ಮುಗೀತು ಕೋಟಿ ಲೆಕ್ಕ


Team Udayavani, Dec 19, 2018, 10:31 AM IST

ipl.png

ಜೈಪುರ: 2019ರಲ್ಲಿ ನಡೆಯುವ ಐಪಿಎಲ್‌ಗಾಗಿ ಇಲ್ಲಿ ನಡೆದ ಹರಾಜು ಹಲವು ಅನಿರೀಕ್ಷಿತಗಳನ್ನು, ಪ್ರಶ್ನೆಗಳನ್ನು,
ಅಚ್ಚರಿಗಳನ್ನು ಸೃಷ್ಟಿಸಿದೆ. ಇದುವರೆಗೆ ಬಹುತೇಕ ಪರಿಚಯವೇ ಇಲ್ಲದಿದ್ದ ತಮಿಳುನಾಡಿನ ಕ್ರಿಕೆಟಿಗ ವರುಣ್‌
ಚಕ್ರವರ್ತಿ ಈ ಬಾರಿ ಹರಾಜಿನಲ್ಲೇ ಗರಿಷ್ಠ 8.4 ಕೋಟಿ ರೂ. ಗಳಿಸಿದ್ದಾರೆ. ಮತ್ತೂಂದು ಎಡಗೈ ವೇಗಿ ಜೈದೇವ್‌
ಉನಾಡ್ಕತ್‌ ಕೂಡ ಇಷ್ಟೇ ಮೊತ್ತ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಆರ್‌ಸಿಬಿ ತಂಡ ವೆಸ್ಟ್‌ಇಂಡೀಸ್‌ ಸ್ಫೋಟಕ
ಬ್ಯಾಟ್ಸ್‌ಮನ್‌ ಶಿಮ್ರಾನ್‌ ಹೆಟ್‌ಮೈರ್‌ರನ್ನು ಬುಟ್ಟಿಗೆ ಹಾಕಿಕೊಂಡಿದೆ. ಆರಂಭದಲ್ಲಿ ಮಾರಾಟವಾಗದೇ ಉಳಿದಿದ್ದ
ಯುವರಾಜ್‌ ಸಿಂಗ್‌ ಕಡೆಗೂ ಮೂಲಬೆಲೆ 1 ಕೋಟಿ ರೂ. ಗೆ ಮುಂಬೈ ಇಂಡಿಯನ್ಸ್‌ ಪಾಲಾಗಿದ್ದಾರೆ.

ಇಂಗ್ಲೆಂಡ್‌ನ‌ ಕ್ರಿಸ್‌ ವೋಕ್ಸ್‌, ಅಲೆಕ್ಸ್‌ ಹೇಲ್ಸ್‌, ದ.ಆಫ್ರಿಕಾದ ಖ್ಯಾತ ವೇಗಿ ಡೇಲ್‌ ಸ್ಟೇನ್‌, ನ್ಯೂಜಿಲೆಂಡ್‌ನ‌ ಬ್ರೆಂಡನ್‌
ಮೆಕಲಂ ಮಾರಾಟವಾಗದೇ ಉಳಿದರು. ಏಕದಿನ ವಿಶ್ವಕಪ್‌ ಹಿನ್ನೆಲೆಯಲ್ಲಿ ಇಂಗ್ಲೆಂಡಿಗರು ಮಾರಾಟವಾಗದಿದ್ದದ್ದು
ಸರಿಯೆನಿಸಿದರೂ, ಮೆಕಲಂ, ಡೇಲ್‌ಸ್ಟೇನ್‌ ಮಾರಾಟವಾಗದಿದ್ದದ್ದು ಯಾಕೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಿತು. ವಿಶ್ವಕಪ್‌ ಹಿನ್ನೆಲೆಯಲ್ಲಿ ಆಸೀಸ್‌ ಆಟಗಾರರನ್ನು ಫ್ರಾಂಚೈಸಿಗಳು ಹೆಚ್ಚು ಗಮನಿಸಲಿಲ್ಲ.

