ಐಪಿಎಲ್: ಕೆಕೆಆರ್ ತಂಡದಿಂದ ನಾಗರ್ಕೋಟಿ, ಶಿವಂ ಮಾವಿ ಔಟ್
Team Udayavani, Mar 15, 2019, 12:50 AM IST
ಕೋಲ್ಕತಾ: ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಕೋಲ್ಕತಾ ನೈಟ್ರೈಡರ್ ತಂಡ ಭಾರೀ ಆಘಾತ ಅನುಭವಿಸಿದೆ. ತಂಡ ಪ್ರಮುಖ ವೇಗಿಗಳು ಗಾಯಾಳುಗಳಾಗಿದ್ದು, ಐಪಿಎಲ್ನಿಂದಲೇ ಹೊರಹೋಗಿದ್ದಾರೆ. ಇವರೆಂದರೆ ಕಮಲೇಶ್ ನಾಗರ್ಕೋಟಿ ಮತ್ತು ಶಿವಂ ಮಾವಿ.
ಇಬ್ಬರೂ ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳು ಹೆಚ್ಚಿನ ಸಮಯ ಬೇಕಾಗಿರುವ ಕಾರಣ ಐಪಿಎಲ್ ಕೂಟದಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದಾರೆ. ಐಪಿಎಲ್ ಹರಾಜಿನಲ್ಲಿ ಕಮಲೇಶ್ ನಾಗರ್ಕೋಟಿ ಅವರನ್ನು 3.2 ಕೋಟಿ ರೂ.ಗಳಿಗೆ ಕೆಕೆಆರ್ ಖರೀದಿಸಿತ್ತು. ಅಂಡರ್-19 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಕೆಕೆಆರ್ ತಂಡಕ್ಕೆ ಮಾರಾಟವಾದ ಕಮಲೇಶ್ ಮೊದಲ ಐಪಿಎಲ್ ಪಂದ್ಯ ಆಡುವುದಕ್ಕಿಂತ ಮೊದಲೇ ಗಾಯಗೊಂಡಿದ್ದಾರೆ.
ಕೆಕೆಆರ್ ಪರ ಕಳೆದ ವರ್ಷ 9 ಪಂದ್ಯಗಳನ್ನಾಡಿರುವ ಶಿವಂ ಮಾವಿ ಕೂಡ ಗಾಯಾಳಾಗಿದ್ದು, 6 ತಿಂಗಳ ವಿಶ್ರಾಂತಿ ಅಗತ್ಯವಿರುವುದರಿಂದ ಟೂರ್ನಿಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಕಮಲೇಶ್ ಬದಲು ಸಂದೀಪ್ ವಾರಿಯರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ರಣಜಿ ಟ್ರೋಫಿಯಲ್ಲಿ ಸಂದೀಪ್ ಕೇರಳ ಪರ ಅತೀ ಹೆಚ್ಚು ವಿಕೆಟ್ ಕಿತ್ತ ಬೌಲರ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