ರಂಗಿನ ಐಪಿಎಲ್‌: ಈ ಗೆಲುವುಗಳನ್ನು ಮರೆಯಲಾದೀತೇ?


Team Udayavani, Mar 22, 2019, 3:52 AM IST

ipl.png

ಈ ಹಿಂದಿನ 11 ಐಪಿಎಲ್‌ ಕೂಟಗಳಲ್ಲಿ ನಡೆದಿರುವ ಕೆಲವು ಪಂದ್ಯಗಳನ್ನು ಮರೆತೇನಂದ್ರೂ ಮರೆಯಲು ಸಾಧ್ಯವಿಲ್ಲ. ಅಂತಹ 5 ಪಂದ್ಯಗಳ ರೋಚಕ ಕ್ಷಣಗಳು ಇಲ್ಲಿವೆ.

ಕೊನೆ ಓವರ್‌ನಲ್ಲಿ 21 ರನ್‌ ಚಚ್ಚಿದ ರೋಹಿತ್‌
2009ರಲ್ಲಿ ನಡೆದ ಆ ಪಂದ್ಯ ರೋಹಿತ್‌ ಶರ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ ಪಂದ್ಯ. ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ 160 ರನ್‌ ಗಳಿಸಿತು. ಗೆಲ್ಲಲು ಡೆಕ್ಕನ್‌ ಚಾರ್ಜರ್ಸ್‌ಗೆ 161 ರನ್‌ ಬೇಕಿತ್ತು. ಅಂತಿಮ ಓವರ್‌ನಲ್ಲಿ ಬೇಕಿದ್ದದ್ದು 21 ರನ್‌. ಬಾಂಗ್ಲಾದ ಮಶ್ರಫೆ ಎಸೆದ ಆ ಓವರ್‌ನಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳನ್ನು ರೋಹಿತ್‌ ಚಚ್ಚಿದ ಪರಿಣಾಮ, ಡೆಕ್ಕನ್‌ ಅಗತ್ಯಕ್ಕಿಂತ 4 ರನ್‌ಗಳನ್ನು ಹೆಚ್ಚಾಗಿಯೂ ಗಳಿಸಿ, ಜಯಿಸಿತು.

ಬೌಲಿಂಗ್‌ ಪರಾಕ್ರಮಕ್ಕೆ ಟ್ರೋಫಿಯೇ ಒಲಿಯಿತು
2017ರ ಫೈನಲ್‌ನಲ್ಲಿ ಮುಂಬೈ ಮತ್ತು ರೈಸಿಂಗ್‌ ಪುಣೆ ತಂಡಗಳು ಎದುರಾಗಿದ್ದವು. ಪುಣೆಗೆ ಗೆಲ್ಲಲು ಒಟ್ಟು 129 ರನ್‌ ಅಗತ್ಯವಿತ್ತು. ಅಂತಿಮ ಓವರ್‌ನಲ್ಲಿ ಆ ತಂಡಕ್ಕೆ ಬೇಕಿದ್ದದ್ದು 12 ರನ್‌. ನಾಯಕ ಸ್ಮಿತ್‌, ತಿವಾರಿ ಕ್ರೀಸ್‌ನಲ್ಲಿದ್ದರು. ಮುಂಬೈ ಪರ ಜಾನ್ಸನ್‌ ದಾಳಿಗಿಳಿದಿದ್ದರು. ಅವರು ಆ ಓವರ್‌ನಲ್ಲಿ ಅದ್ಭುತ ದಾಳಿ ಸಂಘಟಿಸಿ, ಸ್ಮಿತ್‌, ತಿವಾರಿಯನ್ನು ಕೆಡವಿದರು. ರನೌಟ್‌ ಸೇರಿ ಒಟ್ಟು ಮೂರು ವಿಕೆಟ್‌ಗಳು ಅದೇ ಓವರ್‌ನಲ್ಲಿ ಉರುಳಿದವು. ಪುಣೆಗೆ ಜಾನ್ಸನ್‌ ನೀಡಿದ್ದು ಬರೀ 10 ರನ್‌ ಮಾತ್ರ. 1 ರನ್‌ ಅಂತರದಿಂದ ಮುಂಬೈ ಟ್ರೋಫಿ ಜೈಸಿತು.

