ಇರಾನಿ ಕಪ್‌: ವಿದರ್ಭ ಚಾಂಪಿಯನ್‌


Team Udayavani, Feb 17, 2019, 12:30 AM IST

v-23.jpg

ನಾಗ್ಪುರ: ರಣಜಿ ಟ್ರೋಫಿಯನ್ನು ತನ್ನಲ್ಲಿ ಉಳಿಸಿಕೊಂಡಿರುವ ವಿದರ್ಭ ತಂಡ “ಇರಾನಿ ಕಪ್‌’ ಕೂಡ ಜಯಿಸಿ ಸಂಭ್ರಮಿಸಿದೆ. 
ಶೇಷ ಭಾರತ ಜಯದ ಕನಸನ್ನು ನುಚ್ಚು ನೂರು ಮಾಡಿದ ವಿದರ್ಭ ಪಂದ್ಯ ಡ್ರಾ ಆದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ವಿದರ್ಭ ತಂಡ ಎರಡು ಬಾರಿ ಇರಾನಿ ಕಪ್‌ ಗೆದ್ದ ಮೂರನೇ ತಂಡವಾಗಿದೆ. ಈ ಮೊದಲು ಮುಂಬಯಿ ಮತ್ತು ಕರ್ನಾಟಕ ಎರಡು ಬಾರಿ ಪ್ರಶಸ್ತಿ ಜಯಿಸಿತ್ತು. ಶೇಷ ಭಾರತ ಸತತ ಎರಡನೇ ಸಲ ಟ್ರೋಫಿ ಕಳೆದುಕೊಂಡು ನಿರಾಸೆ ಅನುಭವಿಸಿತು. ಗೆಲ್ಲಲು 280 ರನ್‌ ಗುರಿ ಹೊಂದಿದ್ದ ವಿದರ್ಭ ಕೊನೆಯ ದಿನ 5 ವಿಕೆಟಿಗೆ 269 ರನ್‌ ಮಾಡಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 

ವಿದರ್ಭ ಸಂಘಟಿತ ಬ್ಯಾಟಿಂಗ್‌
4ನೇ ದಿನದ ಅಂತ್ಯಕ್ಕೆ ವಿದರ್ಭ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟಿಗೆ 37 ರನ್‌ ಗಳಿಸಿತ್ತು. ಅಂತಿಮ ದಿನವಾದ ಶನಿವಾರ ಬ್ಯಾಟಿಂಗ್‌ ಮುಂದುವರಿಸಿದ ರಘುನಾಥ್‌ ಸಂಜಯ್‌ ಹಾಗೂ ಅಥರ್ವ ಟೈಡೆ ತಂಡವನ್ನು ಆಧರಿಸಿದರು. ಇವರಿಬ್ಬರು ಸೇರಿಕೊಂಡು 2ನೇ ವಿಕೆಟಿಗೆ 116 ರನ್‌ ಜತೆಯಾಟ ನಿರ್ವಹಿಸಿದರು. 131 ಎಸೆತ ಎದುರಿಸಿದ ರಘುನಾಥ್‌ ಸಂಜಯ್‌ 42 ರನ್‌ ಬಾರಿಸಿದರು. ಇದರಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿತ್ತು. ಅಥರ್ವ ಟೈಡೆ 185 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ನಿಂದ 72 ದಾಖಲಿಸಿದರು. ಇವರಿಬ್ಬರು ಶೇಷ ಭಾರತ ಬೌಲರ್‌ಗಳನ್ನು ಅಳೆದು ತೂಗಿ ಚೆಂಡಾಡಿದರು. ಹೀಗಾಗಿ ವಿದರ್ಭ ಚೇತರಿಸಿಕೊಳ್ಳುತ್ತ ಸಾಗಿತು. ತಂಡದ ಮೊತ್ತ 116 ರನ್‌ ಆಗಿದ್ದಾಗ  ಅರ್ಧಶತಕದ ಹೊಸ್ತಿಲಲ್ಲಿದ್ದ ರಘುನಾಥ್‌ ಸಂಜಯ್‌ ಔಟಾದರು. 146 ರನ್‌ ಗಳಿಸಿದ್ದಾಗ ಅಥರ್ವ ಟೈಡೆ ಕೂಡ ಪೆವಿಲಿಯನ್‌ ಸೇರಿಕೊಂಡರು. ಈ ಎರಡೂ ವಿಕೆಟ್‌ ಅನ್ನು ರಾಹುಲ್‌ ಚಹರ್‌ ಉರುಳಿಸಿದರು.

