ಅನುದಾನ ನೀಡಿದ ಸಚಿನ್ಗೆ ಮುಫ್ತಿ ಧನ್ಯವಾದ
Team Udayavani, Mar 31, 2018, 6:00 AM IST
ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲು ಸಹಾಯವಾಗುವಂತೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅಡಿ 40 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ ಸಚಿನ್ ತೆಂಡುಲ್ಕರ್ ಅವರಿಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಶುಕ್ರವಾರ ಧನ್ಯವಾದ ಹೇಳಿದ್ದಾರೆ.
“ಕಾಶ್ಮೀರದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಎಂಪಿಎಲ್ಡಿ ಅನುದಾನವನ್ನು ಬಳಸಿದ ಸಚಿನ್ ಅವರಿಗೆ ಧನ್ಯವಾದಗಳು. ಅಂಗಣದಿಂದ ಹೊರಗಿದ್ದರೂ ತೆಂಡುಲ್ಕರ್ ನಿರಂತರವಾಗಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ’ ಎಂದು ಮುಖ್ಯ ಮಂತ್ರಿ ಮುಫ್ತಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.