ಐಪಿಎಲ್‌ ಹರಾಜಿನ ಕರಿಗುದುರೆಗಳು…

ಈ ಬಾರಿ ನಡೆಯುವ ಐಪಿಎಲ್‌ ಹರಾಜಿನಲ್ಲಿ ಹೊಸ ತಾರೆಗಳ ಉದಯದ ನಿರೀಕ್ಷೆ

Team Udayavani, Oct 29, 2019, 10:48 PM IST

IPL

ಮುಂದಿನ ವರ್ಷದ 13ನೇ ಐಪಿಎಲ್‌ಗೆ ಡಿ. 18ರಂದು ಹರಾಜು ನಡೆಯಲಿದೆ. ಇದೇನೂ ಪೂರ್ಣಪ್ರಮಾಣದ ಹರಾಜಲ್ಲ. ಹಾಗಾಗಿ ಫ್ರಾಂಚೈಸಿಗಳ ಬಳಿ ಕೊಳ್ಳಲು ಬಹಳ ಹಣ ವಿರುವುದಿಲ್ಲ. ಆದರೂ ಐಪಿಎಲ್‌ ಹರಾಜಿಗೆ ತನ್ನದೇ ಮೌಲ್ಯವಿದೆ. ಪ್ರತೀ ಹರಾಜಿನಲ್ಲೂ ಏನಾದ ರೊಂದು ಅಚ್ಚರಿ ಇದ್ದೇ ಇರುತ್ತದೆ. ದೇಶೀ ಕ್ರಿಕೆಟ್‌ನಲ್ಲಿ ಅಮೋಘ ಆಟವಾಡುತ್ತಿರುವ ಆಟಗಾರನ ಮೇಲೆ ಸದ್ದಿಲ್ಲದೆ ಫ್ರಾಂಚೈಸಿಗಳು ಕಣ್ಣಿಟ್ಟಿರುತ್ತವೆ. ಕಡಿಮೆ ಹಣಕ್ಕೆ, ಅತ್ಯುತ್ತಮ ಆಟಗಾರನನ್ನು ಖರೀದಿಸಿ, ಸಂಚಲನ ಸೃಷ್ಟಿಸುತ್ತವೆ. ಈ ಬಾರಿ ಅಂತಹ ಸಂಚಲನಕ್ಕೆ ಕಾರಣವಾಗಬಲ್ಲ ದೇಶ, ವಿದೇಶಗಳ ಐವರು ಕ್ರಿಕೆಟಿಗರ ಮಾಹಿತಿ ಇಲ್ಲಿದೆ.

ಬೀಸತೊಡಗಿದೆ ಬ್ಯಾಂಟನ್‌ ಹವಾ
ಇಂಗ್ಲೆಂಡ್‌ ದೇಶೀ ಕ್ರಿಕೆಟ್‌ನಲ್ಲಿ ಆಡಿಕೊಂಡಿದ್ದ ಥಾಮಸ್‌ ಬ್ಯಾಂಟನ್‌ ದೊಡ್ಡ ಸದ್ದು ಮಾಡಿದ್ದಾರೆ. ಕೇವಲ 20 ವರ್ಷದ ಈ ಕ್ರಿಕೆಟಿಗ ಸಾಮರ್ಸೆಟ್‌ ಪರ ಟಿ20ಯಲ್ಲಿ ಬಿರುಗಾಳಿಯೆಬ್ಬಿಸಿದ್ದಾರೆ. 17 ಪಂದ್ಯಗಳಲ್ಲಿ 591 ರನ್‌ ಪೇರಿಸಿದ್ದು, ಸಿಕ್ಸರ್‌, ಬೌಂಡರಿಗಳ ರಾಶಿ ಹಾಕಿದ್ದಾರೆ. ರಾಯಲ್‌ ಲಂಡನ್‌ ಕಪ್‌, ಕೌಂಟಿಯಲ್ಲೂ ಮೆರೆದಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದ ಈತನ ಬಿರುಗಾಳಿ ಬ್ಯಾಟಿಂಗಿಗೆ ಕ್ರಿಕೆಟ್‌ ವಿಶ್ವ ಮೆಚ್ಚುಗೆ ಸೂಚಿಸಿದೆ. ಐಪಿಎಲ್‌ ಹರಾಜಿನಲ್ಲಿ ಫ್ರಾಂಚೈಸಿಗಳು ಇವರ ಖರೀದಿಗೆ ಮುಗಿಬೀಳುವ ಎಲ್ಲ ಸಾಧ್ಯತೆಗಳೂ ಇವೆ.

