4 ಅಥವಾ 5 ತಾಣಗಳಲ್ಲಿ ಐಪಿಎಲ್: ಬಿಸಿಸಿಐ ಯೋಜನೆ
Team Udayavani, Feb 27, 2021, 6:40 AM IST
ಹೊಸದಿಲ್ಲಿ: ಮುಂದಿನ ಐಪಿಎಲ್ ಪಂದ್ಯಾ ವಳಿಯನ್ನು ಭಾರತದಲ್ಲೇ ನಡೆಸುವುದು ಬಿಸಿಸಿಐ ಯೋಜನೆ. ಕೊರೊನಾದಿಂದಾಗಿ ಇಡೀ ಕೂಟವನ್ನು ಗರಿಷ್ಠ ಸ್ಟೇಡಿಯಂಗಳಿರುವ ನಗರವೊಂದರಲ್ಲೇ ನಡೆಸುವ ಯೋಜನೆಯೂ ಇತ್ತು. ಇದಕ್ಕೆ ಮುಂಬಯಿಯನ್ನೂ ಆರಿಸ ಲಾಗಿತ್ತು. ಆದರೀಗ ಮುಂಬಯಿ ಮಹಾನಗರಿಯಲ್ಲಿ ಕೋವಿಡ್-19 ಮತ್ತೆ ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶದ ಇನ್ನಿತರ 4-5 ಕೇಂದ್ರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ನಿರ್ಧರಿಸಿದೆ.
“ಐಪಿಎಲ್ ಆರಂಭಕ್ಕೆ ಇನ್ನೂ ಒಂದು ತಿಂಗಳಿದೆ. ಆದರೆ ಅಷ್ಟರೊಳಗೆ ಕೆಲವು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಅದರಂತೆ, ಮುಂಬಯಿಯೊಂದರಲ್ಲೇ ಎಲ್ಲ ಲೀಗ್ ಪಂದ್ಯ ಗಳನ್ನು ನಡೆಸುವುದು ಈಗಿನ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಇಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
“ಹೈದರಾಬಾದ್, ಬೆಂಗಳೂರು, ಕೋಲ್ಕತಾ ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಮುಂದೆ ಬಂದಿವೆ. ಅಹ್ಮದಾಬಾದ್ನಲ್ಲಿ ಪ್ಲೇ-ಆಫ್ ಮತ್ತು ಫೈನಲ್ ನಡೆಯುವುದು ಬಹುತೇಖ ಖಚಿತ’ ಎಂದು ಅವರು ಹೇಳಿದರು.
ಮುಂಬಯಿ ಪ್ರಶಸ್ತವಾಗಿತ್ತು… :
ಜೈವಿಕ ಸುರಕ್ಷಾ ವಲಯದಲ್ಲಿ ಐಪಿಎಲ್ ಪಂದ್ಯ ಗಳನ್ನು ನಡೆಸಬೇಕಾದುದು ಅನಿವಾರ್ಯ. ಹಾಗೆಯೇ ಆಟಗಾರರ ಪ್ರಯಾಣವನ್ನು ಕಡಿಮೆಗೊಳಿಸಬೇಕಾದ ಅಗತ್ಯವೂ ಇದೆ. ಹೀಗಾಗಿ ಮುಂಬಯಿಯಲ್ಲೇ ಎಲ್ಲ ಲೀಗ್ ಪಂದ್ಯಗಳನ್ನು ಆಡಿಸುವ ಯೋಜನೆ ಬಿಸಿಸಿಐ ಮುಂದಿತ್ತು. ಇಲ್ಲಿ ವಾಂಖೇಡೆ, ಬ್ರೆಬೋರ್ನ್, ಡಿ.ವೈ. ಪಾಟೀಲ್ ಮತ್ತು ರಿಲಯನ್ಸ್ ಸ್ಟೇಡಿಯಂಗಳಿವೆ. ಹೀಗಾಗಿ ಐಪಿಎಲ್ ಆಯೋಜನೆಗೆ ಮುಂಬಯಿ ಸೂಕ್ತ ಕೇಂದ್ರವಾಗುತ್ತಿತ್ತು. ಇದಕ್ಕೀಗ ಕೊರೊನಾ ಅಡ್ಡಿಯಾಗಿ ಪರಿಣಮಿಸಿದೆ. 14ನೇ ಐಪಿಎಲ್ ಪಂದ್ಯಾವಳಿ ಎಪ್ರಿಲ್ 2ನೇ ವಾರದಿಂದ ಆರಂಭವಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