- Tuesday 10 Dec 2019
ಮಾಸಲಿ 70 ರನ್ನಿನ ಕಹಿ
Team Udayavani, Apr 21, 2019, 6:00 AM IST
ಬೆಂಗಳೂರು: ಕೋಲ್ಕತಾ ವಿರುದ್ಧ ಗೆದ್ದು ಪ್ಲೇ ಆಫ್ ಬೆಳಕನ್ನು ಇನ್ನೂ ಸಣ್ಣಗೆ ಜೀವಂತವಾಗಿರಿಸಿಕೊಂಡಿರುವ ಆರ್ಸಿಬಿ ರವಿವಾರ ಉದ್ಯಾನ ನಗರಿಯಲ್ಲಿ ನಡೆಯಲಿರುವ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಇವೆರಡೂ ತಂಡಗಳು ಚೆನ್ನೈಯಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖೀ ಯಾಗಿದ್ದವು. ಕೊಹ್ಲಿ ಪಡೆ 70 ರನ್ನಿಗೆ ದಿಂಡುರುಳಿ ಆಘಾತಕಾರಿ ಸೋಲನುಭವಿಸಿತ್ತು. ಇದಕ್ಕೆ ತವರಿನಂಗಳದಲ್ಲಿ ಕೊಹ್ಲಿ ಟೀಮ್ ಸೇಡು ತೀರಿಸಬೇಕಿದೆ. ಎಪ್ಪತ್ತರ ಆ ಕಹಿ ನೆನಪು ಮಾಸಿಹೋಗಬೇಕಿದೆ.
ಹಾಲಿ ಚಾಂಪಿಯನ್ ಚೆನ್ನೈ ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲು ಕಂಡಿದೆ. ಇದರಲ್ಲಿ ನಾಯಕ ಧೋನಿ ಆಡಿರಲಿಲ್ಲ. ಆರ್ಸಿಬಿ ವಿರುದ್ಧ ಮರಳಿ ತಂಡ ಸೇರಿಕೊಳ್ಳಲಿದ್ದಾರೆ. ಇನ್ನೊಂದೆಡೆ ಆರ್ಸಿಬಿ ಶುಕ್ರವಾರ ರಾತ್ರಿಯಷ್ಟೇ ಈಡನ್ ಅಂಗಳದಲ್ಲಿ ಕೆಕೆಆರ್ಗೆ ಸೋಲುಣಿಸಿದ ಹುಮ್ಮಸ್ಸಿನಲ್ಲಿದೆ. ಈ ಉತ್ಸಾಹ ತವರಿನ ಅಂಗಳದಲ್ಲೂ ಮರುಕಳಿಸಬೇಕಿದೆ. ಗೆದ್ದರಷ್ಟೇ ಬೆಂಗಳೂರು ತಂಡ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಹೀಗಾಗಿ ಕೊಹ್ಲಿ ತಂಡದ ಪಾಲಿಗೆ ಮಾಡು-ಮಡಿ ಪಂದ್ಯವಾಗಿದೆ.
ಕೊಹ್ಲಿ, ಅಲಿ ಪ್ರಚಂಡ ಫಾರ್ಮ್
ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗ ಸದೃಢವಾಗಿದೆ. ಎಬಿಡಿ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮೆರೆದಿದ್ದರು. ಮೊಯಿನ್ ಅಲಿ ಬಿರುಸಿನ ಅರ್ಧ ಶತಕ ಸಿಡಿಸಿದ್ದರು. ಬೌಲಿಂಗ್ನಲ್ಲೂ ಪರಿಣಾಮಕಾರಿಯಾಗಿದ್ದರು.
ಬೌಲಿಂಗ್ ತೀರಾ ದುರ್ಬಲ
ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ತಂಡವನ್ನು ಕೂಡಿಕೊಂಡಿದ್ದರೂ ಬೆಂಗಳೂರು ತಂಡದ ಬೌಲಿಂಗ್ ವಿಭಾಗ ಮಾತ್ರ ಸುಧಾರಿಸಿಲ್ಲ. ಇದು ಕ್ಯಾಪ್ಟನ್ ಕೊಹ್ಲಿಯ ಚಿಂತೆಯನ್ನು ಹೆಚ್ಚಿಸಿದೆ. ಬ್ಯಾಟ್ಸ್ಮನ್ಗಳು 200 ರನ್ ಪೇರಿಸಿದರು. ಇದನ್ನು ಉಳಿಸಿ ಕೊಳ್ಳುವಲ್ಲಿ ಬೌಲರ್ಗಳು ವಿಫಲ ವಾಗುತ್ತಿರುವುದು ಬೆಂಗಳೂರು ತಂಡದ ದೊಡ್ಡ ದುರಂತ!
