ಟೆಸ್ಟ್ನಿಂದ ಹೊರಬಿದ್ದಿದ್ದರಿಂದ ಬೇಸರವಾಗಿದ್ದು ನಿಜ: ಧವನ್
Team Udayavani, Nov 29, 2018, 6:00 AM IST
ಸಿಡ್ನಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್, ಸದ್ಯ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಹಿಂದಿನ ಟೆಸ್ಟ್ ಪಂದ್ಯಗಳಲ್ಲಿ ಅವರ ಕಳಪೆ ಫಾರ್ಮ್ ಪರಿಗಣಿಸಿ, ಬಿಸಿಸಿಐ ಆಯ್ಕೆ ಸಮಿತಿ ಈ ನಿರ್ಧಾರ ಮಾಡಿದೆ. ಈ ಬಗ್ಗೆ ಮೊದಲ ಬಾರಿಗೆ ಧವನ್ ಪ್ರತಿಕ್ರಿಯೆ ನೀಡಿದ್ದಾರೆ.
ಟೆಸ್ಟ್ ತಂಡದಿಂದ ಕೈಬಿಟ್ಟಿದ್ದು ನೋಡಿ ಆರಂಭದಲ್ಲಿ ಸ್ವಲ್ಪ ಬೇಸರವಾಗಿತ್ತು. ಆದರೆ ಪ್ರಸ್ತುತ ಆ ನೋವಿನಿಂದ ಹೊರಬಂದಿದ್ದೇನೆ. ನಾನೀಗ ಧನಾತ್ಮಕವಾಗಿ ಯೋಚಿಸುತ್ತಿದ್ದೇನೆ, ನನ್ನ ಮನಸ್ಸು ಆನಂದದಲ್ಲಿದೆ, ಈ ಬಾರಿ ಭಾರತಕ್ಕೆ ಆಸ್ಟ್ರೇಲಿಯ ವಿರುದ್ಧ ಗೆಲ್ಲುವ ಎಲ್ಲ ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ಧವನ್ ಪ್ರಸ್ತುತ ಟಿ20, ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಲಯದಲ್ಲಿದ್ದಾರೆ.