2020ರ ಐಪಿಎಲ್‌ ಗೆ ದಿನಾಂಕ ನಿಗದಿ : ಮಾ. 29ಕ್ಕೆ ಆರಂಭ ; ಮೇ 24ಕ್ಕೆ ಮುಕ್ತಾಯ

ಐಪಿಎಲ್‌ 8ರ ಬದಲು 7.30ಕ್ಕೆ ಆರಂಭ

Team Udayavani, Jan 8, 2020, 7:15 AM IST

IPL

ಮುಂಬಯಿ: ಮುಂದಿನ ವರ್ಷದ ಐಪಿಎಲ್‌ ಆರಂಭ ಮತ್ತು ಅಂತ್ಯದ ದಿನಾಂಕ ಅಂತಿಮಗೊಂಡಿದೆ ಎನ್ನಲಾಗಿದೆ. ಪತ್ರಿಕೆಯೊಂದರ ಪ್ರಕಾರ ಪಂದ್ಯ ಮಾ. 29ಕ್ಕೆ ಆರಂಭವಾಗಿ, ಮೇ 24ಕ್ಕೆ ಮುಗಿಯಲಿದೆ. ಮುಂದಿನ ಬಾರಿ ಪಂದ್ಯಗಳು 8 ಗಂಟೆ ಬದಲು 7.30ಕ್ಕೆ ಆರಂಭವಾಗಲಿವೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಯಾವ ದಿನವೂ ಎರಡು ಪಂದ್ಯಗಳಿರುವುದಿಲ್ಲ. ಆದ್ದರಿಂದ ದಿನಗಳ ಸಂಖ್ಯೆ 45ರಿಂದ 57ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದಿನ 12 ಆವೃತ್ತಿಗಳಲ್ಲಿ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭ ವಾಗಿದ್ದವು. ಇದನ್ನು 7 ಗಂಟೆಗೆ ಬದಲಾಯಿಸಬೇಕೆಂದು ನೇರ ಪ್ರಸಾರ ವಾಹಿನಿ ಸ್ಟಾರ್‌ನ್ಪೋರ್ಟ್ಸ್ ಒತ್ತಾಯಿಸಿತ್ತು. ಪಂದ್ಯಗಳು ಬಹಳ ತಡವಾಗಿ ಮುಗಿಯುತ್ತಿವೆ. ಆದ್ದರಿಂದ ಅಭಿಮಾನಿಗಳಿಗೆ ಮನೆಗೆ ಹಿಂದಿರು ಗಲು ಸಮಸ್ಯೆಯಾಗುತ್ತದೆ ಎನ್ನುವುದು ಇದರ ಹಿಂದಿನ ಉದ್ದೇಶ. ಆದರೆ ಇದರ ಹಿಂದೆ ಟಿಆರ್‌ಪಿ ಉದ್ದೇಶವಿದೆ ಎನ್ನುವುದು ಫ್ರಾಂಚೈಸಿಗಳ ಆಕ್ಷೇಪ. ಈಗ ಪರಸ್ಪರ ಸಂಧಾನಕ್ಕೆ ಬಂದಂತಿದ್ದು, 7.30ಕ್ಕೆ ಪಂದ್ಯಾರಂಭ ಮಾಡಲು ಒಪ್ಪಿಕೊಂಡಂತಿದೆ.