2ನೇ ಬಾರಿ ಮಾರಾಟವಾದ ಯುವಿ: ಮೊದಲ ಸುತ್ತಿನಲ್ಲಿ ಮಾರಾಟ ಕಾಣದೇ ಯುವರಾಜ್‌ ಸಿಂಗ್‌ ಮುಖಭಂಗಕ್ಕೊಳಗಾಗಿದ್ದರು. ಕಡೆಗೂ ಎರಡನೇ ಸುತ್ತಿನಲ್ಲಿಮತ್ತೆ ಅವರ ಹೆಸರು ಬಂದಾಗ ಮುಂಬೈ ಇಂಡಿಯನ್ಸ್‌ 1 ಕೋಟಿ ರೂ. ನೀಡಿ ಅವರನ್ನು ಖರೀದಿಸಿತು. ಈ ಹಿಂದೆ ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಮಾರಾಟವಾಗಿದ್ದ ಯುವಿ ಭಾರೀ ಅವಮಾನದಿಂದ ಪಾರಾದರು.


ಆಸೀಸ್‌, ಇಂಗ್ಲೆಂಡ್‌ ಆಟಗಾರರತ್ತ ನಿರ್ಲಕ್ಷ್ಯ

ಮುಂದಿನ ವರ್ಷ ಏಕದಿನ ವಿಶ್ವಕಪ್‌ ನಡೆಯುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯ ಆಟಗಾರರ  ಫ್ರಾಂಚೈಸಿಗಳು ವಿಶೇಷ ಆಸಕ್ತಿ ತೋರಲಿಲ್ಲ. ಆದರೆ ಉಳಿದ ದೇಶಗಳ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಮುಂದಾದರು. ದ.ಆಫ್ರಿಕಾ, ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌ ಆಟಗಾರರನ್ನುಕೊಳ್ಳಲು ವಿಶೇಷ ಮುತುವರ್ಜಿ ವಹಿಸಲಾಗಿತ್ತು.


16ರ ಪೋರ ಪ‹ಯಾಸ್‌ಗೆ ಕೋಟಿ ರೂ. ನೀಡಿದ ಆರ್‌ಸಿಬಿ

ವಿಶೇಷವೆಂದರೆ ಇನ್ನೂ 16 ವರ್ಷದ ಬಂಗಾಳಿ ಬೌಲರ್‌ ಪ್ರಯಾಸ್‌ ರೇ ಬರ್ಮನ್‌ಗೆ ಆರ್‌ಸಿಬಿ ತಂಡ 1.5 ಕೋಟಿ ರೂ. ನೀಡಿ ಖರೀದಿಸಿದೆ. ವಿಜಯ್‌ ಹಜಾರೆ ಟ್ರೋಫಿಯಲ್ಲಿ ಈತ ಬಂಗಾಳದ ಪರ ಗರಿಷ್ಠ ವಿಕೆಟ್‌ ಪಡೆದಿದ್ದರು.

ಆರ್‌ಸಿಬಿಗೆ ಮಾರಾಟವಾದವರು
ಶಿವಂ ದುಬೆ 5 ಕೋಟಿ ರೂ.
ಅಕ್ಷದೀಪ್‌ನಾಥ್‌ 3.6 ಕೋಟಿ ರೂ.
ಪ್ರಯಾಸ್‌ ರೇ ಬರ್ಮನ್‌ 1.5 ಕೋಟಿ ರೂ.
ಹಿಮ್ಮತ್‌ ಸಿಂಗ್‌ 65 ಲಕ್ಷ ರೂ.
ಗುರುಕೀರತ್‌ ಸಿಂಗ್‌ ಮಾನ್‌ 50 ಲಕ್ಷ ರೂ.
ಹೆನ್ರಿಚ್‌ ಕ್ಲಾಸೆನ್‌ 50 ಲಕ್ಷ
ದೇವದತ್‌ ಪಡಿಕ್ಕಲ್‌ 20 ಲಕ್ಷ ರೂ.
ಮಿಲಿಂದ್‌ ಕುಮಾರ್‌ 20 ಲಕ್ಷ ರೂ

ಟಾಪ್ ನ್ಯೂಸ್

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.