ವಿದರ್ಭ ವೈಭವಕ್ಕೆ ಮಳೆ ಅಡ್ಡಿ


Team Udayavani, Mar 17, 2018, 6:00 AM IST

16.jpg

ನಾಗ್ಪುರ: ಇರಾನಿ ಕಪ್‌ ಪಂದ್ಯದ 3ನೇ ದಿನದಾಟಕ್ಕೆ ಮಳೆಯಿಂದ ಅಡ್ಡಿಯಾಗಿದ್ದು, ಕೇವಲ 28 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದೆ. ರಣಜಿ ಚಾಂಪಿಯನ್‌ ವಿದರ್ಭ ಬ್ಯಾಟಿಂಗ್‌ ಮುಂದುವರಿಸಿ 5 ವಿಕೆಟಿಗೆ 702 ರನ್‌ ಪೇರಿಸಿದೆ. ಇರಾನಿ ಇತಿಹಾಸದಲ್ಲಿ ತಂಡವೊಂದು 700 ರನ್‌ ಬಾರಿಸಿದ ಕೇವಲ 2ನೇ ದೃಷ್ಟಾಂತ ಇದಾಗಿದೆ.

ಶೇಷ ಭಾರತ ಈವರೆಗೆ 208 ಓವರ್‌ಗಳನ್ನು ಎಸೆದಿದ್ದು, ವಿಕೆಟ್‌ ಉರುಳಿಸಲು ಪರದಾಡುತ್ತಿದೆ. ಒಟ್ಟು 4 ಮಂದಿ ಬೌಲರ್‌ಗಳು ನೂರಕ್ಕೂ ಹೆಚ್ಚಿನ ರನ್‌ ಬಿಟ್ಟುಕೊಟ್ಟಿದ್ದಾರೆ. ಸ್ಪಿನ್ನರ್‌ ಜಯಂತ್‌ ಯಾದವ್‌ ಎಲ್ಲರಿಗಿಂತ ಮುಂದಿದ್ದು, 202 ರನ್‌ ನೀಡಿದ್ದಾರೆ. ಶಾಬಾಜ್‌ ನದೀಂ 159 ರನ್‌, ಆರ್‌. ಅಶ್ವಿ‌ನ್‌ 123 ರನ್‌ ಹಾಗೂ ನವದೀಪ್‌ ಸೈನಿ 106 ರನ್‌ ನೀಡಿ ದುಬಾರಿಯಾಗಿದ್ದಾರೆ. 

ವಾಸಿಮ್‌ ಜಾಫ‌ರ್‌ ಅವರಿಗೆ ತ್ರಿಶತಕವನ್ನು ತಪ್ಪಿಸಿದ್ದಷ್ಟೇ ಶೇಷ ಭಾರತದ 3ನೇ ದಿನದಾಟದ ಸಾಧನೆ ಎನಿಸಿಕೊಂಡಿತು. 285 ರನ್‌ ಮಾಡಿ ಆಡುತ್ತಿದ್ದ ಜಾಫ‌ರ್‌, ಈ ಮೊತ್ತಕ್ಕೆ ಕೇವಲ ಒಂದು ರನ್‌ ಸೇರಿಸಿ ಸಿದ್ಧಾರ್ಥ್ ಕೌಲ್‌ ಎಸೆತಕ್ಕೆ ಬೌಲ್ಡ್‌ ಆದರು. ಒಟ್ಟು 431 ಎಸೆತ ನಿಭಾಯಿಸಿದ ಜಾಫ‌ರ್‌ 34 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿ ಮೆರೆದರು. ಜಾಫ‌ರ್‌ ಅವರ 286 ರನ್‌ ಇರಾನಿ ಕಪ್‌ ಇತಿಹಾಸದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 266 ರನ್‌ ಬಾರಿಸಿದ್ದ ಮುರಳಿ ವಿಜಯ್‌ ದಾಖಲಾಯನ್ನು ಜಾಫ‌ರ್‌ ಮುರಿದರು.

ಶೇಷ ಭಾರತಕ್ಕೆ ಇನ್ನೊಂದು ಯಶಸ್ಸು ಅಕ್ಷಯ್‌ ವಾಡ್ಕರ್‌ (37) ರೂಪದಲ್ಲಿ ಲಭಿಸಿತು. ಅಪೂರ್ವ್‌ ವಾಂಖೇಡೆ 99 ರನ್‌ ಮಾಡಿ ಆಡುತ್ತಿದ್ದು, ಇವರ ಶತಕ ಪೂರ್ತಿ ಆದೊಡನೆ ವಿದರ್ಭ ನಾಯಕ ಫ‌ಯಾಜ್‌ ಫ‌ಜಲ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಬಹುದು. ಅಥವಾ ಇರಾನಿ ಟ್ರೋಫಿಯಲ್ಲಿ ಸರ್ವಾಧಿಕ ಮೊತ್ತದ ನೂತನ ದಾಖಲೆಯನ್ನೂ ನಿರ್ಮಿಸಬಹುದು. 1990ರ ಬೆಂಗಳೂರು ಪಂದ್ಯದಲ್ಲಿ ಬಂಗಾಲ ವಿರುದ್ಧ ಶೇಷ ಭಾರತ 7ಕ್ಕೆ 737 ರನ್‌ ಪೇರಿಸಿದ್ದು ದಾಖಲೆಯಾಗಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.