ಜೈಪುರದಲ್ಲಿ ಜಯ ಸಾಧಿಸಿದ ಕೆಕೆಆರ್‌


Team Udayavani, Apr 8, 2019, 6:00 AM IST

PTI4_7_2019_000216B

ಜೈಪುರ: ರವಿವಾರ ರಾತ್ರಿಯ ತವರಿನ ಐಪಿಎಲ್‌ ಮುಖಾಮುಖೀಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲಿನ ಸುಳಿಗೆ ಸಿಲುಕಿದೆ. ಕೋಲ್ಕತಾ ನೈಟ್‌ರೈಡರ್ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿದ ರಹಾನೆ ಪಡೆ ಕೇವಲ 3 ವಿಕೆಟ್‌ ಕಳೆದುಕೊಂಡರೂ ಗಳಿಸಿದ್ದು 139 ರನ್‌ ಮಾತ್ರ. ಈ ಸಾಮಾನ್ಯ ಮೊತ್ತವನ್ನು ಸುಲಭದಲ್ಲಿ ಬೆನ್ನಟ್ಟಿದ ಕೆಕೆಆರ್‌ 13.5 ಓವರ್‌ಗಳಲ್ಲಿ 2 ವಿಕೆಟಿಗೆ 140 ರನ್‌ ಗಳಿಸಿತು. ಸುನೀಲ್‌ ನಾರಾಯಣ್‌ ಮತ್ತು ಕ್ರಿಸ್‌ ಲಿನ್‌ ಸೇರಿಕೊಂಡು ತವರಿನ ಬೌಲರ್‌ಗಳನ್ನು ದಂಡಿಸುವ ಮೂಲಕ ಕೋಲ್ಕತಾ ಸುಲಭ ಗೆಲುವು ಸಾಧಿಸಿತು. ಸುನೀಲ್‌ ಮತ್ತು ಲಿನ್‌ ಮೊದಲ ವಿಕೆಟಿಗೆ 91 ರನ್ನುಗಳ ಜತೆಯಾಟ ಆಡಿದರು. ಲಿನ್‌ ಅವರಿಂದ ಅರ್ಧಶತಕ (50) ದಾಖಲಾಯಿತು.

ಈ ಎರಡೂ ತಂಡಗಳು ಹಿಂದಿನ ಪಂದ್ಯಗಳಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಮಣಿಸಿದ ಖುಷಿಯಲ್ಲಿ ಆಡಲಿಳಿದ್ದಿವು. ಆದರೆ ರಾಜಸ್ಥಾನ್‌ ಬ್ಯಾಟಿಂಗ್‌ನಲ್ಲಿ ಈ ಖುಷಿ ಗೋಚರಿಸಲಿಲ್ಲ. ನಾಯಕ ಅಜಿಂಕ್ಯ ರಹಾನೆ ಕೇವಲ 5 ರನ್‌ ಮಾಡಿ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಇಲ್ಲಿಂದ ಮುಂದೆ ಜಾಸ್‌ ಬಟ್ಲರ್‌ ಮತ್ತು ಸ್ಟೀವನ್‌ ಸ್ಮಿತ್‌ ಇನ್ನಿಂಗ್ಸ್‌ ಆಧರಿಸತೊಡಗಿದರೂ ಇವರ ಆಟದಲ್ಲಿ ಅಬ್ಬರವಿರಲಿಲ್ಲ. ರಹಾನೆ ನಿರ್ಗಮನದ ಬಳಿಕ 2ನೇ ಓವರಿನಲ್ಲೇ ಬ್ಯಾಟ್‌ ಹಿಡಿದು ಬಂದ ಸ್ಮಿತ್‌ ಅಜೇಯರಾಗಿಯೇ ಉಳಿದರು. ಕಾಂಗರೂ ಆಟಗಾರನ ಗಳಿಕೆ ಅಜೇಯ 73 ರನ್‌. ಇದಕ್ಕಾಗಿ 59 ಎಸೆತ ಎದುರಿಸಿದ ಸ್ಮಿತ್‌, 7 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು.

ಬಿಗ್‌ ಹಿಟ್ಟರ್‌ ಜಾಸ್‌ ಬಟ್ಲರ್‌ ಅವರಿಂದಲೂ ಬಿರುಸಿನ ಆಟ ಸಾಧ್ಯವಾಗಲಿಲ್ಲ. 37 ರನ್ನಿಗೆ ಅವರು 34 ಎಸೆತ ತೆಗೆದುಕೊಂಡರು. ಇದರಲ್ಲಿ 5 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಬಟ್ಲರ್‌-ಸ್ಮಿತ್‌ ಸೇರಿ ದ್ವಿತೀಯ ವಿಕೆಟಿಗೆ 10.4 ಓವರ್‌ಗಳಿಂದ 72 ರನ್‌ ಪೇರಿಸಿದರು. ಈ ಜೋಡಿಯನ್ನು ಮುರಿದವರು ಹ್ಯಾರಿ ಗರ್ನಿ. ಆಗ 12ನೇ ಓವರ್‌ ಜರಿಯಲ್ಲಿತ್ತು.

