ಗೆಲುವಿನ ಟ್ರ್ಯಾಕ್ಗೆ ಮರಳಲು ರಾಜಸ್ಥಾನ್ ರಾಯಲ್ಸ್ ಪ್ರಯತ್ನ
Team Udayavani, May 7, 2022, 7:30 AM IST
ಮುಂಬಯಿ: ರಾಜಸ್ಥಾನ್ ರಾಯಲ್ಸ್ ಶನಿವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ತನ್ನ ಅಭಿಯಾನವನ್ನು ಮರಳಿ ಟ್ರ್ಯಾಕ್ಗೆ ತರಬೇಕಾದರೆ ತಂಡವು ಬ್ಯಾಟಿಂಗ್ನಲ್ಲಿ ಮಿಂಚಲೇಬೇಕಾದ ಅಗತ್ಯವಿದೆ.
ಇದೇ ವೇಳೆ ಅಸ್ಥಿರ ಪ್ರದರ್ಶನ ನೀಡುತ್ತಿರುವ ಪಂಜಾಬ್ ಗೆಲುವಿನತ್ತ ಮುಖ ಮಾಡಬೇಕಾಗಿದೆ.
ರಾಜಸ್ಥಾನ್ ತಂಡವು ಒಂದು ಹಂತದಲ್ಲಿ ಅಂಕಪಟ್ಟಿಯ ಅಗ್ರಸ್ಥಾನ ಕ್ಕಾಗಿ ಗುಜರಾತ್ ಟೈಟಾನ್ಸ್ಗೆ ತೀವ್ರ ಪೈಪೋಟಿ ನೀಡಿತ್ತು. ಆದರೆ ಮಾಜಿ ಚಾಂಪಿಯನ್ ಆಗಿರುವ ರಾಜಸ್ಥಾನ್ ಇದೀಗ ಚಿಕ್ಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಸತತ ಎರಡು ಸೋಲಿನ ಬಳಿಕ ತಂಡವು ಪಂಜಾಬ್ ಸವಾಲಿಗೆ ಸಿದ್ಧವಾಗಿದೆ. ಈ ಹಿಂದಿನ ಪಂದ್ಯಗಳಲ್ಲಿ ತಂಡವು ಕೆಕೆಆರ್ ಮತ್ತು ಮುಂಬೈ ವಿರುದ್ಧ ಸೋತಿತ್ತು.
ಇನ್ನೊಂದು ಕಡೆ ಪಂಜಾಬ್ ತಂಡವು ಈ ಹಿಂದಿನ ಪಂದ್ಯದಲ್ಲಿ ಅಗ್ರ ಸ್ಥಾನಿ ಗುಜರಾತ್ ಟೈಟಾನ್ಸ್ ತಂಡ ವನ್ನು 8 ವಿಕೆಟ್ಗಳಿಂದ ಸೋಲಿಸಿದ ಹುಮ್ಮಸ್ಸಿನಲ್ಲಿದೆ. ಪ್ಲೇ ಆಫ್ಗೆ ತೇರ್ಗಡೆಯಾಗಬೇಕಾದರೆ ತಂಡವು ಗೆಲುವಿನ ಟ್ರ್ಯಾಕ್ನಲ್ಲಿಯೇ ಇರಬೇಕಾಗಿದೆ.
ಮಾಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ತಂಡ ಗೆಲುವಿನ ಉತ್ಸಾಹವನ್ನು ರಾಜಸ್ಥಾನ್ ವಿರುದ್ಧವೂ ಮುಂದು ವರಿಸಲು ಬಯಸಿದೆ.
ರಾಜಸ್ಥಾನ್ ಇದೀಗ ಅಂಕ ಪಟ್ಟಿ ಯಲ್ಲಿ ಮೂರನೇ ಸ್ಥಾನದಲ್ಲಿದೆ. ಜಾಸ್ ಬಟ್ಲರ್ ಅವರ ಸಾಹಸದಿಂದ ತಂಡ ಈ ಸಾಧನೆ ಮಾಡುವಂತಾಗಿದೆ. ಇಂಗ್ಲೆಂಡಿನ ಬಟ್ಲರ್ (588 ರನ್) ಈ ಐಪಿಎಲ್ನ ಗರಿಷ್ಠ ರನ್ ಗಳಿಸಿದ ಸಾಧಕರಾಗಿದ್ದಾರೆ. ಮುಂಬೈ ವಿರುದ್ದ ಅವರೊಬ್ಬರೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಕೆಕೆಆರ್ ವಿರುದ್ಧ ಉತ್ತಮವಾಗಿ ಆಡಲು ವಿಫಲರಾಗಿದ್ದರು. ಈ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ಸೋತಿತ್ತು.
ಅಗ್ರ ಕ್ರಮಾಂಕದಲ್ಲಿ ತಂಡದ ಇನ್ನುಳಿದ ಆಟಗಾರರಾದ ನಾಯಕ ಸಂಜು ಸ್ಯಾಮ್ಸನ್ ಮತ್ತು ದೇವದತ್ತ ಪಡಿಕ್ಕಲ್ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ವಹಿಸಿ ಆಡಬೇಕಾದ ಅಗತ್ಯವಿದೆ. ಅವ ರಿಬ್ಬರ ಜತೆ ಹಿಟ್ಟರ್ ಶಿಮ್ರನ್ ಹೆಟ್ಮೈರ್ ಸಿಡಿದರೆ ತಂಡವು ಉತ್ತಮ ನಿರ್ವಹಣೆ ನೀಡಲು ಸಾಧ್ಯ.
ಪಂಜಾಬ್ ತಂಡದ ಬೌಲಿಂಗ್ ಬಲಷ್ಠವಾಗಿದೆ. ಕಾಗಿಸೊ ರಬಾಡ ಬೌಲಿಂಗ್ ದಾಳಿಯ ನೇತೃತ್ವ ವಹಿಸಿದ್ದಾರೆ. ಕಳೆದ ಎರಡು ಪಂದ್ಯ ಗಳಲ್ಲಿ ಅವರು ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ. ಈ ಋತುವಿನಲ್ಲಿ ಅರ್ಷದೀಪ್ ಸಿಂಗ್ ಕೂಡ ಅಮೋಘ ದಾಳಿ ಸಂಯೋಜಿಸಿದ್ದಾರೆ. 23ರ ಹರೆಯದ ಅವರು ಹೆಚ್ಚಿನ ವಿಕೆಟ್ ಪಡೆಯದಿದ್ದರೂ ನಿಯಂತ್ರಿತ ದಾಳಿಯಿಂದ ಎದುರಾಳಿಗೆ ರನ್ವೇಗಕ್ಕೆ ಕಡಿವಾಣ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?