ಟಿ20 ವಿಶ್ವಕಪ್ ನಲ್ಲಿ ಅಚ್ಚರಿಯ ಫಲಿತಾಂಶ: ಐರ್ಲೆಂಡ್ ಸೂಪರ್ 12ಗೆ, ವೆಸ್ಟ್ ಇಂಡೀಸ್ ಮನೆಗೆ
Team Udayavani, Oct 21, 2022, 1:11 PM IST
ಹೋಬಾರ್ಟ್: ಐಸಿಸಿ ಟಿ20 ವಿಶ್ವಕಪ್ ನ ಮೊದಲ ಸುತ್ತಿನಲ್ಲಿ ಇಂದು ನಡೆದ ಡು ಆರ್ ಡೈ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಮುಗ್ಗರಿಸಿದೆ. ಹೋಬಾರ್ಟ್ ನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ಐರ್ಲೆಂಡ್ ಸೂಪರ್ 12 ಹಂತಕ್ಕೆ ಪ್ರವೇಶಿಸಿದರೆ, ವೆಸ್ಟ್ ಇಂಡೀಸ್ ಕೂಟದಿಂದಲೇ ಹೊರಬಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ರನ್ ಗಳಿಸಲು ಪರದಾಡಿತು. ವಿಂಡೀಸ್ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 146 ರನ್ ಮಾಡಿದರೆ, ಐರ್ಲೆಂಡ್ ತಂಡವು 17.3 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಜಯ ಸಾಧಿಸಿತು.
ವಿಂಡೀಸ್ ಪರ ಬ್ರಾಂಡನ್ ಕಿಂಗ್ ಅಜೇಯ ಆಟವಾಡಿದರು. 48 ಎಸೆತ ಎದುರಿಸಿದ ಕಿಂಗ್ 62 ರನ್ ಗಳಿಸಿದರೆ, ಜಾನ್ಸನ್ ಚಾರ್ಲ್ಸ್ 24 ರನ್, ಒಡೆನ್ ಸ್ಮಿತ್ ಅಜೇಯ 19 ರನ್ ಮಾಡಿದರು. ಐರ್ಲೆಂಡ್ ಪರ ಡೆಲಾನಿ ಮೂರು ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ:ಮಂಡ್ಯದ ಬೆಣ್ಣೆ ಇಡ್ಲಿ ಖ್ಯಾತಿಯ ಇಡ್ಲಿ ಶಿವಪ್ಪ ಅಪಘಾತದಲ್ಲಿ ನಿಧನ
ಗುರಿ ಬೆನ್ನತ್ತಿದ ಐರ್ಲೆಂಡ್ ಗೆ ಅನುಭವಿ ಪೌಲ್ ಸ್ಟರ್ಲಿಂಗ್ ಮತ್ತು ನಾಯಕ ಆಂಡ್ರ್ಯೂ ಬಾಲ್ಬಿರ್ನಿ ಉತ್ತಮ ಆರಂಭ ಒದಗಿಸಿದರು. ಆಂಡ್ರ್ಯೂ ಬಾಲ್ಬಿರ್ನಿ 37 ರನ್ ಗಳಿಸಿದರೆ, ಪೌಲ್ ಸ್ಟರ್ಲಿಂಗ್ ಅಜೇಯ 66 ರನ್ ಮಾಡಿದರು. ಎರಡನೇ ವಿಕೆಟ್ ಗೆ ಬಂದ ಟಕ್ಕರ್ ಅಜೇಯ 45 ರನ್ ಗಳಿಸಿದರು. ಇನ್ನೂ 15 ಎಸೆತ ಇರುವಾಗಲೇ ಸುಲಭದಲ್ಲಿ ಐರ್ಲೆಂಡ್ ಜಯ ಸಾಧಿಸಿತು.
ಕಳೆದ ಐದು ಟಿ20 ವಿಶ್ವಕಪ್ ಗಳಲ್ಲಿ ಮೊದಲ ಸುತ್ತನ್ನು ದಾಟಲು ವಿಫಲವಾದ ಐರ್ಲೆಂಡ್ ಈ ಬಾರಿ ಸೂಪರ್ 12 ಗೆ ಪ್ರವೇಶಿಸಿದೆ. ಮಾತ್ರವಲ್ಲದೆ ಎರಡು ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ನ್ನು ಸ್ಪರ್ಧೆಯಿಂದ ಹೊರಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?