ಐಪಿಎಲ್ ಕ್ರಿಕೆಟ್: ಉದ್ಘಾಟನಾ ಸಮಾರಂಭ ರದ್ದು?
Team Udayavani, Nov 6, 2019, 10:50 PM IST
ಮುಂಬಯಿ: ಮುಂದಿನ ಐಪಿಎಲ್ನಿಂದ ಉದ್ಘಾಟನಾ ಸಮಾರಂಭವನ್ನು ಶಾಶ್ವತವಾಗಿ ರದ್ದು ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಸಮಾರಂಭಕ್ಕೆ 30 ಕೋಟಿ ರೂ.ನಷ್ಟು ಹಣ ಸುಮ್ಮನೆ ವ್ಯರ್ಥವಾಗುತ್ತದೆ. ಹೀಗಾಗಿ ಇದನ್ನು ಉಳಿಸುವ ಬಗ್ಗೆ ಬಿಸಿಸಿಐ ಗಂಭೀ ರವಾಗಿ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷವೂ ಐಪಿಎಲ್ ಉದ್ಘಾ ಟನಾ ಸಮಾರಂಭ ನಡೆದಿ ರಲಿಲ್ಲ. ಆಗಷ್ಟೇ ಪುಲ್ವಾಮಾದಲ್ಲಿ ಭಾರತ ಯೋಧರ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದರು. ಆದ್ದರಿಂದ ಐಪಿಎಲ್ ಉದ್ಘಾಟನೆಯನ್ನು ರದ್ದು ಮಾಡಿ, ಇದರಿಂದ ಉಳಿದ 20 ಕೋ.ರೂ.ಗೂ ಹೆಚ್ಚು ಮೊತ್ತವನ್ನು ಬಿಸಿಸಿಐ ಕೇಂದ್ರ ಪರಿಹಾರ ನಿಧಿಗೆ ನೀಡಿತ್ತು.
ದುಡ್ಡು ಪೋಲು
ಐಪಿಎಲ್ ಉದ್ಘಾಟನಾ ಸಮಾ ರಂಭದಲ್ಲಿ ಈಗಾಗಲೇ ಪಾಪ್ ಗಾಯಕರಾದ ಕೇಟಿ ಪೆರ್ರಿ, ಅಕಾನ್, ಪಿಟ್ಬುಲ್ರಂಥವರು ಕಾರ್ಯಕ್ರಮ ನೀಡಿದ್ದಾರೆ. ಶಾರುಖ್ ಖಾನ್, ಶಾಹಿದ್ ಕಪೂರ್, ರಣಬೀರ್ ಕಪೂರ್, ಕತ್ರಿನಾ ಕೈಫ್, ಆಲಿಯಾ ಭಟ್ ಕೂಡ ವೇದಿಕೆ ಏರಿದ್ದಾರೆ. ಜತೆಗೆ ಝಗಮಗಿಸುವ ಲೇಸರ್ ಶೋಗಳನ್ನೂ ನಡೆಸಲಾಗುತ್ತಿತ್ತು. ಇಷ್ಟೆಲ್ಲ ಮಾಡಿದರೂ, ವೀಕ್ಷಕರ ಸ್ಪಂದನೆಯೇನೂ ಹೇಳಿಕೊಳ್ಳು ವಂತಿ ರಲಿಲ್ಲ. ಆದರೂ ಪ್ರತೀ ವರ್ಷ 30 ಕೋಟಿ ರೂ. ಖರ್ಚಾಗುತ್ತಿತ್ತು. ಈ ರೀತಿ ವ್ಯರ್ಥವಾಗುವ ಹಣ ಉಳಿಸಬ ಹುದೆನ್ನುವುದು ಬಿಸಿಸಿಐ ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