ಡೆಲ್ಲಿಯೋ? ಆರ್ಸಿಬಿಯೋ? ಗೆದ್ದವರಿಗೆ ಪ್ಲೇ ಆಫ್ ಟಿಕೆಟ್
Team Udayavani, Nov 2, 2020, 5:45 AM IST
ಅಬುಧಾಬಿ: ಯಾವತ್ತೋ ಟಾಪ್-4 ಯಾದಿಗೆ ಲಗ್ಗೆ ಇರಿಸಿದ್ದ ಆರ್ಸಿಬಿ ಮತ್ತು ಡೆಲ್ಲಿಗೆ ಇನ್ನೂ ಈ ಸ್ಥಾನಕ್ಕೆ ಸಿಮೆಂಟ್ ಹಾಕಲು ಸಾಧ್ಯವಾಗದಿರುವುದು ಈ ಐಪಿಎಲ್ನ ವೈಚಿತ್ರ್ಯಕ್ಕೆ ಸಾಕ್ಷಿ. ತಲಾ 14 ಅಂಕ ಹೊಂದಿರುವ ಈ ತಂಡಗಳು ಸೋಮವಾರ ಕೊನೆಯ ಪಂದ್ಯವನ್ನು ಆಡಲಿವೆ. ಗೆದ್ದ ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗುವಲ್ಲಿ ಯಶಸ್ವಿಯಾಗುತ್ತದೆ. ಪರಾಜಿತ ತಂಡದ ಅಂಕ 14ರಲ್ಲೇ ಉಳಿಯುವುದರಿಂದ ರನ್ರೇಟ್ ನಿರ್ಣಾಯಕವಾಗಿ ಪರಿಣಮಿಸಲಿದೆ.
ಈ ವರೆಗೆ ಐಪಿಎಲ್ ಪ್ರಶಸ್ತಿ ಜಯಿಸದ ಡೆಲ್ಲಿ ಮತ್ತು ಆರ್ಸಿಬಿ ತಂಡಗಳೆರಡೂ ಮೇಲ್ನೋಟಕ್ಕೆ ಬಲಿಷ್ಠವಾಗಿವೆ. ಆದರೆ ಅಸ್ಥಿರ ಪ್ರದರ್ಶನವೇ ಇತ್ತಂಡಗಳಿಗೆ ಮುಳುವಾಗಿದೆ. ಹೀಗಾಗಿ ಭವಿಷ್ಯ ನುಡಿಯುವುದು ಕಷ್ಟ. ಹಾಗೆಯೇ ಯಾರು ಮೇಲೆ ಬಂದರೆ ಹೆಚ್ಚಿನ ಲಾಭವಿದೆ ಎಂಬ ಲೆಕ್ಕಾಚಾರವೂ ಇಲ್ಲಿ ಕೆಲಸ ಮಾಡಬಹುದು!
ಮಧ್ಯಮ ಕ್ರಮಾಂಕ ದುರ್ಬಲ
ಆರ್ಸಿಬಿಯ ಅಗ್ರ ಕ್ರಮಾಂಕದ ಬ್ಯಾಟಿಂಗ್ ಹೆಚ್ಚು ಬಲಿಷ್ಠ. ಪಡಿಕ್ಕಲ್ ಈ ಸರಣಿಯ ಹೀರೋ ಆಗಿದ್ದಾರೆ. ಇವರ ಜತೆಗಾರನಾಗಿ ಮತ್ತೆ ಫಿಂಚ್ ಕಣಕ್ಕಿಳಿಯಬಹುದು. ಆದರೆ ಮಿಡ್ಲ್ ಆರ್ಡರ್ ಗಟ್ಟಿ ಇಲ್ಲ. ನಾಯಕ ಕೊಹ್ಲಿ, ಎಬಿಡಿ ಈ ಪಂದ್ಯದಲ್ಲಿ ಸಿಡಿಯಲೇ ಬೇಕಿದೆ. ಇವರಿಬ್ಬರ ನಿರ್ಗಮನದ ಬಳಿಕ ಇನ್ನಿಂಗ್ಸ್ ಬೆಳೆಸಬಲ್ಲ ಆಟಗಾರರಿಲ್ಲ. ಗುರುಕೀರತ್ ಬದಲು ಪಾರ್ಥಿವ್ ಪಟೇಲ್ ಮೊದಲ ಅವಕಾಶ ಪಡೆದರೆ ಅಚ್ಚರಿ ಇಲ್ಲ. ಆರ್ಸಿಬಿ ಬೌಲಿಂಗ್ ಡೆಲ್ಲಿ ತಂಡದಷ್ಟು ಬಲಿಷ್ಠವಾಗಿಲ್ಲ ಎಂಬುದನ್ನು ಒಪ್ಪಲೇಬೇಕು.
ಡೆಲ್ಲಿಗೆ ಬ್ಯಾಟಿಂಗ್ ಚಿಂತೆ
ಆರಂಭದಲ್ಲಿ ಡೆಲ್ಲಿ ತೋರಿದ ಪ್ರದರ್ಶನ ಕಂಡಾಗ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಗೋಚರಿಸಿತ್ತು. ಆದರೆ ಅಂತಿಮ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಪ್ಲೇ ಆಫ್ಗೆ ತೇರ್ಗಡೆಯಾಗುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿದೆ. ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಧವನ್, ನಾಯಕ ಅಯ್ಯರ್, ಮಾರ್ಕಸ್ ಸ್ಟೋಯಿನಿಸ್ ಈಗ ತೀವ್ರ ರನ್ ಬರಗಾಲದಲ್ಲಿದ್ದಾರೆ. ವಿಂಡೀಸ್ ಹಿಟ್ಟರ್ ಹೆಟ್ಮೈರ್, ಪಂತ್, ಪೃಥ್ವಿ ಶಾ ಇದುವರೆಗೆ ಒಂದೇ ಒಂದು “ಹಿಟ್ ಶೋ’ ನೀಡಿಲ್ಲ. ಇವರೆಲ್ಲ ನಿರ್ಣಾಯಕ ಪಂದ್ಯದಲ್ಲಿ ಮಿಂಚಿದರಷ್ಟೇ ತಂಡಕ್ಕೆ ಲಾಭ. ಬೌಲಿಂಗ್ ವಿಭಾಗ ರಬಾಡ, ನೋರ್ಜೆ ಮತ್ತು ಆರ್. ಅಶ್ವಿನ್ ಅವರನ್ನು ಅವಲಂಬಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್