ಐಪಿಎಲ್ ಹರಾಜು: ಆರ್ ಸಿಬಿ ಪಾಲಾದ ಹರ್ಷಲ್ ಪಟೇಲ್; ರೈನಾ, ಸ್ಮಿತ್, ಶಕಿಬ್ ಗಿಲ್ಲ ಬೇಡಿಕೆ!


Team Udayavani, Feb 12, 2022, 2:42 PM IST

ipl auction

ಬೆಂಗಳೂರು: ಐಪಿಎಲ್ ಮೆಗಾ ಹರಾಜು ಸದ್ಯ ತಾತ್ಕಾಲಿಕ ಸ್ಥಗಿತವಾಗಿದೆ. ಎರಡನೇ ಹಂತದ ಹರಾಜು ಪ್ರಕ್ರಿಯೆಯು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಮಿಸ್ಟರ್ ಐಪಿಎಲ್ ಸುರೇಶ್ ರೈನಾ, ಸ್ಟೀವ್ ಸ್ಮಿತ್ ನಂತಹ ದಿಗ್ಗಜರಿಗೆ ಬೇಡಿಕೆ ಇಲ್ಲವಾಗಿದೆ.

ಆಟಗಾರರ ಹೆಸರು ಕೂಗಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಹ್ಯೂ ಎಡ್ಮೆಡ್ಸ್ ಇದ್ದಕ್ಕಿಂದ್ದಂತೆ ಕುಸಿದು ಬಿದ್ದಿದ್ದು, ಗೊಂದಲ ಉಂಟಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲ ಹಂತದ ಬಿಡ್ಡಿಂಗ್ ನಲ್ಲಿ ಶ್ರೇಯಸ್ ಅಯ್ಯರ್ ಅತೀ ಹೆಚ್ಚು ಅಂದರೆ 12.25 ಕೋಟಿ ರೂ ಗೆ ಕೆಕೆಆರ್ ತಂಡದ ಪಾಲಾದರೆ, ಆರ್ ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ ಗೆ ಖರೀದಿ ಮಾಡಿತು.

ಮೊದಲ ಹಂತದ ಬಿಡ್ಡಿಂಗ್ ನ ಸಂಪೂರ್ಣ ವಿವರ:ಐಪಿಎಲ್ ಹರಾಜು: ಭಾರೀ ಮೊತ್ತ ಪಡೆದ ಅಯ್ಯರ್, ರಬಾಡ; ಹುಸಿಯಾಯಿತು ವಾರ್ನರ್ ನಿರೀಕ್ಷೆ

ಮನೀಶ್ ಪಾಂಡೆ: ಮಾಜಿ ಹೈದರಾಬಾದ್ ಆಟಗಾರ ಮನೀಶ್ ಪಾಂಡೆ ಅವರು 4.6 ಕೋಟಿ ರೂ. ಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು.

ಶಿಮ್ರನ್ ಹೆಟ್ಮೈರ್: ವಿಂಡೀಸ್ ನ ಸ್ಫೋಟಕ ಆಟಗಾರ ಶಿಮ್ರನ್ ಹೆಟ್ಮೈರ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ 8.5 ಕೋಟಿ ರೂ. ಗೆ ಖರೀದಿ ಮಾಡಿತು. ಈ ಮೊದಲು ಹೆಟ್ಮೈರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದರು.

ರಾಬಿನ್ ಉತ್ತಪ್ಪ: ಕರ್ನಾಟಕದ ರಾಬಿನ್ ಉತ್ತಪ್ಪ ಅವರನ್ನು ಸಿಎಸ್ ಕೆ ತಂಡವು 2 ಕೋಟಿ ರೂ ಗೆ ಮತ್ತೆ ಖರೀದಿಸಿತು.

ಜೇಸನ್ ರಾಯ್: ಇಂಗ್ಲೆಂಡ್ ನ ಆರಂಭಿಕ ಆಟಗಾರ ಜೇಸನ್ ರಾಯ್ ರನ್ನು ಗುಜರಾತ್ ಟೈಟನ್ಸ್ ತಂಡ 2 ಕೋಟಿ ರೂ ಗೆ ಖರೀದಿ ಮಾಡಿತು.

