ಐಪಿಎಲ್‌ ಚಮತ್ಕಾರ: ಬಡವರ ಮನೆ ಮಕ್ಕಳೀಗ ಕೋಟಿ ವೀರರು!


Team Udayavani, Feb 22, 2017, 11:57 AM IST

T-Natarajan,-Mohammed-Siraj.jpg

ನವದೆಹಲಿ: ಪ್ರತಿ ವರ್ಷ ಐಪಿಎಲ್‌ ಹರಾಜು ನಡೆದಾಗಲೂ ಒಂದಷ್ಟು ಅಚ್ಚರಿಯ ಘಟನೆಗಳು ಸಂಭವಿಸುತ್ತದೆ. ನಾವು
ಇಂದೆಂದೂ ಕೇಳಿರದ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೋಡಿರದ ಹೊಸ ಕ್ರಿಕೆಟಿಗರು ಬೆಳಕಿಗೆ ಬರುತ್ತಾರೆ. ಈ ಬಾರಿ
ಅದನ್ನೆಲ್ಲ ಮೀರಿದ ವಿದ್ಯಮಾನಗಳು ಐಪಿಎಲ್‌ ಹರಾಜಿನಲ್ಲಿ ನಡೆದಿದೆ. ಹರಾಜು ಆರಂಭಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ
ಬಡವರ ಮನೆ ಮಕ್ಕಳಿಬ್ಬರು ಕೋಟ್ಯಾಧಿಪತಿಗಳಾಗಿದ್ದಾರೆ. ತಾವು ಕನಸಿನಲ್ಲೂ ನಿರೀಕ್ಷಿಸಿರದ ಮೊತ್ತಕ್ಕೆ ಮಾರಾಟಗೊಂಡು ಅಚ್ಚರಿಗೆ ಕಾರಣರಾಗಿದ್ದಾರೆ.

ಬಡತನದಲ್ಲಿ ಅರಳಿದ ಹೋವು ನಟರಾಜನ್‌, ಸಿರಾಜ್‌: 10ನೇ ಆವೃತ್ತಿಯಲ್ಲಿ ತಮಿಳುನಾಡಿನ ಹಮಾಲಿಯ ಮಗ ತಂಗರಸು ನಟರಾಜನ್‌ 3 ಕೋಟಿ ರೂ.ಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪಾಲಾಗಿದ್ದಾರೆ. ಹೈದ್ರಾಬಾದ್‌ನ ಆಟೋ ಚಾಲಕ ಮಗ ಮೊಹಮ್ಮದ್‌ ಸಿರಾಜ್‌ 2.6 ಕೋಟಿ ರೂ.ಗೆ ಸನ್‌ರೈಸರ್ ಹೈದ್ರಾಬಾದ್‌ ತೆಕ್ಕೆಗೆ ಬಿದ್ದಿದ್ದಾರೆ. ಇವರಿಬ್ಬರೂ ಆಗರ್ಭ ಶ್ರೀಮಂತರಲ್ಲ. ಬಡವರ ಮನೆಮಕ್ಕಳು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಯಾರಿವರು ನಟರಾಜನ್‌?
ನಟರಾಜನ್‌ ಸೇಲಂನವರು. ಅವರಿಗೆ 25 ವರ್ಷ ವಯಸ್ಸು. ಇವರ ತಂದೆ ರೈಲ್ವೇ ನಿಲ್ದಾಣದಲ್ಲಿ ಹಮಾಲಿ ಕೆಲಸ ಮಾಡುತ್ತಾರೆ.ತಾಯಿ ರಸ್ತೆ ಬದಿಯಲ್ಲಿ ಗೂಡಂಗಡಿ ಇಟ್ಟುಕೊಂಡಿದ್ದಾರೆ.ಕಡುಬಡತನದ ನಡುವೆ ಬೇಯುತ್ತಿದ್ದ ಕುಟುಂಬ ಇವರದ್ದು. 5 ಜನ ಮಕ್ಕಳಲ್ಲಿ ನಟರಾಜನ್‌ ಕೂಡ ಒಬ್ಬರು. ಎಲ್ಲ ಮಕ್ಕಳಂತೆ ಸೇಲಂ ಬೀದಿಯಲ್ಲಿ ಟೆನಿಸ್‌ ಬಾಲ್‌ನಲ್ಲಿ ನಟರಾಜನ್‌ ಕ್ರಿಕೆಟ್‌ ಆಡಿದರು. ವೇಗದ ಬೌಲರ್‌ ಆಗಿ ಗುರುತಿಸಿಕೊಂಡರು. ನಂತರ ತಮಿಳುನಾಡು ಕ್ಲಬ್‌ ತಂಡ ಜಾಲಿ ರೋವರ್ ಪರ ಆಡಿದರು.

ಬಳಿಕ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ದಿಂಡಿಗಲ್‌ ಡ್ರ್ಯಾಗನ್ಸ್‌ ಪರ ಆಡಿದರು. ಆರ್‌.ಅಶ್ವಿ‌ನ್‌, ಮುರಳಿ ವಿಜಯ್‌ ಒಡನಾಟ ಸಿಕ್ಕಿತು. ಇದೀಗ ಐಪಿಎಲ್‌ನಲ್ಲಿ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. 10 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಅವರು ಹರಾಜು ಮುಗಿಯುವ ಹೊತ್ತಿಗೆ ಕೋಟಿ ವೀರರಾಗಿದ್ದಾರೆ.

ಯಾರಿವರು ಸಿರಾಜ್‌? 
ಸಿರಾಜ್‌ ಹೈದ್ರಾಬಾದ್‌ನವರು. ಅವರಿಗೆ 23 ವರ್ಷವಯಸ್ಸು. ಇವರ ತಂದೆ ಆಟೋ ಚಾಲಕ. ದುಡಿದು ಬರುವ ಹಣದಲ್ಲೇ ಜೀವನ ಬಂಡಿ ಸಾಗಬೇಕು. ಸಿರಾಜ್‌ಗೆ ಓದಿನಲ್ಲಿ ಆಸಕ್ತಿ ಕಡಿಮೆ. ಕ್ರಿಕೆಟರ್‌ ಆಗಬೇಕು ಎನ್ನುವುದಷ್ಟೇ ಕನಸಾಗಿತ್ತು. ಆದರೆ ಪೋಷಕರು ಕ್ರಿಕೆಟ್‌ ಬಿಟ್ಟು ಮೊದಲು ಉದ್ಯೋಗ ಹಿಡಿ ಎಂದು ಕಿವಿಮಾತು ಹೇಳಿದ್ದರು.

ಆದರೆ ಸಿರಾಜ್‌ ಪಾಠ ಕಡಿಮೆ ಮಾಡಿ ಆಟವನ್ನೇ ಜಾಸ್ತಿ ಮಾಡಿದರು. ಕ್ಲಬ್‌, ರಣಜಿ ತಂಡದಲ್ಲಿ ಸ್ಥಾನ ಪಡೆದು ಯಶಸ್ಸಿನ ಮೆಟ್ಟಿಲೇರಿದರು. ಬೌಲರ್‌ ಆಗಿರುವ ಸಿರಾಜ್‌ ಐಪಿಎಲ್‌ನಲ್ಲಿ ಮೂಲಬೆಲೆ 20 ಲಕ್ಷ ರೂ. μಕ್ಸ್‌ ಆಗಿತ್ತು. ಇದೀಗ ಲಕ್ಷ ಮೀರಿ ಕೋಟಿ ವೀರನಾಗಿದ್ದಾರೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.