ಸರಿಯಾಗಿ ವಿದಾಯ ಸಿಗದ ಆಟಗಾರರ ತಂಡ ರಚಿಸಿದ ಪಠಾಣ್: ವಿದಾಯ ಪಂದ್ಯ ನಡೆಸಲು ಕೋರಿಕೆ
Team Udayavani, Aug 23, 2020, 9:19 AM IST
ಮುಂಬೈ: ಟೀಂ ಇಂಡಿಯಾ ಪರ ಆಡಿ ಸರಿಯಾದ ವಿದಾಯ ಪಂದ್ಯ ಸಿಗದೆ ನಿವೃತ್ತಿಯಾದ ಆಟಗಾರರಿಗೆ ಒಂದು ವಿದಾಯ ಪಂದ್ಯ ನಡೆಸಬೇಕು ಎಂದು ಇರ್ಫಾನ್ ಪಠಾಣ್ ಆಗ್ರಹಿಸಿದ್ದಾರೆ. ಇದರ ಕುರಿತು ಬಿಸಿಸಿಗೆ ಪಠಾಣ್ ಹೊಸ ಉಪಾಯವೊಂದನ್ನೂ ನೀಡಿದ್ದಾರೆ.
ಸರಿಯಾಗಿ ವಿದಾಯ ಸಿಗದೆ, ಅಥವಾ ವಿದಾಯ ಪಂದ್ಯ ಸಿಗದೆ ನಿವೃತ್ತಿಯಾಗಿರುವ ಆಟಗಾರರ ತಂಡವೊಂದನ್ನು ಇರ್ಫಾನ್ ಪಠಾಣ್ ಪಟ್ಟಿ ಮಾಡಿದ್ದಾರೆ. ಇತ್ತೀಚೆಗೆ ನಿವೃತ್ತಿಯಾದ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾರನ್ನು ಸೇರಿಸಿ ಹನ್ನೊಂದು ಜನರ ತಂಡವೊಂದನ್ನು ಪಠಾಣ್ ಪಟ್ಟಿ ಮಾಡಿದ್ದಾರೆ. ಈ ತಂಡ ಮತ್ತು ಸದ್ಯದ ವಿರಾಟ್ ನೇತೃತ್ವದ ರಾಷ್ಟ್ರೀಯ ತಂಡದ ನಡುವೆ ಸ್ನೇಹ ಪಂದ್ಯ ನಡೆಸಬೇಕು ಎಂದು ಪಠಾಣ್ ಕೋರಿದ್ದಾರೆ.
ಇದನ್ನೂ ಓದಿ: ಜ್ಯಾಕ್ ಕ್ರಾವ್ಲಿ ದ್ವಿಶತಕ, ಬಟ್ಲರ್ ಶತಕದ ಮೆರೆದಾಟ: ಪಾಕಿಸ್ಥಾನ ಪರದಾಟ
ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತರ ಅವರಿಗೆ ವಿದಾಯ ಪಂದ್ಯವೊಂದನ್ನು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು. ಈ ನಡುವೆ ಬಿಸಿಸಿಐ ಗೆ ಇರ್ಫಾನ್ ಪಠಾಣ್ ಉತ್ತಮ ಉಪಾಯವೊಂದನ್ನು ನೀಡಿದ್ದಾರೆ.
ಇದನ್ನೂ ಓದಿ: ಲಿಫ್ಟ್ ನೀಡುವುದಾಗಿ ಹೇಳಿ 50 ವರ್ಷದ ಮಹಿಳೆಯ ಗ್ಯಾಂಗ್ ರೇಪ್: ವಿಡಿಯೋ ವೈರಲ್, ಆರು ಜನರ ಬಂಧನ
ನಿವೃತ್ತರ ತಂಡ:
ಗೌತಮ್ ಗಂಭೀರ್, ವೀರೇಂದ್ರ ಸೆಹವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಎಂ.ಎಸ್.ಧೋನಿ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಗ್ಯಾನ್ ಓಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