ವಿಕೆಟ್ ಕಿತ್ತ ಸಂಭ್ರಮದಲ್ಲಿ ‘ಪುಷ್ಪ’ ಶೈಲಿ ಅನುಕರಿಸಿದ ರವೀಂದ್ರ ಜಡೇಜಾ
Team Udayavani, Feb 25, 2022, 2:29 PM IST
ಲಕ್ನೋ: ಗುರುವಾರ ಲಕ್ನೋದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಇತ್ತೀಚಿನ ಹಿಟ್ ಚಲನಚಿತ್ರ ‘ಪುಷ್ಪ’ ದ ನಟ ಅಲ್ಲು ಅರ್ಜುನ್ ಅವರ ಜನಪ್ರಿಯ ನೃತ್ಯವನ್ನು ಅನುಕರಿಸಿದರು.
ಗಾಯದ ಕಾರಣದಿಂದ ಕಳೆದೆ ಸರಣಿಯಿಂದ ಹೊರಗುಳಿದಿದ್ದ ಜಡೇಜಾ ಲಂಕಾ ವಿರುದ್ಧ ಮತ್ತೆ ಕಣಕ್ಕಿಳಿದಿದ್ದರು. ಲಂಕಾ ಇನ್ನಿಂಗ್ಸ್ನ 10 ನೇ ಓವರ್ನಲ್ಲಿ ಶ್ರೀಲಂಕಾ ಬ್ಯಾಟರ್ ದಿನೇಶ್ ಚಾಂಡಿಮಾಲ್ ಅವರನ್ನು ಔಟ್ ಮಾಡಿದ ವೇಳೆ ಪುಷ್ಪ ಚಿತ್ರದ ಶೈಲಿಯನ್ನು ಅನುಕರಿಸಿ ವಿಕೆಟ್ ಸಂಭ್ರಮವನ್ನು ಆಚರಿಸಿದರು. ಜಡೇಜಾ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಲ್ಲದೆ ಆ ಸಮಯದಲ್ಲಿ ಕಾಮೆಂಟರಿ ಬಾಕ್ಸ್ನಲ್ಲಿದ್ದ ಭಾರತದ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಅವರನ್ನು “ರವೀಂದ್ರ ಪುಷ್ಪ” ಎಂದು ಬಣ್ಣಿಸಿದರು.
ಇದನ್ನೂ ಓದಿ:‘ಓಲ್ಡ್ ಮಾಂಕ್’ ಕಿಕ್ ಸ್ಟಾರ್ಟ್!
ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 62 ಅಂತರದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಇಶಾನ್ ಕಿಶನ್, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದರೆ, ಲಂಕಾ ತಂಡ ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು.
View this post on Instagram