ವೇಗಿ ಸ್ಟಾರ್ಕ್‌ ಮೇಲೆ ಮತ್ತೆ ಕಣ್ಣು
ಮಿಚೆಲ್‌ ಸ್ಟಾರ್ಕ್‌ ವಿಶ್ವ ಕ್ರಿಕೆಟಿನ ಭಯಾನಕ ವೇಗಿ. ಆದರೆ ಯಾವಾಗಲೂ ಗಾಯದ್ದೇ ಸಮಸ್ಯೆ. ಹೀಗಾಗಿ ಐಪಿಎಲ್‌ಗ‌ೂ ಇವರಿಗೂ ಆಗಿಬರುತ್ತಿಲ್ಲ. 2015ರ ಒಂದೇ ಐಪಿಎಲ್‌ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿ ಮಿಂಚಿನ ಬೌಲಿಂಗ್‌ ಮಾಡಿದ್ದರು. 2016ರಲ್ಲಿ ಗಾಯದಿಂದ ಆಡಲಿಲ್ಲ, 2017ರಲ್ಲಿ ಆಡಲು ಅವರೇ ಬಯಸಲಿಲ್ಲ. 2018ರ ಆವೃತ್ತಿಯಲ್ಲಿ ಕೆಕೆಆರ್‌ಗೆ 9.4 ಕೋಟಿ ರೂ. ಮೊತ್ತಕ್ಕೆ ಆಯ್ಕೆಯಾಗಿದ್ದರು. ಆದರೆ ಅವರನ್ನು ದಿಢೀರನೆ ತಂಡ ಕೈಬಿಟ್ಟಿತು. ಈಗ 2020ರ ಐಪಿಎಲ್‌ನಲ್ಲಿ ಆಡುವ ಉದ್ದೇಶ ಹೊಂದಿದ್ದಾರೆ. ಅವರ ಬಗ್ಗೆ ಎಲ್ಲ ಫ್ರಾಂಚೈಸಿಗಳು ಭಾರೀ ನಿರೀಕ್ಷೆ ಹೊಂದಿವೆ.

ಹೊಸ ಅವತಾರದ ನೀಶಮ್‌
ನ್ಯೂಜಿಲ್ಯಾಂಡ್‌ನ‌ 29 ವರ್ಷದ ಆಲ್‌ರೌಂಡರ್‌ ಜಿಮ್ಮಿ ನೀಶಮ್‌ ಏಕದಿನ ವಿಶ್ವಕಪ್‌ನಲ್ಲಿ ಬಹಳ ಸುದ್ದಿ ಮಾಡಿದ್ದರು. ಕಿವೀಸ್‌ ಫೈನಲ್‌ ತಲುಪುವಲ್ಲಿ ಇವರ ಕೊಡುಗೆ ದೊಡ್ಡದು. ಎಡಗೈ ಬ್ಯಾಟಿಂಗ್‌, ಬಲಗೈ ವೇಗದ ಬೌಲಿಂಗ್‌ ಇವರ ಸ್ಪೆಷಾಲಿಟಿ. 2014ರಲ್ಲಿ ಒಮ್ಮೆ ಮಾತ್ರ ಐಪಿಎಲ್‌ ಆಡಿದ್ದಾರೆ. ಅಂದು ಡೆಲ್ಲಿ ಪರ ಬರೀ 42 ರನ್‌ ಗಳಿಸಿದ ಅವರು, ಒಂದೇ ವಿಕೆಟ್‌ ಕಿತ್ತಿದ್ದರು. ಬಳಿಕ ಐಪಿಎಲ್‌ನಿಂದ ಹೊರಬಿದ್ದರು. ಇದೀಗ ಕೆರಿಬಿಯನ್‌ ಲೀಗ್‌ನಲ್ಲಿ ಟ್ರಿನ್‌ಬ್ಯಾಗೊ ನೈಟ್‌ರೈಡರ್ಸ್‌ ತಂಡದ ಪರ ಅಮೋಘವಾಗಿ ಬೌಲಿಂಗ್‌ ಮಾಡಿ 11 ವಿಕೆಟ್‌ ಕಿತ್ತಿದ್ದಾರೆ. ನೀಶಮ್‌ ಹೊಸ ಅವತಾರವನ್ನು ನೋಡಿರುವ ಐಪಿಎಲ್‌ ಮಂದಿ ಇವರಿಗಾಗಿ ಸ್ಪರ್ಧೆ ಮಾಡುವ ಎಲ್ಲ ಸಾಧ್ಯತೆಯಿದೆ.

