ಉನಾದ್ಕತ್ಗೆ ತಂಡದ ಬಾಗಿಲು ಎಂದೋ ಮುಚ್ಚಿದೆ!
Team Udayavani, May 27, 2021, 12:05 AM IST
ಹೊಸದಿಲ್ಲಿ: ಭಾರತ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಆಯ್ಕೆ ಸಮಿತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸೌರಾಷ್ಟ್ರದ ವೇಗಿ ಜೈದೇವ್ ಉನಾದ್ಕತ್ಗೆ ಎಂದೋ ಭಾರತ ತಂಡದ ಬಾಗಿಲು ಮುಚ್ಚಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರೊಬ್ಬರು ಹೇಳಿದ್ದು ಈಗ ಸುದ್ದಿಯಾಗುತ್ತಿದೆ.
ಇಂಥದೊಂದು ಹೇಳಿಕೆ ನೀಡಿದವರು ಭಾರತದ ಮಾಜಿ ಬೌಲರ್ ಹಾಗೂ ಸೌರಾಷ್ಟ್ರ ತಂಡದ ಮುಖ್ಯ ಕೋಚ್ ಆಗಿರುವ ಕರ್ಸನ್ ಘಾವ್ರಿ. 2019-20ರ ರಣಜಿ ಟ್ರೋಫಿ ವೇಳೆ ಬಿಸಿಸಿಐ ಆಯ್ಕೆಗಾರರ ಬಳಿ ಉನಾದ್ಕತ್ಗೆ ಅವಕಾಶ ಸಿಗುವ ಬಗ್ಗೆ ನಡೆಸಿದ ಚರ್ಚೆಯೊಂದನ್ನು ಫಾವ್ರಿ ಬಹಿರಂಗಪಡಿಸಿದ್ದಾರೆ.
“2019-20ರ ರಣಜಿ ಟ್ರೋಫಿ ಫೈನಲ್ ವೇಳೆ ಆಯ್ಕೆಗಾರರ ಬಳಿ ಉನಾದ್ಕತ್ ಬಗ್ಗೆ ಮಾತನಾಡಿದ್ದೆ. ಆ ವರ್ಷ ಅವರು 60ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು. ಹೀಗಾಗಿ ಕನಿಷ್ಠ ಭಾರತ “ಎ’ ತಂಡಕ್ಕಾದರೂ ಅವರನ್ನು ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದೆ. ಆದರೆ ಇದಕ್ಕೆ ಉತ್ತರಿಸಿದ್ದ ಆಯ್ಕೆಗಾರರೊಬ್ಬರು, 30 ಆಟಗಾರರ ತಂಡ ರಚಿಸಿದರೂ ಅದರಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದರು. ಯಾಕೆ ಎಂದು ಪ್ರಶ್ನಿಸಿದೆ. ಅವರಿಗೆ ಈಗಾಗಲೇ 32 ವರ್ಷವಾಗಿದೆ. ಹೀಗಾಗಿ ಭಾರತ ತಂಡದ ಬಾಗಿಲು ಅವರಿಗೆ ಎಂದೋ ಮುಚ್ಚಿದೆ…’ ಎಂದು ಹೇಳಿದ್ದಾಗಿ ಕರ್ಸನ್ ಘಾವ್ರಿ ತಿಳಿಸಿದ್ದಾರೆ.
ಇದನ್ನೂ ಓದಿ :ಸಾವಿರಾರು ಕೋಟಿ ರೂ. ಸಾಲ ವಂಚನೆ ಆರೋಪಿ ಮೆಹುಲ್ ಚೋಕ್ಸಿ ಕೊನೆಗೂ ಸೆರೆ
“ಹಿರಿಯ ಆಟಗಾರನ ಬದಲು ಕಿರಿಯ ವೇಗಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅವರು ಕನಿಷ್ಠ 8-10 ವರ್ಷ ಕಾಲ ಭಾರತ ತಂಡದ ಪರ ಆಡಬಲ್ಲರು. ಒಂದೊಮ್ಮೆ ಉನಾದ್ಕತ್ ಅವರನ್ನು ಆಯ್ಕೆ ಮಾಡಿದರೆ ಎಷ್ಟು ವರ್ಷಗಳ ಕಾಲ ಆತ ಆಡಬಲ್ಲ…’ ಎಂದು ಆಯ್ಕೆಗಾರ ಹೇಳಿದ್ದಾಗಿ ಘಾವ್ರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು