ಆರ್‌ಸಿಬಿ ಮೇಲೆ ಇನ್ನೂ ಆಸೆ!


Team Udayavani, Apr 30, 2019, 10:21 AM IST

kohli

ಬೆಂಗಳೂರು: ಆಡಿದ 12 ಪಂದ್ಯಗಳಲ್ಲಿ ಎಂಟರಲ್ಲಿ ಸೋಲಿನ ನಂಟು, ಅಂಕಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನ, ರನ್‌ರೇಟ್‌ ಮೈನಸ್‌ ಬಿಟ್ಟು ಕದಲಲಿಲ್ಲ, ಇದಕ್ಕೂ ಮಿಗಿಲಾಗಿ ಕೂಟದಿಂದ ಬಹುತೇಕ ಹೊರಬಿದ್ದಾಗಿದೆ.. ಇದು ಆರ್‌ಸಿಬಿಯ ಸದ್ಯದ ಸ್ಥಿತಿ. ಹಾಗೆಯೇ ಈಗಾಗಲೇ 2 ತಂಡಗಳು ಪ್ಲೇ ಆಫ್ ತಲುಪಿವೆ, 14 ಅಂಕ ಹೊಂದಿರುವ ಮುಂಬೈ ಒಂದೇ ಹೆಜ್ಜೆ ದೂರದಲ್ಲಿದೆ. ಆದರೂ ಆರ್‌ಸಿಬಿ ಮೇಲಿನ ಪ್ಲೇ ಆಫ್ ನಿರೀಕ್ಷೆ ಕಮರಿ ಹೋಗಿಲ್ಲ!

ಪವಾಡದ ನಿರೀಕ್ಷೆಯಲ್ಲಿ…
ಮಂಗಳವಾರ ತನಗಿಂತ ಒಂದು ಸ್ಥಾನ ಮೇಲಿ ರುವ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕೊಹ್ಲಿ ಪಡೆ ತವರಿನಂಗಳದಲ್ಲಿ ಆಡಲಿಳಿಯಲಿದೆ. ಅಭಿಮಾನಿ ಗಳೆಲ್ಲ ಪವಾಡದ ನಿರೀಕ್ಷೆಯಲ್ಲಿದ್ದಾರೆ. ಆರ್‌ಸಿಬಿ 4ನೇ ಸ್ಥಾನಿಯಾಗಿ ಹೇಗೆ ಮೇಲೇರಬಹುದೆಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಲೆಕ್ಕಾಚಾರಗಳು ಹರಿದು ಬರುತ್ತಿವೆ. ಇದೇ ಕಾಳಜಿ, ಬದ್ಧತೆ, ಆಸಕ್ತಿ ಆರ್‌ಸಿಬಿ ಆಟಗಾರರಲ್ಲೂ ಇದ್ದಿದ್ದರೆ ಬಹುಶಃ ಕರ್ನಾಟಕದ ಐಪಿಎಲ್‌ ತಂಡಕ್ಕೆ ಈ ಸ್ಥಿತಿ ಒದಗಿಬರುತ್ತಿರಲಿಲ್ಲ!

ರಾಜಸ್ಥಾನಕ್ಕೆ ಕ್ಷೀಣ ಅವಕಾಶ
ಆದರೆ ರಾಜಸ್ಥಾನ್‌ ಮುಂದೆ ಪ್ಲೇ ಆಫ್ಗೆ ಏರುವ ಕ್ಷೀಣ ಅವಕಾಶವೊಂದಿದೆ. ಉಳಿದೆರಡೂ ಪಂದ್ಯ ಗಳನ್ನು ಗೆದ್ದರೆ ಅಂಕ 14ಕ್ಕೆ ಏರುವುದರಿಂದ ಆರ್‌ಸಿಬಿ ಎದುರಿನ ಪಂದ್ಯ ಸ್ಮಿತ್‌ ಪಡೆಗೆ ನಿರ್ಣಾಯಕ. ಬದಲಾದ ನಾಯಕತ್ವ ರಾಜಸ್ಥಾನಕ್ಕೆ ಲಾಭ ತರುತ್ತಿದ್ದರೂ ಜಾಸ್‌ ಬಟ್ಲರ್‌, ಜೋಫ‌ ಆರ್ಚರ್‌, ಬೆನ್‌ ಸ್ಟೋಕ್ಸ್‌ ನಿರ್ಗಮನ ತಂಡದ ಕಾರ್ಯತಂತ್ರ ವನ್ನು ತಲೆಕೆಳಗಾಗಿಸುವ ಸಾಧ್ಯತೆ ಇದ್ದೇ ಇದೆ.  ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಸ್ಟುವರ್ಟ್‌ ಬಿನ್ನಿ ಅವರಿಗೆ ಇದು ತವರಿನಂಗಳದ ಪಂದ್ಯ ವಾಗಿರುವುದು ರಾಜಸ್ಥಾನಕ್ಕೆ ಲಾಭ ತಂದೀತು ಎಂಬುದೊಂದು ನಿರೀಕ್ಷೆ.

