ಮುಂಬೈ ಮೇಲೆರಗಿ ಹೋದ ಚೆನ್ನೈ


Team Udayavani, May 2, 2021, 7:10 AM IST

IPL CRICKET MACH

ಹೊಸದಿಲ್ಲಿ: ಆರಂಭದಲ್ಲಿ ಮೊಯಿನ್‌ ಅಲಿ ಮತ್ತು ಡು ಪ್ಲೆಸಿಸ್‌, ಕೊನೆಯಲ್ಲಿ ಅಂಬಾಟಿ ರಾಯುಡು ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಸಾಹಸದಿಂದ ಮುಂಬೈ ಮೇಲೆರಗಿ ಹೋದ ಚೆನ್ನೈ ಸೂಪರ್‌ ಕಿಂಗ್ಸ್‌ 4 ವಿಕೆಟಿಗೆ 218 ರನ್‌ ರಾಶಿ ಹಾಕಿದೆ. ಈ ಮೂವರೂ ಅರ್ಧ ಶತಕ ಬಾರಿಸಿ ರಂಜಿಸಿದರು.

ಮೊದಲ 10 ಹಾಗೂ ಅಂತಿಮ 5 ಓವರ್‌ಗಳಲ್ಲಿ ಚೆನ್ನೈ ರನ್‌ ಪ್ರವಾಹವನ್ನೇ ಹರಿಸಿತು. ಕೊನೆಯ 5 ಓವರ್‌ಗಳಲ್ಲಿ ರಾಯುಡು-ಜಡೇಜ ಜೋಡಿ 82 ರನ್‌ ಪೇರಿಸಿತು. ಮುರಿಯದ 5ನೇ ವಿಕೆಟಿಗೆ 49 ಎಸೆತಗಳಲ್ಲಿ 102 ರಾಶಿ ಹಾಕಿದ ಹೆಗ್ಗಳಿಕೆ ಇವರದಾಯಿತು.

ಉತ್ತಮ ಫಾರ್ಮ್ನಲ್ಲಿದ್ದ ಋತುರಾಜ್‌ ಗಾಯಕ್ವಾಡ್‌ (4) ಇಲ್ಲಿ 4ನೇ ಎಸೆತದಲ್ಲೇ ಟ್ರೆಂಟ್‌ ಬೌಲ್ಟ್ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಆದರೆ ಇನ್‌ಫಾರ್ಮ್ ಓಪನರ್‌ ಫಾ ಡು ಪ್ಲೆಸಿಸ್‌ ಮತ್ತು 3ನೇ ಕ್ರಮಾಂಕದಲ್ಲಿ ಬಂದ ಮೊಯಿನ್‌ ಅಲಿ ಸೇರಿಕೊಂಡು ಮುಂಬೈ ಬೌಲರ್‌ಗಳನ್ನು ಭರ್ಜರಿಯಾಗಿ ದಂಡಿಸತೊಡಗಿದರು. ಅಲಿ ಅವರಂತೂ ಭಾರೀ ಜೋಶ್‌ನಲ್ಲಿದ್ದರು. ಬುಮ್ರಾ, ಚಹರ್‌, ನೀಶಮ್‌… ಯಾರಿಗೂ ರಿಯಾಯಿತಿ ತೋರಲಿಲ್ಲ. ಎಲ್ಲರಿಗೂ ಸಿಕ್ಸರ್‌ ರುಚಿ ತೋರಿಸಿದರು. ಅರ್ಧ ಶತಕ ಪೂರ್ತಿಗೊಳಿಸುವಷ್ಟರಲ್ಲಿ 5 ಸಿಕ್ಸರ್‌ ಸಿಡಿಸಿಯಾಗಿತ್ತು. 10 ಓವರ್‌ಗಳಲ್ಲಿ 95 ರನ್‌ ಹರಿದು ಬಂತು.

11ನೇ ಓವರ್‌ನಲ್ಲಿ ಬುಮ್ರಾ ಮೇಲೆರಗಿ ಹೋದ ಡು ಪ್ಲೆಸಿಸ್‌ ಸತತ ಸಿಕ್ಸರ್‌, ಬೌಂಡರಿ ಬಾರಿಸಿದರು. ಆದರೆ 5ನೇ ಎಸೆತದಲ್ಲಿ ಅಲಿ ವಿಕೆಟ್‌ ಕಿತ್ತು ದೊಡ್ಡದೊಂದು ಬ್ರೇಕ್‌ ಒದಗಿಸಿದರು. ಅಲಿ ಗಳಿಕೆ 36 ಎಸೆತಗಳಿಂದ 58 ರನ್‌. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 5 ಫೋರ್‌. ಇವರಿಬ್ಬರ ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 61 ಎಸೆತಗಳಿಂದ 108 ರನ್‌ ಹರಿದು ಬಂತು.

