂಡಿಕೊಂಡ ಗಿಲ್‌ ದ್ವಿತೀಯ ವಿಕೆಟಿಗೆ ಮತ್ತೆ 62 ರನ್‌ ಪೇರಿಸಿದರು. ಕೊನೆಯಲ್ಲಿ ಕಾರ್ತಿಕ್‌ ನೆರವು ಪಡೆದ ರಸೆಲ್‌ ರನ್‌ ಸುರಿಮಳೆಗೈದರು. ಮುಂಬೈ ಪರ 6 ಮಂದಿ ಬೌಲಿಂಗ್‌ ದಾಳಿಗಿಳಿದರೂ ಕೆಕೆಆರ್‌ಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫ‌ಲರಾದರು.

ಕೋಲ್ಕತಾ ನೈಟ್‌ರೈಡರ್
ಶುಭಮನ್‌ ಗಿಲ್‌ ಸಿ ಲೆವಿಸ್‌ ಬಿ ಹಾರ್ದಿಕ್‌ 76
ಕ್ರಿಸ್‌ ಲಿನ್‌ ಸಿ ಲೆವಿಸ್‌ ಬಿ ಚಹರ್‌ 54
ಆ್ಯಂಡ್ರೆ ರಸೆಲ್‌ ಔಟಾಗದೆ 80
ದಿನೇಶ್‌ ಕಾರ್ತಿಕ್‌ ಔಟಾಗದೆ 15
ಇತರ 7
ಒಟ್ಟು (2 ವಿಕೆಟಿಗೆ) 232
ವಿಕೆಟ್‌ ಪತನ: 1-96, 2-158.
ಬೌಲಿಂಗ್‌:
ಬರೀಂದರ್‌ ಸ್ರಾನ್‌ 2-0-27-0
ಕೃಣಾಲ್‌ ಪಾಂಡ್ಯ 3-0-27-0
ಲಸಿತ ಮಾಲಿಂಗ 4-0-48-0
ಜಸ್‌ಪ್ರೀತ್‌ ಬುಮ್ರಾ 4-0-44-0
ರಾಹುಲ್‌ ಚಹರ್‌ 4-0-54-1
ಹಾರ್ದಿಕ್‌ ಪಾಂಡ್ಯ 3-0-31-1

ಮುಂಬೈ ಇಂಡಿಯನ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ರಸೆಲ್‌ ಬಿ ನಾರಾಯಣ್‌ 0
ರೋಹಿತ್‌ ಶರ್ಮ ಎಲ್‌ಬಿಡಬ್ಲ್ಯು ಗರ್ನಿ 12
ಎವಿನ್‌ ಲೆವಿಸ್‌ ಸಿ ಕಾರ್ತಿಕ್‌ ಬಿ ರಸೆಲ್‌ 15
ಸೂರ್ಯಕೆ. ಯಾದವ್‌ ಸಿ ಕಾರ್ತಿಕ್‌ ಬಿ ರಸೆಲ್‌ 26
ಕೈರನ್‌ ಪೊಲಾರ್ಡ್‌ ಸಿ ರಾಣ ಬಿ ನಾರಾಯಣ್‌ 20
ಹಾರ್ದಿಕ್‌ ಪಾಂಡ್ಯ ಸಿ ರಸೆಲ್‌ ಬಿ ಗರ್ನಿ 91
ಕೃಣಾಲ್‌ ಪಾಂಡ್ಯ ಸಿ ಮತ್ತು ಬಿ ಚಾವ್ಲಾ 24
ಬರೀಂದರ್‌ ಸ್ರಾನ್‌ ಔಟಾಗದೆ 3
ರಾಹುಲ್‌ ಚಾಹರ್‌ ಔಟಾಗದೆ 0
ಇತರ 6
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 198
ವಿಕೆಟ್‌ ಪತನ: 1-0, 2-21, 3-41, 4-58, 5-121, 6-185, 7-196
ಬೌಲಿಂಗ್‌:
ಸಂದೀಪ್‌ ವಾರಿಯರ್‌ 4-0-29-0
ಸುನೀಲ್‌ ನಾರಾಯಣ್‌ 4-0-44-2
ಹ್ಯಾರಿ ಗರ್ನಿ 4-0-37-2
ಆ್ಯಂಡ್ರೆ ರಸೆಲ್‌ 4-0-25-2
ಪೀಯೂಷ್‌ ಚಾವ್ಲಾ 4-0-57-1

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.