ಇತ್ತ ಆರ್‌ಸಿಬಿಯಲ್ಲಿ ರಾಜ್ಯದ ಯಾವ ಸ್ಟಾರ್‌ ಆಟಗಾರನೂ ಇಲ್ಲ. ಕರ್ನಾಟಕದ ಏಕೈಕ ಆಟಗಾರ ದೇವದತ್ತ ಪಡಿಕ್ಕಲ್‌ ಅವರಿಗೆ ಇನ್ನೂ ಅವಕಾಶ ಕೊಟ್ಟಿಲ್ಲ. ಸದ್ಯದ ಸ್ಥಿತಿಯಲ್ಲಿ ಆರ್‌ಸಿಬಿ ಪಾಲಿಗೆ ಇದು ಕೇವಲ ಲೆಕ್ಕದ ಭರ್ತಿಯ ಪಂದ್ಯ!

ಆರ್‌ಸಿಬಿ ಸೋಲಿನ ಶತಕ!
ಡೆಲ್ಲಿ ಎದುರಿನ ರವಿವಾರದ ಪಂದ್ಯದಲ್ಲಿ ಎಡವಿದ ಆರ್‌ಸಿಬಿ ಟಿ20 ಕ್ರಿಕೆಟ್‌ನಲ್ಲಿ ನೂರನೇ ಸೋಲನುಭಸಿತು. ಆರ್‌ಸಿಬಿ 100 ಸೋಲನ್ನು ಹೊತ್ತುಕೊಂಡ ಭಾರತದ ಮೊದಲ ಹಾಗೂ ವಿಶ್ವದ 3ನೇ ಕ್ರಿಕೆಟ್‌ ತಂಡವಾಗಿದೆ. ಇಂಗ್ಲೆಂಡಿನ ಮಿಡ್ಲ್ಸೆಕ್ಸ್‌ 112 ಮತ್ತು ಡರ್ಬಿಶೈರ್‌ 101 ಸೋಲನುಭವಿಸಿ ಮೊದಲೆರಡು ಸ್ಥಾನದಲ್ಲಿವೆ.

ಕೊಹ್ಲಿ 5 ಸಾವಿರ ರನ್‌
ಡೆಲ್ಲಿ ಪಂದ್ಯದ ವೇಳೆ ವಿರಾಟ್‌ ಕೊಹ್ಲಿ, ಭಾರತದ ನೆಲದಲ್ಲಿ ಆಡಲಾದ ಐಪಿಎಲ್‌ ಪಂದ್ಯಗಳಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಿದರು (5,020). ಅವರು ಈ ಸಾಧನೆಗೈದ ಮೊದಲ ಭಾರತೀಯ ಆಟಗಾರ. ಸುರೇಶ್‌ ರೈನಾ ದ್ವಿತೀಯ ಸ್ಥಾನದಲ್ಲಿದ್ದಾರೆ (4,699). ಕೊಹ್ಲಿ ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಆಡಲಾದ ಐಪಿಎಲ್‌ ಪಂದ್ಯಗಳಲ್ಲಿ ಕ್ರಮವಾಗಿ 105 ಮತ್ತು 246 ರನ್‌ ಮಾಡಿದ್ದಾರೆ.

ಅರ್ಧ ಗಂಟೆ ಮೊದಲೇ ಪ್ಲೇ ಆಫ್
ತಡರಾತ್ರಿ ತನಕ ನಡೆಯುವ ಪಂದ್ಯಗಳಿಂದ ಬಹಳಷ್ಟು ಟೀಕೆಗಳು ಕೇಳಿಬಂದ ಬಳಿಕ ಐಪಿಎಲ್‌ ಪ್ಲೇ ಆಫ್ ಪಂದ್ಯಗಳನ್ನು ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಆರಂಭಿಸಲು ನಿರ್ಧರಿಸಲಾಗಿದೆ. ಇದರ ವೇಳಾಪಟ್ಟಿ ಸೋಮವಾರ ಪ್ರಕಟಗೊಂಡಿದೆ. ಸಮಯ ಬದಲಾವಣೆ ಕುರಿತು ಬಿಸಿಸಿಐ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಂತೆ ರಾತ್ರಿ 8ಕ್ಕೆ ಆಯೋಜನೆಗೊಂಡಿದ್ದ ಪಂದ್ಯಗಳು 7.30ಕ್ಕೇ ಶುರುವಾಗಲಿವೆ.

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.