ಜೈಸ್ವಾಲ್‌ನ ಯಶಸ್ವಿ ಪಯಣ
ಕೇವಲ 18 ವರ್ಷದ ಮುಂಬೈ ಹುಡುಗ ಯಶಸ್ವಿ ಜೈಸ್ವಾಲ್‌ ಇಷ್ಟು ದಿನಗಳ ಕಾಲ ಯಾರಿಗೂ ಗೊತ್ತಿರಲಿಲ್ಲ. ಆದರೀಗ ಭಾರೀ ಸಂಚಲನ ಮೂಡಿಸಿದ್ದಾರೆ. ಅಂಡರ್‌-19 ಏಶ್ಯ ಕಪ್‌ನಲ್ಲಿ ಆಡಿ, ಮಿಂಚು ಹರಿಸಿದ್ದಾರೆ. 2017-18ರ ವಿಜಯ್‌ ಮರ್ಚೆಂಟ್‌ ಕೂಟದಲ್ಲಿ 81.80 ಸರಾಸರಿಯಲ್ಲಿ ರನ್‌ ಗಳಿಸಿದ್ದರು. ಈ ವರ್ಷ ದೇಶೀ ಏಕದಿನ ಹಾಗೂ ರಣಜಿಯಲ್ಲೂ ಕಣಕ್ಕಿಳಿದಿದ್ದಾರೆ. ಬಹಳ ದೂರ ಸಾಗಬೇಕಾಗಿದ್ದರೂ, ಟಿ20 ಮಟ್ಟಿಗೆ ಜೈಸ್ವಾಲ್‌ ಐಪಿಎಲ್‌ ಫ್ರಾಂಚೈಸಿಗಳ ಡಾರ್ಲಿಂಗ್‌ ಆಗುವುದರಲ್ಲಿ ಅನುಮಾನವೇ ಇಲ್ಲ.

ಬಾದ್‌ ಶಾ ಶಾರೂಖ್‌ ಖಾನ್‌
ಶಾರೂಖ್‌ ಖಾನ್‌ ಎಂದು ಹೇಳಿದೊಡನೆ ಎಲ್ಲರ ಕಣ್ಮುಂದೆ ಸುಳಿಯುವುದು ಬಾಲಿವುಡ್‌ ಬಾದ್‌ಶಾ. ಈಗ ಅವರ ಹೆಸರನ್ನು ಮರೆತುಬಿಡಿ. ತಮಿಳುನಾಡು ಕ್ರಿಕೆೆಟ್‌ನಲ್ಲೊಬ್ಬ ಶಾರೂಖ್‌ ಖಾನ್‌ ಇದ್ದಾರೆ. ಯಾರಿಗೆ ಗೊತ್ತು? ಮುಂದಿನ ದಿನಗಳಲ್ಲಿ ಶಾರೂಖ್‌ ಖಾನ್‌ ಎಂದರೆ ಈ ಹುಡುಗನ ನೆನಪಾಗುವ ಕಾಲವೂ ಬರಬಹುದು. ಹಾಗಿದೆ ಈತನ ಸ್ಫೋಟಕ ಬ್ಯಾಟಿಂಗ್‌! ತ.ನಾಡು ಟಿ20 ಲೀಗ್‌ನಲ್ಲಿ 2 ವರ್ಷಗಳಿಂದ ಅಮೋಘ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ದುಬಾರಿ ಯುವ ಆಟಗಾರರಲ್ಲೊಬ್ಬರಾಗುವುದು ಖಚಿತ.

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.