45ರಿಂದ 57 ದಿನಗಳಿಗೇರಿಕೆ
ವಾರಾಂತ್ಯದ ದಿನಗಳಲ್ಲಿ ಎರಡು ಪಂದ್ಯಗಳು ನಡೆಯುವ ಕಾರಣ ಐಪಿಎಲ್‌ 45 ದಿನಗಳಲ್ಲಿ ಮುಗಿಯುತ್ತಿತ್ತು. ಇದೀಗ ದಿನಕ್ಕೊಂದೇ ಪಂದ್ಯ ನಡೆಸಲು ನಿರ್ಧರಿಸಿದ ಕಾರಣ ದಿನಗಳನ್ನು 57ಕ್ಕೇರಿಸಲಾಗುತ್ತಿದೆ. ಮಧ್ಯಾಹ್ನ ಪಂದ್ಯ ನಡೆಸುವುದರಿಂದ ಅಭಿಮಾನಿಗಳು ಮೈದಾನಕ್ಕೆ ಬರುವುದಿಲ್ಲ ಎಂದು ಫ್ರಾಂಚೈಸಿಗಳು ಆಕ್ಷೇಪಿಸಿದ್ದವು. ಇದನ್ನು ಮನಗಂಡು ದಿನಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಫ್ರಾಂಚೈಸಿಗಳ ಆಕ್ಷೇಪವೇನು?
7 ಗಂಟೆಗೆ ಪಂದ್ಯಾರಂಭಿಸಲು ಫ್ರಾಂಚೈಸಿಗಳ ಆಕ್ಷೇಪವಿದೆ. ಸಂಜೆ 6ರಷ್ಟೊತ್ತಿಗೆ ಕಚೇರಿ ಕೆಲಸ ಮುಗಿಸಿ, ಅಭಿಮಾನಿಗಳು ತಮ್ಮ ಕುಟುಂಬ ಸಹಿತ ಮೈದಾನಕ್ಕೆ ಆಗಮಿಸಲು ಸಾಧ್ಯವೇ? ದಿಲ್ಲಿ, ಮುಂಬಯಿ, ಬೆಂಗಳೂರಿ ನಂತಹ ಮೆಟ್ರೋ ನಗರಗಳ ಇಂದಿನ ಪರಿಸ್ಥಿತಿಯಲ್ಲಿ ಇದು ಸಾಧ್ಯವೇ? ಎನ್ನುವುದು ಫ್ರಾಂಚೈಸಿಗಳ ಪ್ರಶ್ನೆ.

ಬಿಸಿಸಿಐ ಮೂಲಗಳು ಬೇರೆಯ ಮಾತನ್ನೇ ಹೇಳುತ್ತವೆ. ಇದು ಕೇವಲ ನೇರಪ್ರಸಾರ ಮಾಡುವ ಟಿವಿಯ ಸಮಸ್ಯೆ ಮಾತ್ರವಲ್ಲ. ಜನರ ಸಮಸ್ಯೆ ಯೂ ಹೌದು. ರಾತ್ರಿ ತಡವಾಗಿ ಪಂದ್ಯ ಮುಗಿಯುತ್ತವೆ (ರಾತ್ರಿ 11.30, ಕೆಲವೊಮ್ಮೆ 12, 1 ಗಂಟೆ ಆಗುವುದೂ ಇದೆ). ಆ ಹೊತ್ತಿನಲ್ಲಿ ಅಭಿಮಾನಿಗಳು ಮನೆಗೆ ತಲುಪುವುದು ಹೇಗೆ ಎಂದು ಬಿಸಿಸಿಐ ಕೇಳುತ್ತಿದೆ. ಈಗ ಎರಡೂ ಬಣಗಳು ಮಾತುಕತೆ ಮೂಲಕ 7.30ಕ್ಕೆ ಪಂದ್ಯಾರಂಭಿಸುವ ಮಧ್ಯಮ ಮಾರ್ಗವನ್ನು ಹಿಡಿದಂತಿದೆ.

ಮೊಟೇರಾದಲ್ಲಿ ಫೈನಲ್‌?
ಮುಂದಿನ ವರ್ಷದ ಐಪಿಎಲ್‌ ಅಂತಿಮ ಪಂದ್ಯ ಸದ್ಯ ನವೀಕರಣದ ಅಂತಿಮ ಹಂತದಲ್ಲಿರುವ ಗುಜರಾತ್‌ನ ಮೊಟೇರಾದಲ್ಲಿ ನಡೆಯುವ ಸಾಧ್ಯತೆಯಿದೆ. 1.10 ಲಕ್ಷ ಅಭಿಮಾನಿಗಳು ಕುಳಿತುಕೊಳ್ಳಲು ನೆರವಾಗುವ ಜತೆಗೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೈದಾನ ನಿರ್ಮಿಸಲಾಗಿದೆ. ಕ್ರಿಕೆಟೇತರ ದಿನಗಳಲ್ಲಿ ಇದೇ ಮೈದಾನವನ್ನು ಒಳಾಂಗಣ ಮೈದಾನವನ್ನಾಗಿ ಬದಲಾಯಿಸುವ ಅವಕಾಶವೂ ಇದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ.

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.