ಇಶಾಂತ್ಗೆ ಗಾಯ ಹಿನ್ನೆಲೆ, ರಾಹುಲ್ ದ್ರಾವಿಡ್ ರ ಎನ್ ಸಿಎಗೆ ಎಚ್ಚರಿಗೆ ಗಂಟೆ
Team Udayavani, Mar 2, 2020, 11:22 AM IST
ಕ್ರೈಸ್ಟ್ಚರ್ಚ್: ಎನ್ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಕಾರ್ಯವೈಖರಿ ಬಗ್ಗೆ ಮತ್ತೂಮ್ಮೆ ಅಪಸ್ವರ ಎದ್ದಿದೆ. ಈ ಹಿಂದೆ ಎನ್ ಸಿಎ ಗುಣಮಟ್ಟದ ಬಗ್ಗೆ ಸ್ವತಃ ಭಾರತ ಕ್ರಿಕೆಟಿಗರೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅದಕ್ಕೆ ಪುಷ್ಠಿ ನೀಡುವಂತಹ ಮತ್ತೂಂದು ಪ್ರಕರಣ ನಡೆದಿದೆ.
ರಣಜಿ ಪಂದ್ಯದ ವೇಳೆ ಗಾಯಗೊಂಡಿದ್ದ ವೇಗದ ಬೌಲರ್ ಇಶಾಂತ್ ಶರ್ಮ ಬೆಂಗಳೂರಿನಲ್ಲಿರುವ ಎನ್ ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ)ನಲ್ಲಿ ಫಿಟ್ನೆಸ್ ಸಾಬೀತುಪಡಿಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಇದೀಗ ಮೊದಲ ಟೆಸ್ಟ್ ವೇಳೆ ಮತ್ತೆ ಗಾಯಗೊಂಡು ಹೊರ ನಡೆದಿದ್ದಾರೆ.
ಫಿಟ್ ಆಗಿದ್ದ ಕ್ರಿಕೆಟಿಗ ಮೊದಲ ಪಂದ್ಯದಲ್ಲೇ ಫಿಟ್ನೆಸ್ ಕಳೆದುಕೊಂಡಿದ್ದು ಹೇಗೆ?, ಹಾಗಾದರೆ ಆತಫಿಟ್ನೆಸ್ ಪರೀಕ್ಷೆ ಪಾಸಾಗಿದ್ದು ಹೇಗೆ? ಎನ್ನುವಂತಹ ಅನುಮಾನಗಳು ಎದ್ದಿವೆ. ಒಟ್ಟಾರೆ ಎನ್ಸಿಎ ಕಾರ್ಯ ವೈಖರಿ ಬಗ್ಗೆಯೇ
ಅನುಮಾನ ಹುಟ್ಟುವಂತೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಬಿಸಿಸಿಐ ಅಧಿಕಾರಿಗಳು “ಎನ್ ಸಿಎ ಗಾಯಾಳು ಕ್ರಿಕೆಟಿಗರಿಗೆ ತರಬೇತಿ ನೀಡಿ ಅವರು ಫಿಟ್ ಆಗಿದ್ದಾರೆ ಎಂದು ಸರ್ಟಿಫಿಕೇಟ್ ನೀಡುವುದು ಯಾವ ಆಧಾರದಲ್ಲಿ? ಇದನ್ನು ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ವಿವರಿಸಬೇಕಿದೆ.
ಮುಂದೆ ಇಂತಹ ಲೋಪದೋಷಗಳು ನಡೆಯದಂತೆ, ಎನ್ಸಿಎ ಗುಣಮಟ್ಟ ಕಾಯ್ದುಕೊಳ್ಳುವ ಹೊಣೆಯನ್ನು ದ್ರಾವಿಡ್ ಹೊರಬೇಕಿದೆ’ ಎಂದುತಿಳಿಸಿದ್ದಾರೆ. ಸದ್ಯ ಗಾಯಗೊಂಡಿರುವ ಇಶಾಂತ್ ಮತ್ತೆ ಎನ್ಸಿಎಗೆ ಬಂದು ಶಿಬಿರದಲ್ಲಿ ಪಾಲ್ಗೊಳ್ಳಬೇಕಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