ನಾಗ್ಪುರ ಟೆಸ್ಟ್ ಗೆದ್ದ ಕೂಡಲೇ ಜಡೇಜಾಗೆ ಶಾಕ್: ಪಂದ್ಯ ಶುಲ್ಕದ 25% ದಂಡ
Team Udayavani, Feb 11, 2023, 3:33 PM IST
ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡವು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಹಲವು ಸಮಯದ ವಿಶ್ರಾಂತಿಯ ಬಳಿಕ ಕಮ್ ಬ್ಯಾಕ್ ಮಾಡಿದ ರವೀಂದ್ರ ಜಡೇಜಾ ಆಲ್ ರೌಂಡ್ ಪ್ರದರ್ಶನದ ಮೂಲಕ ಮನಗೆದ್ದರು. ಒಟ್ಟು ಏಳು ವಿಕೆಟ್ ಮತ್ತು ಅರ್ಧ ಶತಕ ಸಿಡಿಸಿದ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಆಸೀಸ್ ನ ಮೊದಲ ಇನ್ನಿಂಗ್ಸ್ ವೇಳೆ ರವೀಂದ್ರ ಜಡೇಜಾ ಅವರು ಕೈಗೆ ಕ್ರೀಮ್ ಹಚ್ಚಿದ್ದರು. ಇದರ ಬಗ್ಗೆ ರೆಫ್ರಿ ಸ್ಪಷ್ಟನೆ ಕೂಡಾ ಕೇಳಿದ್ದರು. ಆದರೆ ಇದೀಗ ಅಂಪೈರ್ ಗಳಿಗೆ ತಿಳಿಸದೆ ಬೆರಳಿಗೆ ಮುಲಾಮು ಹಚ್ಚಿದ್ದಕ್ಕಾಗಿ ರವೀಂದ್ರ ಜಡೇಜಾ ಅವರಿಗೆ ಪಂದ್ಯ ಶುಲ್ಕದ 25% ದಂಡ ಮತ್ತು ಒಂದು ಡಿ ಮೆರಿಟ್ ಪಾಯಿಂಟ್ ನೀಡಲಾಗಿದೆ.
ಇದನ್ನೂ ಓದಿ:ವಿಡಿಯೋ: ಕಬಡ್ಡಿ ಮ್ಯಾಚ್ ಆಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ 20 ವರ್ಷದ ಯುವಕ
“ಫಿಂಗರ್ ಸ್ಪಿನ್ನರ್ ತನ್ನ ಬೌಲಿಂಗ್ ಕೈಯ ತೋರು ಬೆರಳಿನ ಊತಕ್ಕೆ ಕ್ರೀಮ್ ಅನ್ನು ಅನ್ವಯಿಸುತ್ತಿದ್ದಾನೆ ಎಂದು ಭಾರತ ತಂಡದ ಆಡಳಿತವು ವಿವರಿಸಿದೆ. ಆದರೆ ಇದನ್ನು ಆನ್-ಫೀಲ್ಡ್ ಅಂಪೈರ್ ಗಳ ಅನುಮತಿಯನ್ನು ಕೇಳದೆ ಮಾಡಲಾಗಿದೆ” ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಜಡೇಜಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ ಹೊರಿಸಬಹುದಾದ ಯಾವುದೇ ಉದ್ದೇಶಕ್ಕಾಗಿ ಕ್ರೀಮ್ ಅನ್ನು ಅನ್ವಯಿಸಲಾಗಿಲ್ಲ ಎಂದು ಮ್ಯಾಚ್ ರೆಫರಿಗೆ ಮನವರಿಕೆಯಾಗಿದೆ ಎಂದು ಐಸಿಸಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?