ಇತಿಹಾಸದ ಮೊದಲ ಸೂಪರ್‌ ಓವರ್‌ ಜಯಭೇರಿ
2009ರಲ್ಲಿ ಇಡೀ ಐಪಿಎಲ್‌ ದ.ಆಫ್ರಿಕಾದಲ್ಲಿ ನಡೆದಿತ್ತು. ಆ ಕೂಟದ ಲೀಗ್‌ ಹಂತದಲ್ಲಿ ಬರೀ ಯುವಕರನ್ನೇ ಒಳಗೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಕೆಕೆಆರ್‌ ಸೆಣಸಿದ್ದವು. ಯೂಸುಫ್ ಪಠಾಣ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ 151 ರನ್‌ ಗಳಿಸಿತು. ಇದನ್ನು ಬೆನ್ನಟ್ಟಿ ಹೋದ ಕೆಕೆಆರ್‌, ಗಂಗೂಲಿ 46 ರನ್‌ ನೆರವಿನಿಂದ ಗೆಲುವಿನ ಸನಿಹ ತಲುಪಿತು. ಕೊನೆಯ ಎಸೆತದಲ್ಲಿ ಅದಕ್ಕೆ 2 ರನ್‌ ಬೇಕಿತ್ತು. ಸಿಕ್ಕಿದ್ದು ಒಂದು ರನ್‌ ಮಾತ್ರ. ಪಂದ್ಯ ಟೈಗೊಂಡಿತು. ಆಗ ಐಪಿಎಲ್‌ ಇತಿಹಾಸದ ಮೊದಲ ಸೂಪರ್‌ ಓವರ್‌ ನಡೆಯಿತು. ಅದರಲ್ಲಿ ಕೆಕೆಆರ್‌ 15 ರನ್‌ ಬಾರಿಸಿ, ರಾಜಸ್ಥಾನಕ್ಕೆ 16 ರನ್‌ ಗುರಿ ನೀಡಿತು. ಯೂಸುಫ್ ಪಠಾಣ್‌ ಮೊದಲ ನಾಲ್ಕೇ ಎಸೆತಕ್ಕೆ 16 ರನ್‌ ಬಾರಿಸಿ ರಾಜಸ್ಥಾನ್‌ ತಂಡವನ್ನು ಗೆಲ್ಲಿಸಿದರು.

ಒಂದೇ ಒಂದು ಕ್ಯಾಚ್‌ನಿಂದ ಫ‌ಲಿತಾಂಶವೇ ಬದಲಾಯ್ತು 


ಒಂದು ಪಂದ್ಯದ ದಿಕ್ಕುದೆಸೆಯನ್ನು ಒಂದು ಕ್ಯಾಚ್‌ ಹೇಗೆ ಬದಲಿಸಬಲ್ಲದು ಎನ್ನುವುದಕ್ಕೆ 2014ರಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ನಡುವೆ ನಡೆದ ಪಂದ್ಯ ಸಾಕ್ಷಿ. ದುಬೈನಲ್ಲಿ ನಡೆದ ಆ ಪಂದ್ಯದಲ್ಲಿ ಆರ್‌ಸಿಬಿಗೆ 151 ರನ್‌ ಗುರಿ ನೀಡಲಾಗಿತ್ತು. ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ 9 ರನ್‌ ಬೇಕಿತ್ತು. ಕ್ರೀಸ್‌ನಲ್ಲಿದ್ದದ್ದು ಬ್ಯಾಟಿಂಗ್‌ ದೈತ್ಯ ಡಿ ವಿಲಿಯರ್  ವಿನಯ್‌ ಕುಮಾರ್‌ ಎಸೆದ ಮೊದಲ 3 ಎಸೆತದಲ್ಲಿ ಬಂದಿದ್ದು ಮೂರು ರನ್‌. 4ನೇ ಎಸೆತವನ್ನು ಡಿ ವಿಲಿಯರ್ ಹೊಡೆದಿದ್ದು, ಸಿಕ್ಸರ್‌ ಗೆರೆ ದಾಟಿ ಹೋಯಿತು ಎಂದು ಎಲ್ಲರೂ ಯೋಚಿಸುತ್ತಿದ್ದರು. ಆಗ ನಡೆದಿದ್ದು ಪವಾಡ. ಮೇಲೆ ಹೋಗುತ್ತಿದ್ದ ಚೆಂಡನ್ನು ಅದ್ಭುತವಾಗಿ ನೆಗೆದು ಕ್ರಿಸ್‌ ಲಿನ್‌ ಹಿಡಿದರು. ನಂತರ ಚೆಂಡನ್ನು ಹಿಂದಕ್ಕೆ ಎಸೆದರು. ಆ ಮೇಲೆ ಮತ್ತೆ ಹಿಮ್ಮುಖವಾಗಿ ಓಡಿಬಂದು ಹಿಡಿದರು. ಡಿ ವಿಲಿಯರ್  ಔಟ್‌. ಅಂತೂ ಕೆಕೆಆರ್‌ 2 ರನ್‌ಗಳಿಂದ ಪಂದ್ಯ ಗೆದ್ದಿತ್ತು. ಒಂದು ಕ್ಯಾಚ್‌ ಪಂದ್ಯದ ಹಣೆಬರೆಹ ಬದಲಿಸಿತು.

