ಭಾರತ ಕ್ರಿಕೆಟ್ ಉನ್ನತಿಗೆ ಗಂಗೂಲಿ,ಧೋನಿ,ಕೊಹ್ಲಿ ಕಾರಣ!
Team Udayavani, Feb 22, 2018, 6:05 AM IST
ಬರೋಡ: ಭಾರತ ಕ್ರಿಕೆಟ್ನ ಖ್ಯಾತ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಇರ್ಫಾನ್ ಪಠಾಣ್ ಭಾರತೀಯ ಕ್ರಿಕೆಟ್ನ ಈ ಉನ್ನತಿಗೆ ಕಾರಣರಾರೆಂದು ಟ್ವೀಟರ್ನಲ್ಲಿ ಪ್ರಶ್ನಿಸಿದ್ದಕ್ಕೆ ಅಭಿಮಾನಿಗಳಿಂದ ವಿಶೇಷ ಉತ್ತರ ಸಿಕ್ಕಿದೆ.
ಬಹುತೇಕ ಅಭಿಮಾನಿಗಳು ಮಾಜಿ ನಾಯಕರಾದ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಈಗ ವಿರಾಟ್ ಕೊಹ್ಲಿ ಎಂದು ಉತ್ತರ ನೀಡಿದ್ದಾರೆ. ಇನ್ನೊಬ್ಬ ಅಭಿಮಾನಿ ಇನ್ನೂ ವಿಶೇಷ ಉತ್ತರ ನೀಡಿ ಈ ಮೂವರು ನಾಯಕರ ಅವಧಿಯಲ್ಲಿ ಕೋಚ್ ಆಗಿದ್ದ ಜಾನ್ ರೈಟ್, ಗ್ಯಾರಿ ಕರ್ಸ್ಟನ್, ಅನಿಲ್ ಕುಂಬ್ಳೆ ಹೆಸರು ಪ್ರಸ್ತಾಪಿಸಿದ್ದಾರೆ. ಭಾರತೀಯ ಕ್ರಿಕೆಟ್ ಮಟ್ಟಿಗೆ ಇವರ ಕೊಡುಗೆ ಪರಿಗಣಿಸಿದರೆ ಇದು ಅತ್ಯುತ್ತಮ ಉತ್ತರ ಆಗಬಲ್ಲದು.