ಇಲ್ಲಿಂದ ಮುಂದೆ ರಾಹುಲ್‌ ತ್ರಿಪಾಠಿ (6) ಮತ್ತು ಬೆನ್‌ ಸ್ಟೋಕ್ಸ್‌ (ಅಜೇಯ 7) ಆಡಲಿಳಿದರೂ ಹೆಚ್ಚಿನ ಸ್ಟ್ರೈಕ್‌ಗಳನ್ನೆಲ್ಲ ಸ್ಮಿತ್‌ ಒಬ್ಬರೇ ಪಡೆಯುತ್ತ ಹೋದರು. ತ್ರಿಪಾಠಿ 8 ಎಸೆತ ಎದುರಿಸಿದರೆ, ಸ್ಟೋಕ್ಸ್‌ 14 ಎಸೆತಗಳಿಂದ 7 ರನ್‌ ಮಾಡಿದರು.

25ಕ್ಕೆ 2 ವಿಕೆಟ್‌ ಕಿತ್ತ ಹ್ಯಾರಿ ಗರ್ನಿ ಕೆಕೆಆರ್‌ನ ಯಶಸ್ವಿ ಬೌಲರ್‌. ಆದರೆ ತ್ರಿವಳಿ ಸ್ಪಿನ್ನರ್‌ಗಳಾದ ಪೀಯೂಷ್‌ ಚಾವ್ಲಾ, ಸುನೀಲ್‌ ನಾರಾಯಣ್‌ ಮತ್ತು ಕುಲದೀಪ್‌ ಯಾದವ್‌ ವಿಕೆಟ್‌ ಕೀಳಲು ವಿಫ‌ಲರಾದರು.

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಪ್ರಸಿದ್ಧ್ ಕೃಷ್ಣ 5
ಜಾಸ್‌ ಬಟ್ಲರ್‌ ಸಿ ಗಿಲ್‌ ಬಿ ಗರ್ನಿ 37
ಸ್ಟೀವನ್‌ ಸ್ಮಿತ್‌ ಔಟಾಗದೆ 73
ರಾಹುಲ್‌ ತ್ರಿಪಾಠಿ ಸಿ ಚಾವ್ಲಾ ಬಿ ಗರ್ನಿ 6
ಬೆನ್‌ ಸ್ಟೋಕ್ಸ್‌ ಔಟಾಗದೆ 7
ಇತರ 11
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 139
ವಿಕೆಟ್‌ ಪತನ: 1-5, 2-77, 3-105.
ಬೌಲಿಂಗ್‌:
ಪೀಯೂಷ್‌ ಚಾವ್ಲಾ 4-0-19-0
ಪ್ರಸಿದ್ಧ್ ಕೃಷ್ಣ 4-0-35-1
ಸುನೀಲ್‌ ನಾರಾಯಣ್‌ 4-0-22-0
ಕುಲದೀಪ್‌ ಯಾದವ್‌ 4-0-33-0
ಹ್ಯಾರಿ ಗರ್ನಿ 4-0-25-2

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಸಿ ಮಿಥುನ್‌ ಬಿ ಗೊಪಾಲ್‌ 50
ಸುನೀಲ್‌ ನಾರಾಯಣ್‌ ಸಿ ಸ್ಮಿತ್‌ ಬಿ ಗೋಪಾಲ್‌ 47
ರಾಬಿನ್‌ ಉತ್ತಪ್ಪ ಔಟಾಗದೆ 26
ಶುಭಮನ್‌ ಗಿಲ್‌ ಔಟಾಗದೆ 6
ಇತರ 11
ಒಟ್ಟು (13.5 ಓವರ್‌ಗಳಲ್ಲಿ 2 ವಿಕೆಟಿಗೆ) 140
ವಿಕೆಟ್‌ ಪತನ: 1-91, 2-114.
ಬೌಲಿಂಗ್‌:
ಧವಳ್‌ ಕುಲಕರ್ಣಿ 3-0-31-0
ಕೆ. ಗೌತಮ್‌ 1-0-22-0
ಜೋಫ‌Å ಆರ್ಚರ್‌ 3-0-14-0
ಶ್ರೇಯಸ್‌ ಗೋಪಾಲ್‌ 4-0-35-2
ಸುದೇಶನ್‌ ಮಿಥುನ್‌ 2-0-27-0
ಬೆನ್‌ ಸ್ಟೋಕ್ಸ್‌ 0.5-0-3-0

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.