ನಂಬಲು ಅಸಾಧ್ಯವಾದದ್ದು ಸಾಧ್ಯವಾಯ್ತು
ಇದು 2014ರ ಐಪಿಎಲ್‌ನಲ್ಲಿ ನಡೆದ ಒಂದು ಅಸಾಧಾರಣ ಪಂದ್ಯ. ಇದರ ಫ‌ಲಿತಾಂಶ ಎಷ್ಟು ರೋಚಕವಾಗಿತ್ತೆಂದರೆ ಈ ಪಂದ್ಯದಲ್ಲಿ ನಡೆದಿದ್ದೆಲ್ಲ ನಂಬಲು ಅಸಾಧ್ಯವಾದ ಘಟನೆಗಳೇ! ಕೂಟದುದ್ದಕ್ಕೂ ಕಳಪೆಯಾಗಿ ಆಡಿದ್ದ ಮುಂಬೈಗೆ ತನ್ನ ಕಡೆಯ ಲೀಗ್‌ ಪಂದ್ಯದಲ್ಲಿ ಪ್ಲೇಆಫ್ಗೇರಲು ಅಸಾಮಾನ್ಯ ಗೆಲುವೊಂದರ ಅವಶ್ಯಕತೆಯಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜ ಸ್ಥಾನ್‌ 190 ರನ್‌ ಗುರಿಯನ್ನು ಮುಂಬೈಗೆ ನೀಡಿತ್ತು. 20 ಓವರ್‌ಗಳು ಇದ್ದರೂ, ಮುಂಬೈ ಪ್ಲೇಆಫ್ಗೇರಬೇಕಾಗಿದ್ದರೆ, 14.3 ಓವರ್‌ನಲ್ಲೇ ಇದನ್ನು ಸಾಧಿಸ ಬೇಕಿತ್ತು.


ಆ್ಯಂಡರ್ಸನ್‌ ಚಚ್ಚಿದ ಪರಿಣಾಮ ಮುಂಬೈ ಇದನ್ನು ಸಾಧಿಸುವುದು ಖಚಿತವೆನ್ನುವ ಮಟ್ಟಕ್ಕೆ ಹೋಯ್ತು. 14.3ನೇ ಎಸೆತದಲ್ಲಿ ಮುಂಬೈ 2 ರನ್‌ ಗಳಿಸಿದರೆ, ಜಯ ಸಾಧಿಸುವುದು ಮಾತ್ರವಲ್ಲ ಪ್ಲೇಆಫ್ಗೇರುತ್ತಿತ್ತು. ಆ ಎಸೆತದಲ್ಲಿ ಬ್ಯಾಟ್ಸ್‌ ಮನ್‌ ರನೌಟ್‌. ಸ್ಕೋರ್‌ ಸಮಗೊಂಡಿತು. ರಾಜಸ್ಥಾನ್‌ ಪ್ಲೇಆಫ್ಗೇರಿದ ಖುಷಿಯಲ್ಲಿ ತೇಲಿತು. ಅಷ್ಟರಲ್ಲಿ ಮತ್ತೂಂದು ಜಾದೂ ನಡೆಯಿತು. ಮುಂದಿನ ಎಸೆತದಲ್ಲಿ 4 ರನ್‌ ಗಳಿಸಿದರೆ, ಆಗಲೂ ಮುಂಬೈಗೆ ಪ್ಲೇಆಫ್ ಅವಕಾಶವಿದೆ ಎಂದು ಗೊತ್ತಾಯ್ತು. ಆ ಎಸೆತದಲ್ಲಿ ಆದಿತ್ಯ ತಾರೆ ಸಿಕ್ಸರ್‌ ಬಾರಿಸಿ ಅಸಾಧ್ಯವಾದದ್ದನ್ನು ಸಾಧಿಸಿದರು!

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.