ಡು ಪ್ಲೆಸಿಸ್‌ ಸತತ 4ನೇ ಫಿಫ್ಟಿ

ಡು ಪ್ಲೆಸಿಸ್‌ ಸತತ 4ನೇ ಅರ್ಧ ಶತಕದ ಮೂಲಕ ತಮ್ಮ ಪ್ರಚಂಡ ಫಾರ್ಮ್ ತೆರೆದಿಟ್ಟರು. ಆಫ್ರಿಕನ್‌ ಕ್ರಿಕೆಟಿಗನ ಕೊಡುಗೆ ಭರ್ತಿ 50 ರನ್‌. 28 ಎಸೆತ ಎದುರಿಸಿ 4 ಸಿಕ್ಸರ್‌, 2 ಬೌಂಡರಿ ಬಾರಿಸಿದರು. ತಮ್ಮ ಮೊದಲ ಹಾಗೂ ಪಂದ್ಯದ 12ನೇ ಓವರ್‌ನಲ್ಲಿ ಪೊಲಾರ್ಡ್‌ ಅವಳಿ ವಿಕೆಟ್‌ ಕಿತ್ತು ಚೆನ್ನೈಗೆ ಬ್ರೇಕ್‌ ಹಾಕಿದರು. ಸತತ ಎಸೆತಗಳಲ್ಲಿ ಡು ಪ್ಲೆಸಿಸ್‌ ಮತ್ತು ಸುರೇಶ್‌ ರೈನಾ (2) ಅವರನ್ನು ಪೆವಿಲಿಯನ್ನಿಗೆ ಓಡಿಸಿದರು. ಅಲ್ಲಿಗೆ ಚೆನ್ನೈ ರನ್‌ರೇಟ್‌ ಕುಸಿಯತೊಡಗಿತು.

ಆದರೆ ಡೆತ್‌ ಓವರ್‌ಗಳಲ್ಲಿ ಅಂಬಾಟಿ ರಾಯುಡು ಸಿಡಿದು ನಿಲ್ಲುವುದರೊಂದಿಗೆ ಚೆನ್ನೈ ಬ್ಯಾಟಿಂಗ್‌ ಮತ್ತೆ ಬಿರುಸುಪಡೆಯತೊಡಗಿತು. ಇವರ ಹೊಡೆತಗಳಿಗೆ ಸಿಲುಕಿದ ಬುಮ್ರಾ, ಬೌಲ್ಟ್ ಎಸೆತಗಳು ಆಕಾಶಕ್ಕೆ ನೆಗೆದವು. 20 ಎಸೆತಗಳಲ್ಲಿ ರಾಯುಡು ಫಿಫ್ಟಿ ಪೂರ್ತಿಗೊಳಿಸಿದರು. ಬುಮ್ರಾ ಅವರ 4 ಓವರ್‌ಗಳಲ್ಲಿ 56 ರನ್‌ ಸೋರಿ ಹೋಯಿತು. ಇದು ಐಪಿಎಲ್‌ನಲ್ಲಿ ಅವರ ದುಬಾರಿ ಸ್ಪೆಲ್‌ ಆಗಿದೆ. ರಾಯುಡು 27 ಎಸೆತಗಳಿಂದ ಅಜೇಯ 72 ರನ್‌ ಬಾರಿಸಿದರು. ಈ ಸ್ಫೋಟಕ ಬ್ಯಾಟಿಂಗ್‌ ವೇಳೆ 7 ಸಿಕ್ಸರ್‌, 4 ಫೋರ್‌ ಸಿಡಿಯಿತು.

ಜೇಮ್ಸ್‌ ನೀಶಮ್‌ ಪ್ರವೇಶ

ನ್ಯೂಜಿಲ್ಯಾಂಡಿನ ಆಲ್‌ರೌಂಡರ್‌ ಜೇಮ್ಸ್‌ ನೀಶಮ್‌ ಮುಂಬೈ ಪರ ಮೊದಲ ಐಪಿಎಲ್‌ ಪಂದ್ಯ ಆಡಲಿಳಿದರು. ಇದರೊಂದಿಗೆ ಮುಂಬೈ ತನ್ನ ಎಲ್ಲ 8 ಮಂದಿ ವಿದೇಶಿ ಆಟಗಾರರಿಗೆ ಅವಕಾಶ ನೀಡಿದಂತಾಯಿತು. ಇವರಿಗಾಗಿ ಸ್ಥಾನ ಬಿಟ್ಟವರು ಜಯಂತ್‌ ಯಾದವ್‌. ಹಾಗೆಯೇ ನಥನ್‌ ಕೋಲ್ಟರ್‌ ನೈಲ್‌ ಬದಲು ಧವಳ್‌ ಕುಲಕರ್ಣಿ ಆಡಲಿಳಿದರು.ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.