ಸಿಂಧು-ಯಮಾಗುಚಿ ಮತ್ತೆ ಮುಖಾಮುಖೀ
ಜಪಾನ್ ಓಪನ್ ಬ್ಯಾಡ್ಮಿಂಟನ್
Team Udayavani, Jul 26, 2019, 5:36 AM IST
ಟೋಕಿಯೊ: ಪಿ.ವಿ. ಸಿಂಧು ಮತ್ತು ಬಿ. ಸಾಯಿಪ್ರಣೀತ್ “ಜಪಾನ್ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಗೆ ಕಾಲಿಟ್ಟಿದ್ದಾರೆ. ಇಲ್ಲಿ ಸಿಂಧು ಪುನಃ ಜಪಾನಿನ ಅಕಾನೆ ಯಮಾಗುಚಿ ಸವಾಲನ್ನು ಎದುರಿಸಬೇಕಿದೆ.
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ ಕೂಡ ಓಟ ಮುಂದುವರಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್. ಪ್ರಣಯ್ ದ್ವಿತೀಯ ಸುತ್ತಿನಲ್ಲಿ ಎಡವಿದ್ದಾರೆ.
ಸಿಂಧು 3 ಗೇಮ್ ಹೋರಾಟ
ಗುರುವಾರದ ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಪಿ.ವಿ. ಸಿಂಧು ಭಾರೀ ಹೋರಾಟ ನಡೆಸಿ ಜಪಾನಿನ ಅಯಾ ಒಹೊರಿ ಅವರನ್ನು 11-21, 21-10, 21-13 ಅಂತರದಿಂದ ಹಿಮ್ಮೆಟ್ಟಿಸಿದರು. ಒಂದು ಗಂಟೆ ಕಾಲ ಇವರ ಸ್ಪರ್ಧೆ ಸಾಗಿತು. ಮೊದಲ ಗೇಮ್ ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಸಿಂಧು, ಮುಂದಿನೆರಡು ಗೇಮ್ಗಳಲ್ಲಿ ಜಪಾನೀ ಆಟಗಾರ್ತಿಯ ಮೇಲುಗೈಗೆ ಯಾವ ಅವಕಾಶವನ್ನೂ ನೀಡಲಿಲ್ಲ. ಇದರೊಂದಿಗೆ ಒಹೊರಿ ವಿರುದ್ಧ ಸಿಂಧು 8-0 ಅಜೇಯ ದಾಖಲೆ ಕಾಯ್ದುಕೊಂಡಂತಾಯಿತು.
ಕ್ವಾ. ಫೈನಲ್ನಲ್ಲಿ ಸಿಂಧು 4ನೇ ಶ್ರೇಯಾಂಕದ ಜಪಾನಿ ಆಟಗಾರ್ತಿ ಯಮಾಗುಚಿ ಸವಾಲನ್ನು ಎದುರಿಸ ಬೇಕಿದೆ. ಇತ್ತೀಚೆಗಷ್ಟೇ “ಇಂಡೋನೇಶ್ಯ ಓಪನ್ ಫೈನಲ್’ನಲ್ಲಿ ಅವರು ಸಿಂಧು ವಿರುದ್ಧ ಜಯ ಸಾಧಿಸಿದ್ದರು. ಇದಕ್ಕೆ ಸಿಂಧು ಸೇಡು ತೀರಿಸಿಕೊಳ್ಳುವರೇ ಎಂಬುದೊಂದು ಕುತೂಹಲ.
ಮತ್ತೂಂದು ಪಂದ್ಯದಲ್ಲಿ ಅಕಾನೆ ಯಮಾಗುಚಿ ಚೀನದ ಚೆನ್ ಕ್ಸಿಯಾವೊ ಕ್ಸಿನ್ ಅವರನ್ನು 21-15, 21-14ರಿಂದ ಮಣಿಸಿದರು.
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ 3 ಗೇಮ್ಗಳ ಹೋರಾಟದ ಬಳಿಕ ಚೀನದ ಕೈ ಕ್ಸಿಯಾಂಗ್ ಹುವಾಂಗ್-ಚೆಂಗ್ ಲಿಯು ಅವರನ್ನು 15-21, 21-11, 21-19 ಅಂತರದಿಂದ ಸೋಲಿಸಿದರು. ಇವರಿನ್ನು ಕ್ವಾ. ಫೈನಲ್ನಲ್ಲಿ ಜಪಾನಿನ ಟಕೆಶಿ ಕಮುರ-ಕೀಗೊ ಸೊನೊಡ ವಿರುದ್ಧ ಸೆಣಸಲಿದ್ದಾರೆ.
ಪ್ರಣೀತ್-ಸುಗಿಯಾರ್ಟೊ ಫೈಟ್
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬಿ. ಸಾಯಿಪ್ರಣೀತ್ ಜಪಾನಿನ ಕಂಟಾ ತ್ಸುನೆಯಾಮಾ ಅವರನ್ನು 21-13, 21-16 ಅಂತರದಿಂದ ಪರಾಭವಗೊಳಿಸಿದರು. ಮುಕ್ಕಾಲು ಗಂಟೆ ಕಾಲ ಇವರ ಆಟ ಸಾಗಿತು. ಸಾಯಿ ಪ್ರಣೀತ್ ಇಂಡೋನೇಶ್ಯದ ಟಾಮಿ ಸುಗಿಯಾರ್ಟೊ ಅವರನ್ನು ಎದುರಿಸಲಿದ್ದಾರೆ. ಮೊದಲ ಸುತ್ತಿನಲ್ಲಿ ಕೆ. ಶ್ರೀಕಾಂತ್ ಅವರನ್ನು ಮಣಿಸಿದ್ದ ಎಚ್.ಎಸ್. ಪ್ರಣಯ್ ಆಟ ದ್ವಿತೀಯ ಸುತ್ತಿನಲ್ಲಿ ಮುಗಿದಿದೆ. ಅವರನ್ನು ಡೆನ್ಮಾರ್ಕ್ನ ರಾಸ್ಮಸ್ ಜಿಮೆR 21-9, 21-15 ಅಂತರದಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?
Politics: ಅಮಿತ್ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