ಡೇವಿಡ್ ಮಿಲ್ಲರ್: ಅನ್ ಸೋಲ್ಡ್

ದೇವದತ್ತ ಪಡಿಕ್ಕಲ್: ಮಾಜಿ ಆರ್ ಸಿಬಿ ಆಟಗಾರ ಪಡಿಕ್ಕಲ್ ಖರೀದಿಗೆ ಭಾರೀ ಪೈಪೋಟಿ ನಡೆಯಿತು. ಅಂತಿಮವಾಗಿ ರಾಜಸ್ಥಾನ ತಂಡ ಪಡಿಕ್ಕಲ್ ರನ್ನು 7.75 ಕೋಟಿ ರೂ ಗೆ ಖರೀದಿಸಿತು.

ಸುರೇಶ್ ರೈನಾ: ಅನ್ ಸೋಲ್ಡ್

ಸ್ಟೀವ್ ಸ್ಮಿತ್: ಅನ್ ಸೋಲ್ಡ್

ಇದನ್ನೂ ಓದಿ:ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮೆಡ್ಸ್; ಐಪಿಎಲ್ ಮೆಗಾ ಹರಾಜು ತಾತ್ಕಾಲಿಕ ಸ್ಥಗಿತ

ಡ್ವೆಯ್ನ್ ಬ್ರಾವೋ: ಸಿಎಸ್ ಕೆ ಪರವಾಗಿ ಆಡಿದ್ದ ಹಿರಿಯ ಆಲ್ ರೌಂಡರ್ ಬ್ರಾವೋ ಮತ್ತೆ ಧೋನಿ ಪಾಳಯ ಸೇರಿದರು. 2 ಕೋಟಿ ಮೂಲ ಬೆಲೆಯ ಬ್ರಾವೋಗೆ 4.40 ಕೋಟಿ ರೂ ನೀಡಿ ಸಿಎಸ್ ಕೆ ಖರೀದಿಸಿತು.

ನಿತೀಶ್ ರಾಣಾ: ಕೆಕೆಆರ್ ಪರವಾಗಿ ಆಡಿದ್ದ ಎಡಗೈ ಆಟಗಾರ ನಿತೀಶ್ ರಾಣಾ ಮತ್ತೆ ಕೆಕೆಆರ್ ತಂಡಕ್ಕೆ ಸೇರಿದರು. ಈ ಬಾರಿ ರಾಣಾರನ್ನು ಕೆಕೆಆರ್ 8 ಕೋಟಿ ರೂಗೆ ಖರೀದಿ ಮಾಡಿತು.

ಜೇಸನ್ ಹೋಲ್ಡರ್: ವೆಸ್ಟ್ ಇಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಗೆ ಉತ್ತಮ ಬೇಡಿಕೆ ಕಂಡುಬಂತು. ಅಂತಿಮವಾಗಿ ಹೋಲ್ಡರ್ 8.75 ಕೋಟಿ ರೂ ಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು.

ಶಕಿಬ್ ಅಲ್ ಹಸನ್: ಅನ್ ಸೋಲ್ಡ್

ಹರ್ಷಲ್ ಪಟೇಲ್: ಕಳೆದ ಆವೃತ್ತಿಯ ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ಈ ಬಾರಿಯ ಹರಾಜಿನಲ್ಲಿ ಗಮನ ಸೆಳೆದರು. ಅಂತಿಮವಾಗಿ 10.75 ಕೋಟಿ ರೂ ಗೆ ಆರ್ ಸಿಬಿ ಪಾಲಾದರು.

ದೀಪಕ್ ಹೂಡಾ: ಇತ್ತೀಚೆಗಷ್ಟೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ದೀಪಕ್ ಹೂಡಾರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿ ಮಾಡಿತು. ಹೂಡಾ 5.75 ಕೋಟಿ ರೂ ಪಡೆದರು.

ವಾನಿಂದು ಹಸರಂಗ: ಲಂಕಾದ ಸ್ಪಿನ್ ಆಲ್ ರೌಂಡರ್ ವಾನಿಂದು ಹಸರಂಗ ಉತ್ತಮ ಬೇಡಿಕೆ ಪಡೆದರು. 10.75 ಕೋಟಿ ರೂ. ಗೆ ಬಿಡ್ಡಿಂಗ್ ನಡೆಯತ್ತಿದ್ದ ವೇಳೆ ಹರಾಜುದಾರ ಅಸ್ವಸ್ಥರಾದ ಕಾರಣ ಸದ್ಯಕ್ಕೆ ಬಿಡ್ಡಿಂಗ್ ನಿಲ್ಲಿಸಲಾಗಿದೆ.

ಟಾಪ್ ನ್ಯೂಸ್

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.