ಎರಡು ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಶೇಷ ಭಾರತದ ಗೆಲುವಿನ ಕನಸು ಚಿಗುರೊಡೆಯಿತು. 3ನೇ ವಿಕೆಟಿಗೆ ಬಂದ ಕನ್ನಡಿಗ ಗಣೇಶ್‌ ಸತೀಶ್‌ (87 ರನ್‌) ಹಾಗೂ ಮೋಹಿತ್‌ ಕಾಳೆ (37 ರನ್‌) ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಬ್ಯಾಟಿಂಗ್‌ ಆಸರೆಯಾದರು. ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ 87 ರನ್‌ ಕಲೆ ಹಾಕಿದರು. ಮೋಹಿತ್‌ ಕಾಳೆ ಧರ್ಮೇಂದ್ರ ಸಿನ್ಹ ಜಡೇಜ ಎಸೆತದಲ್ಲಿ ಔಟಾದರು. ಅರ್ಧಶತಕ ಗಳಿಸಿದ್ದ ಗಣೇಶ್‌ ಸತೀಶ್‌ ಕೂಡ ಔಟಾದರು. ಈ ಹಂತದಲ್ಲಿ ವಿದರ್ಭ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಆದರೆ ಕೊನೆ ನಿಮಿಷಗಳಲ್ಲಿ ಗೆಲುವಿಗಾಗಿ ಪ್ರಯತ್ನ ಪಡುವ ಎಲ್ಲ ಅವಕಾಶಗಳಿದ್ದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದುಕೊಂಡಿದ್ದರಿಂದ ವಿದರ್ಭ ಟ್ರೋಫಿ ಉಳಿಸಿಕೊಳ್ಳುವುದಕ್ಕಾಗಿ ಡ್ರಾ ಮಾಡಿಕೊಳ್ಳುವ ನಿರ್ಧಾರ ಮಾಡಿತು. ಕೇವಲ 11 ರನ್‌ ಅಂತರದಿಂದ ವಿದರ್ಭ ಗೆಲುವನ್ನು ಕಳೆದುಕೊಂಡಿತು. ಅಕ್ಷಯ್‌ ವಡ್ಕರ್‌ 10 ರನ್‌ ಗಳಿಸಿ ಅಜೇಯರಾಗಿ ಉಳಿದರು. ಶೇಷ ಭಾರತ ಪರ ರಾಹುಲ್‌ ಚಹರ್‌ (116ಕ್ಕೆ2) ವಿಕೆಟ್‌ ಕಬಳಿಸಿ ಶ್ರೇಷ್ಠ ಬೌಲರ್‌ ಎನಿಸಿಕೊಂಡರು. 

ಹುತಾತ್ಮರ ಕುಟುಂಬಕ್ಕೆ  ಪ್ರಶಸ್ತಿ ಹಣ ನೀಡಿದ ವಿದರ್ಭ
ನಾಗ್ಪುರ: ಇರಾನಿ ಕಪ್‌ ಪ್ರಶಸ್ತಿ ಸಮಾರಂಭದಲ್ಲಿ 2ನೇ ಬಾರಿಗೆ ಪ್ರಶಸ್ತಿ ಜಯಿಸಿದ ರಣಜಿ ಚಾಂಪಿಯನ್‌ ವಿದರ್ಭ ತಂಡ ಪ್ರಶಸ್ತಿಯ ಒಟ್ಟು ಮೊತ್ತವನ್ನು ಮೃತ ಯೋಧ ಕುಟುಂಬಕ್ಕೆ ನೀಡುವುದಾಗಿ ಹೇಳಿ ದೇಶಪ್ರೇಮ ಮೆರೆದಿದೆ. ವಿದರ್ಭಕ್ಕೆ ಒಟ್ಟು 10 ಲಕ್ಷ ರೂ. ಪ್ರಶಸ್ತಿ ಮೊತ್ತ ದೊರೆಯಲಿದೆ. ಅವಂತಿಪೋರಾದಲ್ಲಿ ಉಗ್ರರ ಕೃತ್ಯಕ್ಕೆ 42 ಸಿಆರ್‌ಸಿಎಫ್ ಯೋಧರು ಬಲಿಯಾಗಿದ್ದು, ಇಡಿ ದೇಶವೇ ಮೌನಕ್ಕೆ ಶರಣಾಗಿದೆ. ಫೆ. 15ರ ದಿನದಾಟದ ವೇಳೆ ಕೈಗೆ ಕಪ್ಪು ಪಟ್ಟಿ ಕಟ್ಟಿ ಆಡಿದ ವಿದರ್ಭ, ಶೇಷ ಭಾರತ ತಂಡಗಳೂ ಮೃತ ಯೋಧರಿಗೆ ಸಂತಾಪ ಸೂಚಿಸಿದ್ದವು. “ಪ್ರಶಸ್ತಿ ಮೊತ್ತವನ್ನು ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ದೇಣಿಗೆ ನೀಡುವುದಾಗಿ ತೀರ್ಮಾನಿಸಿದ್ದೇವೆ. ತಮ್ಮ ಕಡೆಯಿಂದ ಒಂದು ಚಿಕ್ಕ ಸಹಾಯ’ ಎಂದು ವಿದರ್ಭ ತಂಡದ ನಾಯಕ ಫೈಜ್‌ ಫ‌ಜಲ್‌ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್‌- ಶೇಷ ಭಾರತ 330 ಮತ್ತು 3 ವಿಕೆಟಿಗೆ 374 ಡಿಕ್ಲೇರ್‌ (ಹನುಮ ವಿಹಾರಿ ಔಟಾಗದೆ 180, ಶ್ರೇಯಸ್‌ ಅಯ್ಯರ್‌ ಔಟಾಗದೆ 61, ಸರ್ವಟೆ 141ಕ್ಕೆ 2), ವಿದರ್ಭ- 425 ಮತ್ತು 5 ವಿಕೆಟಿಗೆ 269 (ಗಣೇಶ್‌ ಸತೀಶ್‌ 87, ಅಥರ್ವ ಟೈಡೆ 72, ಸಂಜಯ್‌ ರಘುನಾಥ್‌ 42, ರಾಹುಲ್‌ ಚಹರ್‌ 116ಕ್ಕೆ 2).  
ಪಂದ್ಯ ಶ್ರೇಷ್ಠ: ಅಕ್ಷಯ್‌ ಕರ್ಣೇವಾರ್‌

ಟಾಪ್ ನ್ಯೂಸ್

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.