ಇಂದು ಆರ್ಸಿಬಿ-ಚೆನ್ನೈ ಮರು ಪಂದ್ಯ
ಮೊದಲ ಪಂದ್ಯದಲ್ಲಿ 70ಕ್ಕೆ ಕುಸಿದಿದ್ದ ಬೆಂಗಳೂರು
ಈ ವಿಭಾಗದಿಂದ ಇನ್ನಷ್ಟು
-
ಚೆನ್ನೈ: ಐಪಿಎಲ್ ಟಿ20 ಪಂದ್ಯಾವಳಿಯ ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ನಲ್ಲಿ ಚೆನ್ನೈಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿವಾದಾತ್ಮಕ...
-
ಮುಂಬೈ: ಕಳೆದ ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಶೇನ್ ವ್ಯಾಟ್ಸನ್ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು....
-
ಹೈದರಾಬಾದ್: ಐಪಿಎಲ್ ಕೂಟದ ಫೈನಲ್ನಲ್ಲಿ ಇನ್ನೊಂದು ಅಚ್ಚರಿ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಕಾರ ಶೇನ್ ವಾಟ್ಸನ್ ಡೈವ್ ಮಾಡುವ ವೇಳೆ ಬಿದ್ದು...
-
ಚೆನ್ನೈ: ಬಹುತೇಕ ಹಿರಿಯ ಆಟಗಾರರನ್ನೇ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಐಪಿಎಲ್ ಆವೃತ್ತಿಗೆ ಬದಲಾವಣೆ ಮಾಡುವ ಸೂಚನೆ ನೀಡಿದೆ. ತಂಡದ ಮುಖ್ಯ ತರಬೇತುದಾರರಾಗಿರುವ...
-
ಮುಂಬೈ: ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ತನ್ನ ಟ್ವೀಟ್ ಗಳಿಂದಲೇ ಜನಪ್ರಿಯರಾಗಿದ್ದಾರೆ. ತನ್ನ ತಮಾಷೆಯ ಟ್ವೀಟ್ ಗಳಿಂದ ಮನೆ...
ಹೊಸ ಸೇರ್ಪಡೆ
-
ಸೌತ್ ಏಶ್ಯನ್ ಗೇಮ್ಸ್ : ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚು ಕಾಠ್ಮಂಡು (ನೇಪಾಲ), ಡಿ. 9: ಸೌತ್ ಏಶ್ಯನ್ ಗೇಮ್ಸ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ಅವಳಿ ಚಿನ್ನವನ್ನು...
-
ಈ ಚುನಾವಣಾ ಫಲಿತಾಂಶ ಹಲವು ದಾಖಲೆಗಳನ್ನು ಬರೆದಿದೆ. ಮತ್ತೆ ಮೈತ್ರಿ ಸರಕಾರ ರಚನೆಯಾಗುವ ಅಪಾಯವನ್ನು ಮನಗಂಡೇ ಮತದಾರ ಎಚ್ಚರಿಕೆಯಿಂದ ಮತ ಚಲಾಯಿಸಿದ ಹಾಗಿದೆ....
-
ಮಂಗಳೂರು: ಕರಾವಳಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ಗೋಡಂಬಿ ಉದ್ಯಮ ಪ್ರಸ್ತುತ ಸಮಸ್ಯೆಗಳ ಸುಳಿಯಲ್ಲಿದೆ. ಈ ನಡುವೆ ಆಮದಿತ ಕಚ್ಚಾ ಗೇರುಬೀಜಕ್ಕೆ...
-
ಹೆಮ್ಮಾಡಿ: ರಾ.ಹೆ. 66ರಿಂದ ಕಟ್ಟು ಮೂಲಕವಾಗಿ ಹಕ್ಲಾಡಿ, ಬಂಟ್ವಾಡಿ ಸಹಿತ ಹತ್ತಾರು ಊರುಗಳಿಗೆ ಸಂಪರ್ಕ ಕಲ್ಪಿಸುವ ಹೆಮ್ಮಾಡಿ - ಕಟ್ಟು ಸಂಪರ್ಕ ರಸ್ತೆ ಹದಗೆಟ್ಟು...
-
ನಡೆದದ್ದು ಉಪ ಚುನಾವಣೆಯಾಗಿದ್ದರೂ ಇದಕ್ಕೆ ರಾಷ್ಟ್ರ ಮಟ್ಟದ ಮಹತ್ವವಿತ್ತು. ಯಾವುದೇ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಕಡಿಮೆಯಿಲ್ಲದಂತೆ ತುರುಸಿನಿಂದ...